Saturday 7 November 2015

ಚಿಂತನೆಯಿಂದ ಅಳಿಯದು ಉಳಿವಿನ ಚಿಂತೆ...


“ದೂರದ ಆಂಧ್ರಪ್ರದೇಶಕ್ಕೆ ಸೇರಿದ  ರಾಯದುರ್ಗದ ಮೋಣಕಾಲ್ಮೂರಿನಿಂದ 11 ಕಿ.ಮೀ ದೂರದಲ್ಲಿರುವ ಆಂಧ್ರಕರ್ನಾಟಕ ಗಡಿಭಾಗದ ಊರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ”.
 ಹೀಗೋಂದು ಅಚ್ಚರಿಯ ಸುದ್ಧಿ ಕೇಳಿ ಪುಳಕಗೊಂಡೆ...
                           ನಿಜ ಕೇವಲ ರಾಯದುರ್ಗವಷ್ಟೇ ಅಲ್ಲದೇ ರಾಜ್ಯದ ಗಡಿ ಭಾಗದಲ್ಲಿರುವ ಹಿರಿಯೂರು, ಚಳ್ಳಕೇರೆ, ಮೊಣಕಾಲ್ಮುರು ತಾಲ್ಲೂಕುಗಳು, ಅಲ್ಲಿನ ಅನೇಕ ಹಳ್ಳಿಗಳು, ಮೊಣಕಾಲ್ಮೂರಿನ ನೆರೆಯ ತಾಲ್ಲೂಕುಗಳು, ನೆರೆಯ ಆಂಧ್ರಪ್ರದೇಶದ ಹಳ್ಳಗಳೊಂದಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಭಾವನಾತ್ಮಕವಾಗಿ ಪರಸ್ಫರ ಸಂಬಂಧವನ್ನು ಹೊಂದಿರುವುದು ಮಾತ್ರವಲ್ಲದೇ, ಗಡಿಭಾಗದಲ್ಲಿರುವ ಏರಡೂ ರಾಜ್ಯಗಳ ಹಳ್ಳಿಗಳಲ್ಲಿ  ಆಚಾರ, ವಿಚಾರ, ಸಂಸ್ಕøತಿಗಳು ಅದೆಲ್ಲಕ್ಕಿಂತ ಹೆಚ್ಚಾದ ಬುಡಕಟ್ಟು ಸಂಸ್ಕೃತಿ ಒಂದೇ ರೀತಿಯಲ್ಲಿವೆ. ಒಂದು ಮಾಹಿತಿಯ ಪ್ರಕಾರ ಇಡೀ ಆಂಧ್ರದಾದ್ಯಂತ 84 ಕನ್ನಡ ಶಾಲೆಗಳಿದ್ದು, ಅಲ್ಲಿನ ಮಕ್ಕಳು ಕನ್ನಡ ವಿಧ್ಯಾಭ್ಯಾಸವನ್ನೇ ಮಾಡುತ್ತಿದ್ದಾರಂತೆ. ಅಷ್ಟೇ ಅಲ್ಲದೆ ಗಡಿನಾಡಭಾಗದಲ್ಲಿರುವ ಜನ ಕನ್ನಡ ಸಾಹಿತ್ಯವನ್ನು ಓದುವ ಬರೆಯುವ ಹಾಗೂ ಅದರ ಬಗ್ಗೆ ಮಾತನಾಡುವಂತಹ ಅಭಿರುಚಿಯನ್ನು ಹೆಚ್ಚು ಮೈಗೂಡಿಸಿಕೊಂಡಿದ್ದು, ಅಲ್ಲಿ ಸುಮಾರು ಜನ ಕನ್ನಡ ಸಾಹಿತಿಗಳನ್ನು ನಾವು ಕಾಣಬಹುದಾಗಿದೆ ಎಂದರೆ ಅಚ್ಚರಿಯಾಗದೇ ಇರಲು ಸಾಧ್ಯವೇ ನೀವೆ ಹೇಳಿ... ನೋಡಿ ಕನ್ನಡ ಪ್ರೀತಿ ಅಂದರೆ ಇದು. ಗಡಿನಾಡಿನಲ್ಲಿದ್ದುಕೊಂಡು ನಾಡು ನುಡಿಯ ಕಂಪನ್ನು ಉಳಿಸುತ್ತಿರುವ, ಬೆಳೆಸುತ್ತಿರುವ ಅವರ ಮುಂದೆ ರಾಜಧಾನಿಯಲ್ಲಿದ್ದುಕೊಂಡು ಪರಭಾಷೆಯನ್ನು ಉಪಯೋಗಿಸುತ್ತಿರುವ ನಾವುಗಳು ಶೂನ್ಯರೆಂದರೆ ಯಾವ ತಪ್ಪಿಲ್ಲ ಬಿಡಿ...
               ನಿಜಕ್ಕೂ ಸತ್ಯ, ಕನ್ನಡ ಭಾಷೆ, ಅದರ ಉಳಿಯುವಿಕೆಯ ಬಗ್ಗೆ ಈಗಾಗಲೇ ಅನೇಕ ಬಾರಿ ಆಂದೋಲನ, ಜಾಗೃತಿಗಳನ್ನು ನಮ್ಮಲ್ಲಿ ನಾವೇ ಎತ್ತಿಕೊಂಡಿದ್ದರೂ, ಅದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಭಿತ್ತಿಕೊಂಡಿದ್ದರೂ, ಎಲ್ಲವೂ ಮುಗಿದ ಮೇಲೆ ನಾವು ಮೊರೆಹೋಗುವುದು ಅನ್ಯಭಾಷೆಗೆ!!!. ಏನು ಮಾಡಲಾಗದು ಸರ್, ವ್ಯವಹರಿಸಲು, ಆಧುನಿಕತೆಯ ಸರಪಳಿಯಲ್ಲಿ ಬದುಕಲು ಅನ್ಯಭಾಷೆ ಬೇಕೆ ಬೇಕು ಎನ್ನುತ್ತೀರಾ!?... ಇರಬಹುದು ಆದರೆ ಅದನ್ನೇ ನಮ್ಮ ಮುಂದಿನ ತಲೆಮಾರಿಗೆ ವರ್ಗಾಯಿಸಿ, ನೋಡಪ್ಪ ಅದನ್ನು ಬಿಟ್ಟರೆ ಸಾಧನೆ ಸಾಧ್ಯವಿಲ್ಲ. ನಮ್ಮ ಭಾಷೆ ಬೇಕಾಗಿಲ್ಲ ಅನ್ನುತ್ತಿರುವುದು ಎಷ್ಟು ಸರಿ!? ನೀವೆ ಹೇಳಿ!???. ನಾವು ಇಲ್ಲೇ ಹುಟ್ಟಿ ಇಲ್ಲೇ ಬೆಳೆದು, ಇಲ್ಲಿನ ಅನ್ನ ನೀರನ್ನೇ ಉಪಯೋಗಿಸಿಕೊಂಡು ನಮ್ಮ ತನವನ್ನೇ ಮರೆತು ಹೆತ್ತವ್ವನ ಭಾಷೆಯನ್ನೇ ಕಡೆಗಣಿಸುತ್ತಿರುವಾಗ, ರಾಜ್ಯದ ಗಡಿ ಭಾಗದಲ್ಲಿ ಇನ್ನೊಂದು ಭಾಷೆಯ ಕಲಿಕೆಯ ಒತ್ತಡವಿದ್ದರೂ ಕನ್ನಡದ ಭಾಷೆಯೇ ಬೇಕು ಎಂದು ಅತೀವ ಆಸಕ್ತಿ ವಹಿಸಿ, ವ್ಯವಹರಿಸಿ, ಶಿಕ್ಷಣ ವಿನಿಮಯಿಸಿಕೊಳ್ಳುತ್ತಿರುವ ಗಡಿನಾಡ ಜನರಿಗೆ ನಿಜಕ್ಕೂ ಸೆಲ್ವ್ಯುಟ್ ಹೊಡೆಯಬೇಕೆನಿಸುತ್ತದೆ.
ಕರ್ನಾಟಕದಲ್ಲಿ ಕನ್ನಡ ಉಳಿಸುವ ಬಗ್ಗೆ, ಬೆಳೆಸುವ ಬಗ್ಗೆ ಚರ್ಚೆ ಆಂದೋಲನಗಳು ನಡೆಯುತ್ತಲೇ ಇರುತ್ತವೆ. ವಿಚಾರವಾದಿಗಳು, ಬುದ್ಧಿಜೀವಿಗಳು ಭಾಷಣ ಬಿಗಿಯುತ್ತಲೇ ಇರುತ್ತಾರೆ. ಆದರೂ ಚಿಂತನೆಗಳಿಂದ ಕನ್ನಡz ಉಳಿವಿನ ಚಿಂತೆ ಮಾತ್ರ ಅಳಿಯುತ್ತಿಲ್ಲ. ಯಾವ ಚಿಂತನೆಗಳು ಕಾರ್ಯರೂಪಕ್ಕೆ ಇಳಿಯದ ಕಾರಣ ಕನ್ನಡದ ಸ್ಥಿತಿ ಇನ್ನೂ ಚಿಂತಾಕ್ರಾಂತವಾಗಿಯೇ ಇದೆ. ಮಾತೆತ್ತಿದರೆ ಕನ್ನಡ ಎಂದು ಹೋರಾಡುವವರೆ ತಮ್ಮ ಮಕ್ಕಳನ್ನು ಒಂಗ್ಲೀಷ್ ಸ್ಕೂಲ್‍ಗೆ ಸೇರಿಸುತ್ತಾರೆ, ದಿನದ ವ್ಯವಹಾರನ್ನು ಅನ್ಯಭಾಷೆಯ ಗೋಜಿಗೆ ಬಿದ್ದು ದಣಿವಾರಿಸಿಕೊಳ್ಳುತ್ತಿದ್ದಾರೆ. ಹೋರಾಟದ ಸಂಖ್ಯೆ, ಹೋರಾಟಗಾರರ ಸಂಖ್ಯೆ, ಅಳಿವಿ ಉಳಿವಿನ ಬಗ್ಗೆ ಮಾತನಾಡುವವರ ಸಂಖ್ಯೆ, ರಾಜಕೀಯ ಪಕ್ಷದ ಕನ್ನಡ ಹೇಳಿಕೆಯ ಕಂತೆ, ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೊಗುತ್ತಿದ್ದರೂ, ನಾಡಿನಲ್ಲಿರುವ ಇಂಗ್ಲೀಷ್ ಶಾಲೆಗಳ ಸಂಖ್ಯೆ, ಅಲ್ಲಿಗೆ ಮಕ್ಕಳನ್ನು ಕಳಿಸುವ ಪೋಷಕರ ಸಂಖ್ಯೆ, ದಿನೇ ದಿನೇ ಹೆಚ್ಚುತ್ತಿರುವ ಅನ್ಯಭಾಷೆಯ ಅಳವಡಿಕೆ, ಯಾವುದು ಕುಗುತ್ತಿಲ್ಲ. ಇಷ್ಟೇಲ್ಲಾ ಧ್ವಂಧ್ವಭಯದ ನಡುವೆಯೂ ಮತ್ತೊಂದು ರಾಜ್ಯೋತ್ಸವ ಬಂದೇ ಬಿಟ್ಟಿದೆ. ಹೋದ ವರ್ಷ ಹಾಕಿದ್ದ ಶಪತಗಳೆಲ್ಲವೂ ಅಲ್ಲೆ ಸತ್ತಿವೆ. ಭಯವಿಲ್ಲ ಈ ವರ್ಷ ಇನ್ನಷ್ಟೂ ಮಾರುದ್ದದ ಶಪತಗಳು ರಾರಾಜಿಸುತ್ತವೆ ಸಂದೇಹವೆ ಬೇಡ. ರಾಜಕೀಯ ಪುಡಾರಿಗಳೇ ದಯವಿಟ್ಟು ನಿಮ್ಮಲ್ಲೊಂದು ವಿನಂತಿ. ನಿಮ್ಮ ಬೆಳೆ ಬೇಯಿಸಿಕೊಳ್ಳಲು ನಮ್ಮ ತಾಯ ನುಡಿಯನ್ನು ಅಸ್ತ್ರವಾಗಿಸಿಕೊಳ್ಳದಿರಿ...
ಮುಖ್ಯವಾಗಿ ರಾಜಧಾನಿಯಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಕನ್ನಡ ಕಲಿಸುವ ಕಾರ್ಯ ಇಂದಿನ ತುರ್ತು ಅಗತ್ಯವಾಗಿ ಬಿಟ್ಟಿದೆಯೇನೊ ಎಂದೆನಿಸುವ ಸುಪ್ತತೆಗೆ ತೆರಳಿರುವುದು ವಿಷಾಧಕರ. ಇದಕ್ಕೆ ಕಾರಣ ಕನ್ನಡ ಭಾರದ ಅನ್ಯಭಾಷೆಯ ಜನ ಇಲ್ಲಿಗೆ ವಲಸೆ ಬಂದಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಕನ್ನಡ ಕಲಿಸುವ ಶಾಲೆಗಳ ಕೊರತೆ ಎನ್ನುವುದು ಎದ್ದು ಕಾಣುತ್ತದೆ.
ಸುಮಾರು 2000 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಕನ್ನಡ ನೆಲಕ್ಕೆ ಗಟ್ಟಿತನವಿದೆ, ಭವ್ಯ ಪರಂಪರೆ ಇದೆ. ಆದರೆ ನಾವು ಸ್ವಯಂ ಪ್ರೇರಿತರಾಗಿ ಉಳಿಸಿ ಬೆಳೆಸುತ್ತಿಲ್ಲ ಅಷ್ಟೆ. ನಮ್ಮ ಇಡೀ ಭಾರತ ದೇಶದಲ್ಲಿ ನೂರಾರು ಭಾಷೆಗಳು ಸಾವಿರಾರು ವರ್ಷಗಳಿಂದ ಸಹಭಾಳ್ವೆ ನಡೆಸುತ್ತಿದ್ದದ್ದು ನಿಮಗೆ ಗೊತ್ತೆ ಇರಬಹುದು.  ಅದನ್ನು 1929ರಲ್ಲಿ ಲೆಕ್ಕಾಚಾರದ ಆಯಾಮಕ್ಕೆ ತಂದ ಗ್ರಿಯರ್ಸನ್ ಎಂಬಾತ  ಸುಮಾರು 139 ಭಾಷೆಗಳು, 544 ಉಪಭಾಷೆಗಳು ಇವೆಯೆಂದು ಮೊಟ್ಟ ಮೊದಲಬಾರಿಗೆ ಭಾಷಾ ಪರಿವೀಕ್ಷಣೆಯಲ್ಲಿ ಗುರುತಿಸಿ ತಿಳಿಸಿದ್ದ. ನಂತರ 1961ರ ಜನಗನತಿಯು 1652 ವರ್ಗೀಕೃತ ಭಾಷೆಗಳು, 184 ಅವರ್ಗೀಕೃತ ಭಾಷೆಗಳು ಇವೆಯೆಂದು ಗುರುತಿಸಿತು. ಆನಂತರದಲ್ಲಿ ಒಟ್ಟು 22 ಭಾಷೆಗಳನ್ನು ಭಾರತೀಯ ಸಂವಿಧಾ£ದÀ 8ನೇ ಅನುಸೂಚಿಯ ಭಾಷೆಯಲ್ಲಿ ಸೇರಿಸಿದ್ದು ಇದರಲ್ಲಿ ಕನ್ನಡ ಭಾಷೆಯೂ ಒಂದು ಎನ್ನುವುದು ನಮ್ಮ ಹೆಮ್ಮೆಯ ವಿಷಯವಾಗಿದೆ. ಇಂತಹ ಪುರಾತÀನ ಮಹತ್ವವಿರುವ, ಪ್ರತಿಶತ 99.99ರಷ್ಟು ವೈಜ್ಞಾನಿಕ ಹಾಗೂ ತರ್ಕಬದ್ಧವಾದ ನಮ್ಮ ಭಾಷೆಯನ್ನು ಉಳಿಸಿ-ಬೆಳೆಸಬೇಕಾದ ನಾವೇ ಇಂದು ಮೂಲೆ ಸೇರುತ್ತಿರುವುದು ನೋವಿನ ವಿಚಾರ. ಏನಾದರಾಗಲಿ ಎದ್ದು ಹೊರಾಡೋಣ ನಮ್ಮ ನಾಡು ನುಡಿಯನ್ನು ಎತ್ತಿ ಬೆಳೆಸೋಣ. ಇದು ನಮ್ಮದು ಎನ್ನುವುದಕ್ಕೆ ಹೆಮ್ಮೆ ಪಡೋಣ.
ಉಳಿಸಿ ಬೆಳೆಸುವುದ್ಹೇಗೆ?
ಲೇಖನಗಳು, ಭಾಷಣಗಳು, ಜಾಗ್ರತಿ ಸಭೆಗಳು ಅನಂತವಾಗಿ ಕೇಳಿಬರುತ್ತಲೇ ಇರುತ್ತವೆ ಆದರೆ ಅದನ್ನು ಕಾರ್ಯರೂಪಕ್ಕೆ ತರುವ ಕುರಿತು ಚಿಂತನೆ ನಡೆಯುವುದಿಲ್ಲ. ಈ ಬಗ್ಗೆ ಸಾಕಷ್ಟು ಗೊಂದಲ, ಅಡೆ-ತಡೆಗಳಿದ್ದರೂ, ನಮ್ಮ ನಿಟ್ಟಿನಲ್ಲಿ ಒಂದಿಷ್ಟು ಪ್ರಯತ್ನ ಮಾಡುವುದು ನಾಳೆಯ ಕನ್ನಡಕ್ಕೆ ಒಳಿತೆನ್ನಿಸುತ್ತದೆ. ಈಗಾಗಲೇ ‘ಕನ್ನಡ ದ್ವೇಷಿಗಳ ವಿರುದ್ಧ ಕರ್ನಾಟಕ’ ಎಂಬ ಗುಂಪೊಂದು ತನ್ನದೇ ಒಂದಿಷ್ಟು ಜನರ ಸಂಘದೊಂದಿಗೆ ಕನ್ನಡ ಭಾಷೆಯ ನಾಳಿನ ಉಳಿವಿಗಾಗಿ ತಮ್ಮ ಕೈಲಾದ ಯತ್ನವನ್ನು ಮಾಡುತ್ತಿದೆ. ಯುದ್ಧರಂಗಕ್ಕಿಳಿಯದೇ ಯುದ್ಧ ಗೆಲ್ಲುವುದು  ಅಸಾಧ್ಯ ಎನ್ನುವಂತೆ ನಾವು ನಮ್ಮ ಭಾಷೆಗಾಗಿ ಕಣಕ್ಕಿಳಿದು ಹೋರಾಡಬೇಕು ಅದರಲ್ಲಿ ಯಾವ ಮುಲಾಜೂ ಬೇಡ. ರಾಜ್ಯ ರಾಜಧಾನಿ ಬೆಂಗಳೂರನ್ನು ತುಂಬುತ್ತಿರುವ ಅನ್ಯಭಾಷಿಕರನ್ನು ಕನ್ನಡ ಕಲಿಯುವಂತೆ ಪ್ರೋತ್ಸಾಹಿಸುವುದರ ಜೊತೆಗೆ ಭಾಷಾಭಿಮಾನವನ್ನು ಬೆಳೆಸಬೇಕು. ಕನ್ನಡ ನಾಡಿನ ಸಂಸ್ಕ್ರತಿ, ಸಾಹಿತ್ಯ ಶ್ರೀಮಂತಿಕೆಯನ್ನು ಹೊಗಳುವ ಮತ್ತು ಹಬ್ಬಿಸುವ ಕೆಲಸಕ್ಕೆ ನಮ್ಮ ಭಾಷಣಿಕರು, ನುಡಿಪ್ರೇಮಿಗಳು, ಸಂಘಟನೆಗಳು  ಸೀಮಿತವಾಗದೇ ನಮ್ಮ ಭಾಷೆಯ ಗತ್ತನ್ನು ಕಾರ್ಯರೂಪzಲ್ಲಿ ತೋರಿಸಿ, ಅವ್ಯಾಹತವಾಗಿ ತೋರಿಸಿ ಎಲ್ಲರಲ್ಲೂ, ಕನ್ನಡವೆ ಸತ್ಯ, ಕನ್ನಡವೇ ನಿತ್ಯವೆನ್ನುವ ಬೀಜವನ್ನು ಭಿತ್ತಬೇಕು. ಅಷ್ಟೇ ಅಲ್ಲದೇ ನಗರದ  ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ ಸಂಘ ಸಂಸ್ಥೆಗಳ ಸಮೀಕ್ಷೆ ಮಾಡಿ ಅಲ್ಲಿನ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ, ನಾಡಿನ ಗಡಿ ಪ್ರದೇಶದಲ್ಲಿರುವ ಶಾಲೆಗಳಿಗೆ ಸರಿಯಾದ ಮೂಲಭೂತ ವ್ಯವಸ್ಥೆ ಹಾಗೂ ಅಗತ್ಯ ಪಠ್ಯಪುಸ್ತಕಗಳ ಸೌಕರ್ಯವನ್ನು ಸರ್ಕಾರ ಓದಗಿಸಬೇಕು. ಕನ್ನಡ ಭಾರದಿರುವವರು ದಿನೇ ದಿನೆ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು ಭಾಷಾಮಾಲಿನ್ಯಕ್ಕೆ ನೇರ ಕಾರಣವಾಗುತ್ತಿದೆ. ಅದಕ್ಕಾಗಿ ಎಲ್ಲರೂ ಸುಲಭವಾಗಿ ಅರಿಯುವ ಹಾಗೂ ಸಂಭಾಷಿಸುವಂತಹ ಸ್ವಯಂ ಭೋಧನ ಕಲಿಕಾ ಪುಸ್ತಕಗಳನ್ನು ಪ್ರಕಟಿಸಬೇಕು. ಕಾರ್ಮಿಕರ ಅನಕ್ಷರಸ್ತ ಮಕ್ಕಳಿಗೆ ಕನ್ನಡ ಭೋಧಿಸುವ ಕಾರ್ಯ ಸರ್ಕಾರ ರೂಪಿಸಬೇಕು.ಕನ್ನಡ ಶಾಲೆಗಳ ಬೆಳವಣಿಗೆಗೆ ಶ್ರಮಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡಿಗರು ಕನ್ನಡ ಪತ್ರಿಕೆಗಳನ್ನು ಮತ್ತು ಕನ್ನಡ ಪುಸ್ತಕಗಳನ್ನು ಕೊಂಡು ಓದುವ  ಸಂಸ್ಕøತಿಯನ್ನು ಬೆಳೆಸಿಕೊಳ್ಳಬೇಕು. ಅಂಗಡಿ ಮುಂಗಟ್ಟುಗಳ ಮುಂದೆ ಬರೆಯುವ ನಾಮಫಲಕ ಕಡ್ಡಾಯವಾಗಿ ಕನ್ನಡದಲ್ಲೇ ಲಿಪಿಯ ಸೌಂದರ್ಯ ಕೆಡದಂತೆ ಬರಯುವ ಕೆಲಸವನ್ನು ಕಡ್ಡಾಯಗೊಳಿಸಬೇಕು.
ವಾಹನದ ತೆಕ್ಕೆಗೆ ಕನ್ನಡ ಭಾವುಟವನ್ನು ಹಾಕಿ ಒಡಾಡುವುದರಿಂದ, ತಮಿಳು, ಮರಾಠಿ ಜನರಿಗೆ ಹೊಡೆಯುವುದರಿಂದ, ಅನ್ಯರಾಜ್ಯದವರ ಪ್ರತಿಮೆ ಅನಾವರಣ ಮಾಡುವುದನ್ನು ನಿಲ್ಲಿಸುವುದರಿಂದ ,ದುಂದು ವೆಚ್ಚದ ರಾಜ್ಯೋತ್ಸವದ ಆಚರಣೆಯಿಂದ, ಬೇರೆ ಭಾಷೆಯ ಚಲನಚಿತ್ರ ಟಿ.ವಿ. ಚಾನೆಲ್ ಗಳನ್ನು ನಿರ್ಭಂಧಿಸುವುದರಿಂದ ಕನ್ನಡದ ಬೆಳವಣಿಗೆಯಾಗುತ್ತದೆ ಎನ್ನುವುದು  ಕೇವಲ ಭ್ರಮೆ ಮಾತ್ರ. ಈ ವಿಧಾನಗಳೆಲ್ಲ ಒಂದು ಸಾರಿ ಕನ್ನಡಿಗರನ್ನು ಭಾವನಾತ್ಮಕವಾಗಿ ಪ್ರತಿಕ್ರಿಯಿಸುವಂತೆ ಮಾಡಬಹುದೇ ವಿನಃ ಬೇರೇನೂ ಸಾಧಿಸದು.
ಇನ್ನಾದರೂ ಮಾತು ಕಡಿಮೆ ಮಾಡಿ ಕೈಗೊಂಡಿರುವ, ಹಿಂದೆ ವಾಚಸಿಕೊಂಡಿರುವ ಮಾತುಗಳ ನೆರವೇರಿಕೆಯನ್ನು ಕಾರ್ಯಗತಗೊಳಿಸಲು ಪಣತೊಡೋಣ. ಅದರ ಮೂಲಕ ನಮ್ಮ ನಾಡು-ನುಡಿಯನ್ನು ಉಳಿಸೋಣ ಬೆಳೆಸೋಣ ಏನಂತೀರಾ!?...

.................................ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು................................................

No comments:

Post a Comment