Friday 6 November 2015

ಅಕ್ರಮ ಮಧ್ಯ ಮಾರಾಟ, ಮಂದಿಗೆ ಮಾರಣವಾಗುತ್ತಿದೆ.

ಹಳ್ಳಿಗಳ ಮೂಲೆ ಮೂಲೆಯ ಜನತೆಯಲ್ಲಿ ಬೀಡು ಬಿಟ್ಟ ಆತಂಕ
ಇದು ಸೆಕೆಂಡ್ಸ್ ಮಧ್ಯವಲ್ಲ ಬದಲಾಗಿ ನಕಲಿ ಮಧ್ಯ
ಇದೇ ರೀತಿ ಗ್ರಾಮೀಣ ಭಾಗದಲ್ಲಿ ತೀರ್ಥ ಸಮಾರಾಧನೆ ಮಿತಿಮಿರಿದರೆ ಮುಂದಾಗುತ್ತದೆ  ವ್ಯಸನಿಯ ವೈಕುಂಟ ಸಮಾರಾಧನೆ
ಪಾಕೆಟ್ ಹೋಯ್ತು ಬಾಟಲಿ ಬಂತು


         ಕಳೆದ ಏಳೆಂಟು ವರ್ಷಗಳ ಹಿಂದೆ ರಾಜ್ಯ ಸರಕಾರ ಸಾರಾಯಿ ನಿಷೇಧ ಮಾಡಿದಾಗ ಸರಕಾರವೇನೋ ಘÀನಂಧಾರಿ ಕೆಲಸ ಮಾಡಿತ್ತು ಎಂಬಂತೆ ಎಲ್ಲರೂ ಬೇಷ್ ಎಂದಿದ್ದೂ ಈಗಲೂ ನಿಮಗೆಲ್ಲಾ ನೆನಪಿರಬಹುದು. ಅಂದಿನ ಕಾಲಘಟಕ್ಕೆ  ಆ ನಿಷೇಧದ ನಿರ್ಧಾರ ರಾಜ್ಯಕ್ಕೆ ಒಳ್ಳೆಯದು ಕೂಡ ಆಗಿತ್ತು. ಆದರೆ ಇಂದು ಕರಾವಳಿ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲೂ ಅಕ್ರಮ ಮಧ್ಯ ಮಾರಾಟದ ಜಾಲ ಭುಗಿಲೆದ್ದಿದ್ದು, ಈಗÀದನ್ನು ಅದನ್ನು ಹತ್ತಿಕ್ಕದಿದ್ದರೆ ನಾಳೆಯ ದಿನಗಳಲ್ಲಿ ಅದು ಗ್ರಾಮೀಣವಾಸಿಗಳ ಜನ ಜೀವನವನ್ನು ತತ್ತರಿಸಿ ಬಿಡುವುದರಲ್ಲಿ ಯಾವ ಸಂಶಯವಿಲ್ಲ. ಅಂದದರ ನಿಷೇಧ ಕಂಡಾಗ ಎಷ್ಟೋ ಮನೆಗಳಲ್ಲಿ ನಗುವಿನ ಅಲೆ ತೇಲಿತ್ತು, ಆದರೆ ಇಂದು ಆ 10 ರುಪಾಯಿಗೆ ಸಿಗುತ್ತಿದ್ದ ಸಾರಾಯಿ ಪಾಕೆಟ್‍ಗಳಾದರೂ ವಾಸಿಯಾಗಿತ್ತು ರೀ, ನೂರಿನ್ನೂರು ರೂಪಾಯಿಯ ಬಾರ್ ಬಾಟಲಿಯ ಸಹವಾಸದಿಂದ ಗಂಜಿ ನೀರಿಗೂ ಪರದಾಡುವಂತಾಗಿದೆ ಎನ್ನುವ ಪರಿಸ್ಥಿತಿ ಎದುರಾಗಿದೆ!.
ಅಂದು ಹೇಗೆ ಮಾರು ದೂರದ ಅಂಗಡಿಗಳಲ್ಲಿ ಸಾರಾಯಿ ಅಂಗಡಿ ಎನ್ನುವ ಫಲಕದೊಂದಿಗೆ ಪಾಕೆಟ್‍ಗಳ ಸಾರಾಯಿ ಸಿಗುತ್ತಿತ್ತೋ, ಇಂದು ಅದೇ ರೀತಿ ನಾಮಫಲಕದ ಜೋತುವಿಕೆ ಇಲ್ಲದೇ ಬಾರ್‍ನ ಬಾಟಲಿಗಳು ಬಾಕ್ಸ್ ಬಾಕ್ಸ್ ನಲ್ಲಿ ಸಿಗುತ್ತಿವೆ. ಇದರಲ್ಲಿ ಸ್ಥಳೀಯ ಬಾರ್ ಓನರ್‍ಗಳ ಕೈವಾಡವೂ ಇದ್ದು, ಬಾರ್‍ನಿಂದ ಹಳ್ಳಿಯೊಳಗೆ ದಿನಸಿ ಅಂಗಡಿಗಳಿಗೆ ಡೈರೆಕ್ಟ್ ಸರಂಜಾಮು ಸಿಕ್ಕಿ ಊರಿಗೆ ಊರೇ ಕೆಡುವಂತೆ ಮಾಡುತ್ತಿದೆ. ಅನೇಕ ಹೆಂಗಸರು ಮಕ್ಕಳು ಇದರಿಂದ ಬೀದಿಗೆ ಬರುತ್ತಿದ್ದರೂ, ಸರ್ಕಾರ ಈ ಬಗ್ಗೆ ಯಾವುದೇ  ಕಟ್ಟುನಿಟ್ಟಿನ ಕ್ರಮವನ್ನೂ, ಕೈಗೊಳ್ಳದಿರುವುದು ನಿಜಕ್ಕೂ ಭಯತರಿಸುವಂತಿದೆ.
  ನಮ್ಮ ದೇಶದ ಜೀವಾಳವೇ ಹಳ್ಳಿಗಳು, ಗ್ರಾಮೀಣ ಪ್ರದೇಶಗಳು. ನಮ್ಮೆಲ್ಲರ ಅಳಿವು ಅಲ್ಲಿದೆ. ಉಳಿವೂ ಅಲ್ಲಿದೆ. ಹಳ್ಳಿಗಳನ್ನು ನಾವಿಂದು ಸುವ್ಯವಸ್ಥಿತವಾಗಿ ಉಳಿಸಿದರೆ ಅವು ಮುಂದೆಯೂ ನಮ್ಮನ್ನು ಸುಭಿಕ್ಷವಾಗಿ ಉಳಿಸುತ್ತವೆ. ಆದ್ದರಿಂದ ಹಳ್ಳಿಗಳನ್ನು ನಿರ್ಲಕ್ಷಿಸಿದರೆ ನಮಗೆ ಉಳಿಗಾಲ ಖಂಡಿತ ಇರುವುದಿಲ್ಲ. ಬಹಳ ವರ್ಷಗಳ ಹಿಂದೆ ಶೇ. 80ರಷ್ಟಿದ್ದ ಹಳ್ಳಯ ಜನಸಾಂಧ್ರತೆ ನಗರೀಕರಣದಿಂದ ಶೇ. 40 ರಿಂದ 50 ರ ಆಸುಪಾಸಿನಲ್ಲಿದೆ. ಇದೀಗ ಹಳ್ಳಿಯೂ ಬದಲಾವಣೆ ಕಂಡಿದೆ ಹಳ್ಳಿಯ ಜನರೆಲ್ಲ ಕೆಲಸವರಸಿ ಸಿ.ಟಿಯ ಕಡೆ ಪಯಣಿಸುತ್ತಿದ್ದಾರೆ ಇದರಿಂದ ಯಾವ ನಷ್ಟವಿಲ್ಲ. ದೇಶ ಪ್ರಗತಿಯಾಗುತ್ತದೆ, ಆದರೆ ಅನಾಚಾರ, ಅನಾಗರಿಕ, ಅವ್ಯವಸ್ಥೆ, ಅಕ್ರಮ, ಇತ್ಯಾಧಿಗಳು ನಡೆದರೆ ಮುಂಬರುವ  ಫಲ ಇಡೀ ದೇಶಕ್ಕೆ ದೇಶವೇ ಪಶ್ಚಾತಾಪಪಡುವಂತಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಶ್ರೀಮಾನ್ ರಾಜಕಾರಣಿಗಳೇ ನೀವೂ ಇಲೆಕ್ಷನ್ ಟೈಮಲ್ಲಿ, ಗೆದ್ದ ನಡುವಲ್ಲಿ, ಅದು ಇದು ಅಂತ ವಾಕ್ ಚಾತುರ್ಯವಾ ತೋರಿಸುತ್ತಾ ಮನೆ ಮನೆಗೆ ಕೇಳುವಂತೆ ಕೂಗುತ್ತಿರಿ, ಆದರೆ ಇಂದು ನಿಮ್ ಹಳ್ಳಿಗಳೇ ಈ ಅಕ್ರಮಗಳಲ್ಲಿ ಬಿದ್ದು ಸಾಯುತ್ತಿದೆ, ನೋಡಿ ಮಾಡಿ ಸರಿಪಡಿಸಲು ನಿಮಗೇನು ದಾಡಿಯಾ!? ಮುಖ್ಯಮಂತ್ರಿಗಳೇ ನಗರ ಮಂದಿಗೆ ಅದು ಇದು ಅಂತ ಹಣ ಸ್ಯಾಂಕ್ಷೆನ್ ಮಾಡುತ್ತಿರುವಿರಿ ಆದರೆ ದೇಶದ ಜೀವಾಳವೇ ಆಗಿರುವ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ, ಅಕ್ರಮಗಳ ತಡೆಯುವಲ್ಲಿ ದಕ್ಷ ಅಧಿಕಾರಿಗಳ ನೇಮಕ, ಸರಿಯಾದ ಕಟ್ಟುನಿಟ್ಟಿನ ಕ್ರಮ ಇತ್ಯಾದಿಗಳನ್ನು ಯಾಕೆ ಕೈಗೊಳ್ಳುತ್ತಿಲ್ಲ!?, ನಗರ ಪ್ರದೇಶದಲ್ಲಿ ಬೇರೆ ಬೇರೆ ಕೆಲಸಕ್ಕೆ ಹಣ ಬಿಡುಗಡೆ ಮಾಡುವ ನೀವುಗಳು ಹಳ್ಳಿಗಳ ಬೆಳವಣಿಗೆಗೆ ಯಾಕೆ ಸಹಕರಿಸುತ್ತಿಲ್ಲ!?, ಲಂಚಗುಳಿಕ ತನದ ಅಧಿಕಾರಿಗಳು ಇದ್ದರೆಂದು ತಿಳಿದರೂ ಅವರನ್ಯಾಕೆ ಕೆಲಸದಿಂದ ಎತ್ತಂಗಡಿ ಮಾಡುತ್ತಿಲ್ಲ!?, ಇದರಿಂದ ನಿಮಗೆಷ್ಟು ಹಣ ಕಿಸೆತುಂಬುತ್ತಿದೆ ಹೇಳಿ!?.
ಕಣ್ಣೇದುರೇ ಸೋಗಲಾಡಿಯ ದಂಧೆಗಳು ನಡೆಯುತ್ತಿದ್ದರೂ ಕಣ್ಣಿದ್ದು ಇಲ್ಲದವರಂತೆ ಮೂಖರಾಗಿ ನಿದ್ರಿಸುತ್ತಿರುವಿರಲ್ಲ ಅಧಿಕಾರಿಗಳೇ,  ನಿಮಗೆ ನಿಮ್ಮ ಕೆಲಸದಲ್ಲಿ ಅತೃಪ್ತಿ ಅಥವಾ ಧೃಡ ಮನಸ್ಸು ಇಲ್ಲವೆಂದರೆ ಹೇಳಿಬಿಡಿ ನಿಮಗಿಂತಲೂ ಹೆಚ್ಚು ಓದಿರುವ ಟ್ಯಾಲೆಂಟೆಡ್ ಎಂಗ್ ಮೈಂಡೆಡ್ ಹುಡುಗ/ಹುಡುಗಿಯರು ಕೆಲಸಕ್ಕಾಗಿ ಕಾದು ಕುಳಿತಿದ್ದಾರೆ ಅವರಿಗಾದರೂ ಆ ಕೆಲಸ ಬಿಟ್ಟುಕೊಟ್ಟು ಸೈಲೆಂಟ್ ಆಗಿ ಸೈಡ್‍ಗೆ ಹೋಗಿ ಆಗಲಾದರೂ ದಕ್ಷ ರಾಜ್ಯ ಸೃಷ್ಟಿಯಾಗುತ್ತದಾ, ಇಲ್ಲವಾ ನೋಡೋಣ...
ವಿಷಯಕ್ಕೆ ಬರುತ್ತೇನೆ..,
ಕುಡಿತ ಕುಡಿಯುವವರನ್ನು, ಕುಡಿಯದವರನ್ನು ಟೋಟಲ್ಲಿ ಇಡೀ ಫ್ಯಾಮಿಲಿಯನ್ನು ವಿನಾಶದಂಚಿಗೆ ದೂಡುವುದಲ್ಲದೇ ಮಿತಿಮೀರಿದರೆ ದೇಶಭಾಂಧವ್ಯಕ್ಕೂ ಧಕ್ಕೆ ತರುವ ಪರಿಣಾಮಕಾರಿ ಕೆಟ್ಟತನವನ್ನು ಬೀರುತ್ತದೆ ಎಂಬ ಮಾತು ನೂರಕ್ಕೆ ನೂರು ಸತ್ಯ. ಮಧ್ಯಪಾನದಿಂದ ಸತ್ತವರ ಪ್ರತಿ ಕುಟುಂಬದಲ್ಲೂ ಒಂದೊಂದು ನೋವಿನ ಕಥೆ ಇದೆ, ಕೆಲ ಕುಟುಂಬಗಳು ಅನಾಥವಾಗಿವೆ, ಸತ್ತವರ ಮನೆ ಮಕ್ಕಳು ವಿಘಟಿತರಾಗಿದ್ದರೆ, ಮಡದಿ ಮಕ್ಕಳು ಊಟಕ್ಕಾಗಿ ಕೂಲಿನಾಲಿಯನ್ನೇ ಅವಲಂಭಿಸುವ ಪರಿಸ್ಥಿತಿ ನಿರ್ಮಾಣವಾಗಿವೆ. ಹೀಗೆ ಪಟ್ಟಿಗೈಯುತ್ತಾ ಹೋದರೆ ಮಧ್ಯಪಾನ ಮನೆ ಕೆಡಿಸಿ ತಲ್ಲಣಿಸುತ್ತಿದೆ ಅಲ್ಲದೇ ಬೇರೇನೂ ಉಪಯೋಗಿ ಕಾರ್ಯ ಮಾಡುತ್ತಿಲ್ಲ. ಒಂದು ಕಡೆ ರೈತರ ಸಾಲ ಭಾದೆಯ ಸಾವು ಇನ್ನೊಂದು ಕಡೆ ಈ ಸಮಸ್ಯೆ. ದಿನಕಳೆದರೆ ಏನಾಗುತ್ತದೋ ತಿಳಿಯುತ್ತಿಲ್ಲ. ಸರ್ಕಾರಕ್ಕೆ ಇದು ತಿಳಿಯುತ್ತಿಲ್ಲ, ಎಲ್ಲ ಆದ ಮೇಲೆ ಚಿಂತಿಸಿ ಫಲವಿಲ್ಲ.
 ಇದೀಗ ಹಳ್ಳಿಗಳಲ್ಲಿ ಅಕ್ರಮವಾಗಿ ಎಣ್ಣೆ ಸರಭರಾಜು ಎತೇಚ್ಚವಾಗಿ ನಡೆಯುತ್ತಿರುವುದು ನೋಡಿದರೆ ಕಣ್ಣಾಲಿಯಲ್ಲಿ ಭಯ ದಿಗಿಲುಗೊಳ್ಳುತ್ತಿದೆ. ಹಳ್ಳಿ ಮಂದಿಯ ಕೆಲವರಿಗೆ ಕುಡಿಯೋದೆ ಕೆಲಸವಾದರೆ ಇನ್ನೂ ಕೆಲವರಿಗೆ  ಬೀದಿ ಬೀದಿಯ ಅಂಗಡಿಗಳಲ್ಲಿಟ್ಟು ಮಾರೋದೆ ಬ್ಯುಸಿನ್ನೆಸ್ಸಾಗಿದೆ. ಒಂದು ಮೂಲದ ಪ್ರಕಾರ ಊರನ್ನೇ  ಕಾದು ಸುವ್ಯವಸ್ಥೆಯಲ್ಲಿಡಬೇಕಾದ ಪೋಲೀಸರು ಹಣದ ಆಮೀಷಕ್ಕೆ ಬಿದ್ದು ತಿಂಗಳಿಗೆ ಇಂತಿಷ್ಟು ಎಂಬಂತೆ ಲಂಚ ಪಡೆದು, ಅಕ್ರಮ ಧಂಧೆಗಳು ತಮ್ಮೆದುರೇ ನಡೆಯುವುದ ತಿಳಿದರೂ ಸುಮ್ಮನಿರುತ್ತಿದ್ದಾರೆ. ಇದು ರೋಲ್ ಕಾಲ್ ರೂಪವನ್ನು ಕರಾವಳಿಯ ಅನೇಕ ಕಡೆ ಕಾಣುತ್ತಿದ್ದು, ಕಾವಲು ಪಡೆಯುವವನೇ ಜಗಕೆ ಕತ್ತಲಾಗುತ್ತಿದ್ದಾನೆ. ಈ ಅವ್ಯವಸ್ಥೆ ಸರಕಾರ ಮನಗಾಣಬೇಕು. ಕುಡಿತದಂತ ಕೆಟ್ಟ ಚಟ ಹಳ್ಳಿಗಳಲ್ಲಿ ಪ್ರಭೆಬೀರುವುದನ್ನು ತಡೆಗಟ್ಟಬೇಕು. ಭ್ರಷ್ಟ ಅಧಿಕಾರಿಗಳನ್ನು ಕೈ ಬಿಟ್ಟು ದಕ್ಷ ಅಧಿಕಾರಿಗಳ ನೇಮಕಕ್ಕೆ ಸಾಕ್ಷಿಯಾಗಬೇಕು, ಇದಕ್ಕಾಗಿ ಸೂಕ್ತ ಕ್ರಮಗಳನ್ನು ಆದಷ್ಟು ಬೇಗ ಜರುಗಿಸಬೇಕು.

 ಆಧೀಕೃತವಾಗಿ ಮುಖ್ಯಗ್ರಾಮಗಳಲ್ಲಿ ಬಾರ್ ಹಾಗೂ ಮದ್ಯದಂಗಡಿ ನಡೆಸಲು ಲೈಸನ್ಸ್ ನೀಡಿರುವುದೇ ಇದಕ್ಕೆಲ್ಲಾ ಮುಖ್ಯ ಕಾರಣವಾಗಿದ್ದು, ಅನಧೀಕೃತವಾಗಿರುವ ಹಾಗೂ ನಿರ್ದಿಷ್ಟ ಪ್ರದೇಶಕ್ಕೆ ಇಂತಿಷ್ಟು ಎಂಬಂತೆ ಪರಿಷ್ಕರಿಸಿ ಹೆಚ್ಚು ಉಳಿದಿರುವ ಎಲ್ಲಾ ಮಧ್ಯದಂಗಡಿಗಳನ್ನು ಮುಚ್ಚಿಸುವ ಕೆಲಸ ಮಾಡುವುದರ ಜೊತೆಗೆ, ಏಕಾಏಕೀ ಲೈಸೆನ್ಸ್ ನೀಡುವ ಪದ್ಧತಿಯನ್ನು ನಿಲ್ಲಿಸಬೇಕು. ಹಳ್ಳಿ ಹಳ್ಳಿಗಳ ಸಣ್ಣ ಪುಟ್ಟ ಕಿರಾಣಿ ಅಂಗಡಿ ಸೇರಿದಂತೆ, ಹೊಲ ಗದ್ದೆಯ ಗುಡಿಸಲು, ಹಾಡಿ ಗುಡ್ಡಗಳಲ್ಲು ಅನಧೀಕೃತ ಸ್ಟೋರೆಜ್‍ನ ಜೊತೆಗೆ ಮಾರಾಟಗಳು ನಡೆಯುತ್ತಿದ್ದು, ಇದನ್ನೆಲ್ಲ ತಡೆಯಲೋಸುಗವಾಗಿ ಒಂದಿಷ್ಟು ದಕ್ಷ ಅಧಿಕಾರಿಗಳನ್ನು ನೇಮಕ ಮಾಡಿ ತಪಾಸಣೆಗೆ ಬಿಟ್ಟು ಅಕ್ರಮದಂಧೆಗಾರರನ್ನು ಬಂಧಿಸಬೇಕು.
ಹಳ್ಳಿ ಹಾಗೂ ಗ್ರಾಮೀಣ ಪ್ರದೇಶವಾಸಿಗಳೇ ಕೊನೆಯಲ್ಲಿ ಒಂದು ಮಾತು, ಅಪಾಯಕಾರಿ ಮಧ್ಯದ ಚಟದಿಂದ ಹೊರಬರಲು ಸಾಕಷ್ಟು ಉಪಾಯಳಿವೆ. ಯಾರೇನೆಂದರೂ ನಿಮ್ಮ ನಿರ್ಧಾರದ ಮೇಲೆ ಎಲ್ಲಾ ನಿಂತಿರುವುದು. ವ್ಯಸನಿಗಳ ನಿರ್ಧಾರದಿಂದ ಮಾತ್ರ ಮಧ್ಯದ ಗೀಳನ್ನು ಬಿಡಲು ಸಾಧ್ಯ. ಗಟ್ಟಿ ಮನಸ್ಸು ಮಾಡಿ ಮಧ್ಯವ್ಯಸನದಿಂದ ಹೊರಬರಲು ಪ್ರಯತ್ನಿಸಿ. ಇದರಿಂದ ಉತ್ತಮ ಆರೋಗ್ಯ ಹೊಂದಿ ಬಹುಕಾಲ ಬಾಳಲು ಸಾಧ್ಯ. ವಿಷವಾದರೂ ಒಂದೇಟಿಗೆ ವ್ಯಸನಿಯೊಬ್ಬನನ್ನೇ ಸಾಯಿಸಬಹುದು ಆದರೆ ಕುಡಿತ ನಿಧಾನವಾಗಿ ಇಡೀ ಮನೆ ಮಠವನ್ನೇ ಸಾಯಿಸುತ್ತದೆ. ಜಾಗೃತರಾಗೋಣ-ಜಾಗೃತಗೊಳಿಸೋಣ-ಜಾಗೃತಿ ಇರೋಣ...

No comments:

Post a Comment