Saturday 30 January 2016

ಅಂದೊಂದಿತ್ತು ಕಾಲ...


                ನನ್ನದು ಸಿಂಪಲ್ ಲೈಫ್. ಚಿಕ್ಕಂದಿನಿಂದಲೂ ಯೋಚನೆಗಳನ್ನು ಸ್ವಲ್ಪ ಡಿಫರೆಂಟ್ ಆಗಿ ºರಿಯಬಿಡುವುದು ನನ್ನ ಗುಣಧರ್ಮಗಳಲ್ಲೊಂದು. ಅವನೇನೋ ಮಾಡುತ್ತಾನೆ, ಅವರೇನೋ ಹೇಳುತ್ತಾರೆ ಎಂದು ಕೊರಗಿ ಕೂತು ಮೂಲೆ ಮನೆಯೇ ಗತಿ ಎಂದು ಅಳುಕುವ ಜಾಯಮಾನ ನಂದಲ್ಲ. ಯಾಕೆಂದರೆ ಮೂಲೆ ಮನೆಯನ್ನೇ ಪಡಸಾಲೇಯನ್ನಾಗಿ ಮನದಾಸ್ತಾನದಲ್ಲಿ ಪರರಾಜ್ಯದ ಮನಸ್ಸನ್ನು ಒಳಬಿಟ್ಟು ಆಳ್ವಿಕೆ ಮಾಡಿಸಿಕೊಳ್ಳುವಷ್ಟು ದುರ್ಬಲ ಮನಚಿತ್ತ ನನ್ನಲಿಲ್ಲ. ಒಮ್ಮೊಮ್ಮೆ ಅರಚುತ್ತೇನೆ, ಒಮ್ಮೊಮ್ಮೆ ಕಿರುಚುತ್ತೇನೆ.., ಆದರೆ ಅದರಿಂದ ಯಾರಿಗೂ ತೊಂದರೆಯಾಗುವುದಿಲ್ಲ, ಗೊತ್ತುಪಡಿಸುವುದು ಇಲ್ಲ... ಬಿಕಾಸ್ ಅವೆಲ್ಲವೂ ನನ್ನೊಳಗೆ ಆಗುವ ನನ್ನತನ. ನನ್ನಲ್ಲಿ ಏನಿದ್ದರೂ ನಂದೇ ರಾಜ್ಯಭಾರ. ಹಾಗಂತ ಯಾರಿಗೂ ತೊಂದರೆ ಮಾಡುವ, ನೀಡುವ ಜಾಯಮಾನ ನನ್ನಲಿಲ್ಲ. ಹೊಸ ಬಟ್ಟೆ ಇದ್ದರೂ, ಹಳೆ ಬಟ್ಟೆಯನ್ನು ತೊಟ್ಟರೇನು? ಮಲಗಲು ಹಾಸಿಗೆ ಇದ್ದರೂ, ಚಾಪೆ ಮೇಲೆ ಮಲಗಿದರೇನು? ಎಂದು ಆಗಾಗ ಪ್ರತಿಭಟಿಸುವುದು ನನ್ನ ಸುಪ್ತ ಮನದ ಸಹಜ ಭಾವ.
            ...ಓ ಗಾಡ್ ಇಷ್ಟು ಸಿಂಪಲ್ ಜೀವನ ನನ್ನೊಳಗೆ ಇದ್ದರೂ, ಬಾಹ್ಯ ಜೀವನ ಅಂದುಕೊಂಡಂತೆ ಒಗ್ಗುತ್ತಿಲ್ಲ. ಜೀವನದ ಹಿಂದಿನ ದಿನಗಳನ್ನು ಮತ್ತೆ ಮೆಲುಕು ಹಾಕಿದರೆ ಕೈಗೆ ಸಿಗುವುದು ಖಚಿತವಿಲ್ಲ... ಸಿಗುವುದು ತುಂಬಾನೆ ಕಷ್ಟವಿದೆ ಬಿಡಿ...ಪ್ರಪಂಚ ಬದಲಾಗಿದೆ ಹಾಗೆ ನಾವು ಬದಲಾಗಿದ್ದೇವೆ. ದಿನೆ ದಿನೇ ತ್ವರಿತಗತಿಯ ಪ್ರಗತಿ ಕಾಣುತ್ತಿದ್ದೇವೆ, ಅದಕ್ಕೆ ತಕ್ಕಂತೆ ಚಲನೆ ಪಡೆಯುತ್ತಿದ್ದೇವೆ. ಅಂದುಕೊಂಡ ಕನಸುಗಳನ್ನು ಬೆನ್ನೆತ್ತಿ ಸಾಗುತ್ತಿರುವ ನಾವುಗಳು, ಭೂತಕಾಲದಲ್ಲಿ ಅನುಭವಿಸುವ ಅನೇಕ ದಿನಮಾನಸವನ್ನು ಹಿಂತಿರುಗಿ ನೋಡಿದರೆ ಅಚ್ಚರಿಯ ಪ್ರತಿಬಿಂಬ ಕನ್ನಡಿಗೆ ಬೆಳಕಿನಂತೆ ಬಡಿದು ಕಣ್ಣಿನ ಮನಸ್ಸಿನೊಳಗೆ ಸೀದಾ ಪ್ರತಿಫಲಿಸಿ ಛೇ ಎಂಥಾ ಕಾಲವದು!! ಮತ್ತೆ ಬರುದಿಲ್ಲವಲ್ಲಾ!? ಎನ್ನುವ ಅಳುಕುಂಟು ಮಾಡುತ್ತದೆ. ಏನೂ ಇಲ್ಲದ ಆ ದಿನಗಳನ್ನು ಬಳುವಳಿಯಾಗಿ ನಮ್ಮ ಮುಂದಿನ ತಲೆಮಾರಿಗೆ ಕೊಡುವುದು ಹಾಗಿರಲಿ, ತೋರಿಸಲು ಕಷ್ಟವೇನೋ ಎನ್ನುವ ನತದೃಷ್ಟ ಸ್ಥಿತಿಗೆ ಸಾಗುತ್ತಿರುವ ನಮ್ಮ ಇಂದಿನ  ಪಾಡು ‘ಬ್ಯುಸಿ’ ಎನ್ನುವ ಷೆಡ್ಯೂಲ್‍ನಲ್ಲೇ ದಿನವಿಡಿ ಸಾಗುತ್ತಿದೆ. ಅಂದಿನ ಪ್ರತಿಷ್ಠೆಯ ಕ್ಷಣಗಳು ಇಂದು ಹೊಸ ಪ್ರತಿóಷ್ಠಾನದೊಂದಿಗೆ ನಗುಬೀರುತ್ತಿವೆ. ಅವೆಲ್ಲವೂ ಯಾವ ಬಣ್ಣದೋಕುಳಿಯಿಂದ ಮಾಯವಾದವೋ ಎಂದು ಚಿಂತಿಸಿದರೆ ಕಾರಣ ಒಂದಾ...? ಎರಡಾ...? ಎನ್ನುವಷ್ಟು ದೊಡ್ಡ ಲಿಸ್ಟೇ ರೆಡಿಯಾಗಿ ನಿಲ್ಲುತ್ತದೆ. ಇಂದು ಎಲ್ಲದಕ್ಕೂ ಆಧುನಿಕರಣ ಒಂದೇ ಉತ್ತರ ಸಮರ್ಪಕ ಎನಿಸಿದರೂ, ಅದರ ವಿವಿಧ ಬಾಹುಗಳು ಇನ್ನೂ ಎತ್ತರೆತ್ತರಕ್ಕೆ ಬೆಳೆಯುತ್ತಿದ್ದೂ, ಮುಂದೆನಾಗುತ್ತದೋ!??? ಎನ್ನುವ ವಿಸ್ಮಯದಲ್ಲೇ ಬೆರಗುಗೊಳ್ಳುವಂತೆ ಮಾಡುತ್ತಿದೆ.

ನಾವಂದು ಕಾಲೇಜು ದಿನಗಳಲ್ಲಿ ಕಾಲೇಜ್ ಬ್ಯಾಗ್ ಹೆಗಲಿಗೆ ಜೋತಾಕಿಕೊಂಡು ನಮ್ಮದೇ ಒಂದೊಂದು ಗುಂಪ್ ಮಾಡಿಕೊಂಡು, ಇವತ್ತು ಹಾಗಾಯು!, ನಿನ್ನೆ ಹೀಗಾಯ್ತು!, ಅವನೂ ಅವಳಿಗೆ.., ಅವಳು ನನಗೆ.., ಲೆಕ್ಚರ್ ಯಾಕೆ ಹಾಗ್ ಆಡ್ತಾರೆ?, ಮಿಸ್ ಯಾಕೆ ಹೀಗೆ?, ಅದು ನಿನ್ಗೋತ್ತಾ? ಇದ್ ಏನ್ ತಿಳಿತಾ? ಹಾಗೆ ಹೀಗೆ ಮಾತನಾಡುತ್ತಾ ಕಾಲೇಜ್ ಕ್ಯಾಂಪಸ್‍ನಲ್ಲಿ ಒಡಾಡಿಕೊಂಡು ಶೈಕ್ಷಣಿಕ ಜೀವನ ಮುಗಿಸಿದ್ದೆವು. ಇನ್ನೂ ಪದವಿ ಶಿಕ್ಷಣದಲ್ಲಿರುವಾಗಂತೂ ಅದೇ ಬೇರೆ ರೀತಿಯ ಮರೆಯಲಾಗದ ಜೀವನ ನೀಡಿತ್ತು. ಪಠ್ಯಕ್ರಮ, ಆಟೋಟ, ಲೈಬ್ರೇರಿಯ ಪುಸ್ತಕದ ಓದಿನಲ್ಲೇ ಸಂತೋಷಗೊಳ್ಳುತ್ತಿದ್ದೆವು. ಇಂದಿನ ಮಕ್ಕಳ ಶಿಕ್ಷಣ ಭೀತಿಯಂತೆ ಅಂದಿರಲಿಲ್ಲ. ಉಳಿದಂತೆ ಮನೆ ಕೆಲಸ, ಹಬ್ಬ ಹರಿದಿನಗಳ ಎಂಜಾಯ್‍ಮೆಂಟ್, ಯಕ್ಷಗಾನ, ಮದುವೆ, ನಾಟಕ, ಇವುಗಳ ವಿನೋಧ ಬಿಟ್ಟರೆ ಬೇರ್ಯಾವ ಟೈಮ್ ಪಾಸ್ ವಕ್ರಗಳು ನಮ್ಮ ಜೀವನದಲ್ಲಿ ಬಂದ ಅನುಭವವಿರಲಿಲ್ಲ. ಆಗ ಈಗಿರುವಷ್ಟು ಟೆಕ್ನಾಲಜಿಗಳು ಇರಲಿಲ್ಲ. ಬಹುಶಃ ಅದಾಗಲೇ ಇಂದಿನ ಟೆಕ್ನಾಲಜಿ ಮರಿ ಮೊಳಕೆಯಂತೆ ಚಿಗುರುತಿತ್ತು ಅಷ್ಟೆ. ಅಬ್ಬಾಬ್ಬಾ ಅಂದರೆ ಸ್ಟಾಂಡರ್ಡ್ ಫ್ಯಾಮಿಲಿಯಿಂದ ಬಂದ ಹುಡುಗರಲ್ಲಿ ಒಂದು ಬ್ಲ್ಯಾಕ್ ಆಂಡ್ ವೈಟ್ ನೋಕಿಯ ಮೊಬೈಲ್ ಕಾಣ ಸಿಗುತ್ತಿತ್ತು. ಕಂಪ್ಯೂಟರ್‍ಗಳನ್ನು ಕಂಡಿದ್ದೆ ಕಂಪ್ಯೂಟರ್ ಕ್ಲಾಸ್ ಕಲಿಯಲು ಹೋದಾಗ. ಇನ್ನೂ ಲ್ಯಾಪ್ ಟಾಪ್‍ಗಳೋ ಅದರ ಹೆಸರೇ ಕೇಳಿರಲಿಲ್ಲ. ಎಚ್.ಎಮ್.ಟಿ ವಾಚ್ ಬಿಟ್ಟರೆ ಬೇರೆ ಕಂಪೆನಿ ಕೈ ಗಡಿಯಾರ ಇರುವುದೇ ತಿಳಿದಿರಲಿಲ್ಲ... ಇವುಗಳಲ್ಲಿ ಯಾವುದನ್ನು ಹೊಂದಿದ್ದರೂ ಆತನಿಗೆ  ವಿಶಾಲ ಹೆಗ್ಗಳಿಕೆ. ಪದವಿ ನಂತರ ಹಾಗೋ ಹೀಗೋ ಉನ್ನತ ಶಿಕ್ಷಣ ಪೂರ್ಣ ಗೊಳಿಸುವ  ಹೊತ್ತಿಗೆ ಚೈನಾ ಕಂಪೆನಿಯ ಅಷ್ಟಿಷ್ಟು ಕಡಿಮೆ ಬೆಲೆಯ ಮೊಬೈಲ್, ವಾಚ್‍ಗಳು, ಕಂಪ್ಯೂಟರ್‍ಗಳು ಇನ್ನೂ ಅನೇಕ ಎಲೆಕ್ಟ್ರಾನಿಕ್ಸ್ ಐಟಮ್‍ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟು ಎಲ್ಲರಿಗೂ ‘ಟೆಕ್ನಾಲಜಿಯ ಒಗ್ಗು’ ಎನ್ನುವ ಮೂಲಭೂತ ಹೊಂದುವಿಕೆಯ ಅಡಿಪಾಯಕ್ಕೆ ಬಂದಿತ್ತು ಜನ ಸಮೂಹ.
 ಆದರೆ ಇಂದು..!!??
 ಊಹಿಸಿ...
ಅಂದಿದ್ದ ಅತಿ ಚಿಕ್ಕ ಮೊಬೈಲ್ ಸ್ಕ್ರೀನ್ ಇಂದು ಸ್ಲೇಟ್ ಗಾತ್ರದÀಷ್ಟು ದೊಡ್ಡರೂಪ ಪಡೆದಿದೆ, ಆ ಕಾಲದ ವೈಟೆಡ್ ಕಂಪ್ಯೂಟರ್‍ಗಳು ಇಂದು ಭಾರ ಕಳೆದುಕೊಂಡಿವೆ. ಕ್ಯಾಸೆಟ್ ಸಿಡಿಗಳು ಹೇಳ ಹೆಸರಿಲ್ಲದಂತೆ ಮೂಲೆಗುಂಪಾಗಿವೆ. ಅಂದಿನ ಬ್ಲರ್ ಸ್ಕ್ರೀನ್‍ಗಳಲ್ಲಿ ಹೆಚ್.ಡಿ ಕಳೆ  ಮೂಡಿದೆ, ಹ್ಯೂಜ್ ಪ್ರೈಸ್‍ಗಳು, ನಾರ್ಮಲ್ ರೇಟ್‍ಗೆ ಇಳಿದಿದೆ, ಇಂತಹವರಿಗೆ ಮಾತ್ರಾ ಎನಿಸಿದ್ದ ವಸ್ತುಗಳು ಎಲ್ಲರಿಗೂ ಮೀಸಲು ಎನ್ನುವ ಸ್ಥಿತಿಗೆ ತಲುಪಿದೆ. ಹಾಗಾದರೆ ಮುಂದೇನು..!?
ಇಂದು ಯಾವುದರ ಪರಮಾವಧಿ?
ಹೀಗೊಂದು ಪ್ರಶ್ನೆಯನ್ನು ಆಳವಾಗಿ ಚಿಂತಿಸಿದರೆ ಪ್ರತಿಯೊಬ್ಬರ ಮನಸ್ಸಲ್ಲು ರಿಪಿಟ್!., ರಿಪಿಟ್!.. ಯಾವುದು!?, ಯಾವುದು!? ಎಲ್ಲವೂ...!!! ಎನ್ನುವ ಉತ್ತರ ಮೂಡಿ ಬರಬಹುದು. ಇಂದು ಸಾಗುತ್ತಿರುವ ಟೆಕ್ನಾಲಜಿಯ ವೇಗ ಇದೇ ವೇಗದಲ್ಲೇ ಮುಂದೆ ಸಾಗಿದರೆ ಮುಂದಿನ ತಲೆಮಾರುಗಳ ಜನ ಬುದ್ಧಿವಂತರಾಗಬಹುದಾ? ಅಥವಾ ದಡ್ಡ ಶಿಖಾಮಣಿಗಳಾಬಹುದಾ?, ಜಗತ್ತಿನ ಗತಿ ಎತ್ತಸಾಗಬಹುದು? ಈಗಾಗಲೇ ಸೋಷಿಯಲ್ ಮೀಡಿಯಾಗಳ ಹಾವಳಿ ಯುವ ಜನತೆಯನ್ನು ದಿಕ್ಕು ತಪ್ಪಿಸಿದ್ದು, ಬದುಕಿನ ಅತ್ಯಮೂಲ್ಯ ಕ್ಷಣಗಳನ್ನು ಯಂತ್ರಗಾರಿಕೆಯ ಮತ್ತದರ ರೂಪರೇಷೆಯ ಬದಲಾವಣೆಯಿಂದ ಎಲ್ಲವೂ ಮಿತಿಮೀರಿ ಅಟ್ಟಹಾಸ ಮೆರೆಯುವಂತೆ ಮಾಡುತ್ತಿದೆ. ಬೃಹದಾಕಾರದ ಮನೆಗಳಲ್ಲಿ ದೊಡ್ಡ ಯಂತ್ರಗಳಂತೆ ಕೆಲಸ ಮಾಡುತ್ತಾ  ಗಣಿತದ ಲೆಕ್ಕಾಚಾರಗಳನ್ನು  ಚಕ ಚಕನೆ ಮುಗಿಸುತ್ತಿದ್ದ ಕಂಪ್ಯೂಟರ್ ಈಗ ಎಲ್ಲರ ಕೈ ಬೆರಳುಗಳ ಕೀಲಿಮಣೆ ಆಟದ ಆಟಿಕೆಯಾಗಿದೆ. ಡೆಸ್ಕ್ ಟಾಪ್‍ಗಳು ಲ್ಯಾಪ್ಟಾಪ್‍ಗಳಾಗಿ, ಮೊಬೈಲ್ ಫೋನ್‍ಗಳು ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಟಚ್ ಪ್ಯಾಡ್ ಹೀಗೆ ಹತ್ತು ಹಲವು ಮಾದರಿಯ ರೂಪ ಪಡೆದಿವೆ. ನೆಟ್‍ಬುಕ್‍ಗಳು ಸಾಮಾನ್ಯನಿಗೂ ಕಂಪ್ಯೂಟರ್‍ರನ್ನು ದಿನ ನಿತ್ಯದ ಡೈರಿಗಿಂತ ಹೆಚ್ಚಿನ ಸಂಗಾತಿಯನ್ನಾಗಿ ಮಾಡಿವೆ.
ಅಂದು ನಮಗೆ ಮೆಮೋರಿ ಕಾರ್ಡ್ ಎಂದರೇನೆಂದೂ ತಿಳಿದಿರಲಿಲ್ಲ, ಪೆಂಡ್ರೈವ್ ಹೆಸರೇ ಗೊತ್ತಿರಲಿಲ್ಲ, ಹಾರ್ಡ್ ಡಿಸ್ಕ್ ಬಗ್ಗೆ ಅರಿವಿರಲಿಲ್ಲ, ಇಂಟರ್ ನೆಟ್ ಗೋಜಿನ ಸುಳಿವಿರಲಿಲ್ಲ... ಆದರರಿಂದು.!?,,,
ಮೊಬೈಲ್ ಫೋನ್ , ನೆಟ್ ಬುಕ್, ಟ್ಯಾಬ್, ಅಗ್ಗದ ಬೆಲೆಯ ಆ್ಯಂಡ್ರಾಯಿಡ್ ಫೋನುಗಳು ಅಷ್ಟೇ ಏಕೆ ಕಂಪ್ಯೂಟರ್‍ಗಳು ಟಚ್ ಅನುಭವ ಕೊಡುತ್ತಾ, ಇಂದಿನ ಯುವ ಪೀಳಿಗೆ  ಇಂಟರ್‍ನೆಟ್‍ನೊಂದಿಗೆ ಸದಾ ಸಂಪರ್ಕದಲ್ಲಿರುವಂತೆ ಮಾಡಿದೆ. ಇತ್ತೀಚೆಗೆ ಲಗ್ಗೆ ಇಟ್ಟ ನೆಟ್ ಬುಕ್ ಮತ್ತು ಟ್ಯಾಬ್‍ಗಳು ಕೂಡ ಇದೀಗ ಹಳೆಯದಾಗಿವೆ, ಇನ್ನೂ ಹೊಸ ಹೊಸ ಆವಿಷ್ಕಾರಗಳು ಬರುತ್ತಿವೆ. ಅತೀ ಸಣ್ಣ ತಂತ್ರಾಂಶಗಳು ದೈನಂದಿನ ಕೆಲಸಕ್ಕೆ ಬೇಕಾದ ಸೌಲಭ್ಯಗಳನ್ನು ಬೆರಳಂಚಿನಲ್ಲಿ ತಂದಿರುವುದು ಮುಂದಿನ ದಿನಗಳಲ್ಲಿ ಬರೀ ಬ್ರೌಸರ್ ಒಂದರಿಂದಲೇ  ಎಲ್ಲಿಂದಾದರೂ ಕುಳಿತಲ್ಲೆ ಪೂರ್ತಿ ಕೆಲಸ ಮಾಡುವ,  ಅನುಪಸ್ಥಿತಿಯಲ್ಲೂ, ಉಪಸ್ಥಿತಿ ಕೈಗೊಳ್ಳುವ ಕಾಲ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ.
 ಪ್ರಾರಂಭದಲ್ಲೇ ಹೇಳಿದಂತೆ ನಾನು, ನನ್ನದು, ನನ್ನ ಮನಸ್ಥಿತಿ, ಕೇವಲ ಇವಷ್ಟೇ ನನ್ನದು!!. ಬೇರ್ಯಾವುದು ನನ್ನದಲ್ಲ, ಆದರೆ ಇಂದಿನ ತಂತ್ರಜ್ಞಾನದ ಬಿಸಿ ಆ ನಾನು!,, ನನ್ನದು!, ನನ್ನದಾದ ಕೆಲವೊಂದು ಎನ್ನುವ ಪರ್ಸ್‍ನಲ್ ವಿಚಾರಕ್ಕೂ ಲಗ್ಗೆ ಇಟ್ಟು ನಮ್ಮ ತನವನ್ನು ಅಪಹರಿಸಿಕೊಂಡು ಹೋಗುತ್ತಿದೆಯೇನೋ ಎಂದು ಅನಿಸುತ್ತಿದೆ. ಮೊದಲೆಲ್ಲ ಒಂದೈದು ನಿಮಿಷ ಫ್ರೀ ಟೈಮ್ ಸಿಕ್ಕರೆ ಪುಸ್ತಕ ಓದುವುದೋ, ಗೆಳೆಯರ ಜೊತೆ ಹರಟುವುದೋ, ಮನೆಯಲ್ಲಿ ಕುಳಿತು ಕೆಲಸ ಕೈಗೊಳ್ಳುವುದೋ ಮಾಡುತ್ತಿದ್ವಿ. ಆದರೆ ಇಂದು ಒದಗಿ ಬರುವ ಅದೇ ಅರೆಘಳಿಗೆ ಗೊತ್ತಿಲ್ಲದಂತೆ ಮೊಬೈಲ್ ಸ್ಕ್ರೀನ್‍ನ ಮೇಲೆ ಕೈ ಓಡಿಸುತ್ತಾ, ಯಾರ್ಯಾರನ್ನೋ ಫ್ರೆಂಡ್ ಮಾಡಿಕೊಳ್ಳುತ್ತಾ, ಬೇಕು ಬೇಡದ ವಿಷಯಗಳನ್ನ ತಡಕಾಡುತ್ತಾ, ಒಳಗೊಳಗೆ ನಗುತ್ತಾ, ಅಳುತ್ತಾ, ಅಯ್ಯೋ ನನಗೆ ಟೈಮೆ ಸಿಗುತ್ತಿಲ್ಲ ಬ್ಯುಸಿ ಬ್ಯುಸಿ  ಎನ್ನುವ ಹಂತಕ್ಕೆ ತಲುಪಿದ್ದೇವೆ. ಇದರಿಂದ ಜನತೆ ಇಂದು ಸಹಜ ವರ್ತನೆಯ ಸಂವೇದನೆಯನ್ನು ಕಳೆದುಕೊಳ್ಳುತ್ತಿದ್ದಾರೆ.
ನಾವಂದು ಪರೀಕ್ಷೆಗೆ ಓದಿಕೊಳ್ಳುತ್ತಿದ್ದ ಸಮಯ ಕೈಯಲ್ಲಿ ಪುಸ್ತಕ ಬಿಟ್ಟರೆ ಬೇರೆನೂ ಕಾಣಲಾಗುತ್ತಿರಲಿಲ್ಲ. ಆದರೆ ಇಂದು ಮಕ್ಕಳು ಪುಸ್ತಕ ಮಡಚಿಟ್ಟು ಮೊಬೈಲ್‍ನಲ್ಲೇ ಚಾಟಿಂಗ್  ಮಾಡುತ್ತಾ ಅತ್ಯಮೂಲ್ಯ ಸಮಯಗಳನ್ನ ಹಾಳುಗೆಡವಿಕೊಳ್ಳುತ್ತಿದ್ದಾರೆ. ಒಂದು ಮಾತು ನಿಜ, ‘ನಿರಂಂತರವಾಗಿ ಆವಿಷ್ಕಾರವಾಗುವ ಆಧುನಿಕ ತಂತ್ರಜ್ಞಾನದ ಯಾವುದೇ ವಸ್ತುವೂ ನಮಗೆ ಮಾರಕವಲ್ಲ. ಆದರೆ ಅದು ಅತಿಯಾಗಿ ಬಳಕೆಯಾದರೆ ಖಂಡಿತ ಮಾನವನ ಅಭಿವೃದ್ಧಿಗೆ  ಶಾಪವಾಗುವುದು ಗ್ಯಾರಂಟಿ’. ಲೇಖನದ ಪೀಠಿಕೆಯಲ್ಲಿ  ಹೇಳಿದಂತೆ ನನ್ನ ವೈಯಕ್ತಿಕ ಬದುಕು ಹಾಗೆಲ್ಲ ಇದ್ದರೂ ಒಮ್ಮೊಮ್ಮೆ ಅವುಗಳೇ ಹಿಂದಿದ್ದ ರೀತಿಯಲ್ಲಿ ಈಗಿಲ್ಲ, ಬದಲಾವಣೆ ಕಂಡಿದೆಯೇನೋ ಅನ್ನಿಸುತ್ತದೆ. ಅಂದಿದ್ದ ಸ್ಟ್ರಾಂಗ್ ಮೈಂಡೆಡ್ ಇಂದು ಈ ಟೆಕ್ನಾಲಜಿಯ ಮೊಮ್ಮಕ್ಕಳಾದ ಇಂಟರನೆಟ್ ಹಾಗೂ ಸೋಷಿಯಲ್ ಮೀಡಿಯಾಗಳ, ತಂತ್ರಜ್ಞಾಗಳ ಅತಿರೇಖದಿಂದ ಸ್ಟ್ರೆಸ್ ಆಗಿ ವೀಕ್ ಆಗುತ್ತಾ ಸಾಗುತ್ತಿದೆಯೇನೋ ಅನ್ನಿಸುತ್ತಿದೆ. ಎಲ್ಲೋ ಒಂದು ಕಡೆ ನಾವು ತಂತ್ರಜ್ಞಾನದ ದಾಸರಾಗುತ್ತಿದ್ದೇವಾ ಎನಿಸುತ್ತ್ತಿದೆ. ನನ್ನಲ್ಲಿ ಇವುಗಳ ಹಾವಳಿಯಿಂದ ಒಮ್ಮೊಮ್ಮೆ ನನ್ನತನವೂ ಮರೆಯುತ್ತಿದೆ. ಹಾಗಂತ ಇವುಗಳಿಂದ ದೂರ ಇರುವುದು ಶೊಭೆಯಲ್ಲ. ಬಿಟ್ಟು ಬಿಡಲು ಆಗುವುದಿಲ್ಲ. ಅತಿಯಾದರೆ ಅಮ್ರತವೂ ವಿಷ ಎನ್ನುವಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಎಷ್ಟೆಷ್ಟೂ ಮುಂದುವರಿಯುತ್ತಿದ್ದೇವೋ, ಅಷ್ಟುಷ್ಟು ತೊಂದರೆಗಳ ದಾಸರಾಗುತ್ತಿದ್ದೇವೆಂದೆ ಅರ್ಥ.
ಕೊನೆಗೊಂದು ಮಾತು,
               ಆರಂಭದಲ್ಲಿ ಎಲ್ಲರೂ ಸನ್ಮಾರ್ಗದಲ್ಲೇ ಇರುತ್ತಾರೆ. ಹಣ, ಅಂತಸ್ತು, ಗೌರವ, ಹಿಂಬಾಲಕರ ಪಡೆ ಎಲ್ಲವೂ ಬಂತು ಜೀವನ ಶೈಲಿಯೇ ಬದಲಾಗುತ್ತೆ. ಎಲ್ಲಾ ಸೌಲಭ್ಯಗಳು ಬಂದಾಗ ಆದರ್ಶ, ತನ್ನ ತನ ಎಲ್ಲವನ್ನೂ ಮರೆಯುವ ಗತಿ ಬಂದೆರಗುವುದು ಖಚಿತ. ಅದೇನೆ ಇರಲಿ ನಾ ಬದುಕೋ ಶೈಲಿ, ಇಷ್ಟು ದಿನ ಉಳಿಸಿಕೊಂಡು ಬಂದಿರೋ ನನ್ನ ವೈಖರಿ ಇತ್ಯಾದಿಗಳು ಈ ಭರದ ಆಧುನೀಕತೆಯ ಜೀವನದಲ್ಲಿ ಸಿಕ್ಕಿ ಕೊಚ್ಚಿಕೊಂಡು ಹೋಗದಿದ್ದರೆ ಸಾಕು. ಟೆನ್ಷನ್ ಲೈಫ್ ಬಿ.ಪಿ ತರಿಸದಿದ್ದರೆ ಸಾಕು. ಅದಕ್ಕಾಗಿ ಕಳೆದ ಹಳೆಯ ದಿನಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಮೈಮರೆಯುವೆ, ಖುಷಿ ಪಡುವೆ... ನಮಗೆ ನೆನೆಸಿಕೊಳ್ಳಲಾದರೂ ಆ ದಿನದ ನೆನಪುಗಳಿವೆ, ನಮ್ಮ ಮೊಮ್ಮಕ್ಕಳಿಗೆ ಅದು ಇಲ್ಲ. ಬರುವ ದಿನಗಳು ಭಯ ತರಿಸುತ್ತಿವೆ...ಏನೂ ಇಲ್ಲದ ಸಂಧರ್ಭಗಳಲ್ಲೇ ಬದುಕು ಚೆನ್ನಾಗಿತ್ತು ಎನಿಸುತ್ತಿದೆ...

ಚಿತ್ರರಂಗದ ಸಮಸ್ಯೆಯ ಸುತ್ತ-ಸಿರಿ ಬುಲೆಟ್

ಕನ್ನಡ ಚಿತ್ರರಂಗಕ್ಕೆ ಸೆಡ್ಡು
ಹೊಡೆತ ತಿಂದರೆ ಹೊಂದುವವರ್ಯಾರು ಭಾಷೆಗೆ
ಪರಭಾಷೆಯ ಚಿತ್ರಗಳಿಗೆ ರತ್ನಗಂಬಳಿ, ಬಂದಿದೆ ಕನ್ನಡ ಚಿತ್ರರಂಗಕ್ಕೀಗ ಅಳಿ ಅಥವಾ ಉಳಿ...
ಗಾಂಧಿನಗರದಲ್ಲೇ ಕನ್ನಡ ಚಿತ್ರಕ್ಕಿಲ್ಲ ಥಿಯೇಟರ್...

   

ವರ್ಷಂಪ್ರತಿಯೂ ರಾಜ್ಯೋತ್ಸವ ಆಚರಣೆ ಮಾಡಿ, ತನು ಕನ್ನq, ಮನ ಕನ್ನಡ ಎನ್ನುವ ಘೋಷ ವಾಕ್ಯದೊಂದಿಗೆ ಪ್ರತಿಬಾರಿಯೂ ಜೈ ಎನ್ನುವಂತೆ ಈ ಬಾರಿಯೂ ಕೈ ಎತ್ತಿ, ಕೂಗಿ ಕರತಾಳನವನ್ನು ಮಾಡಿ, ತಾಯಿ ಕನ್ನಡಾಂಬೆಯ ಮಕ್ಕಳು ನಾವು, ಕನ್ನಡಕ್ಕಾಗೇ ನಮ್ಮುಸಿರು ಎಂದೆಲ್ಲಾ ಬೊಬ್ಬಿರಿದು, ವಿಜೃಂಭಣೆಯಲ್ಲಿ ಸಭೆ ಸಭಾರಂಭವನ್ನು ಮುಗಿಸಿ, ತಮ್ಮ ತಮ್ಮ ಮನೆಗೆ ತೆರಳಿ ಸುಮ್ಮನೆ ಕುಳಿತಿದ್ದೇವೆ. ಇನ್ನೂ ಕೆಲವರು ಹಿಂದಿನ ವರ್ಷಗಳ ಆಯೋಜನೆಗಿಂತ ಒಂದು ಪಟ್ಟು ಜಾಸ್ತಿ ಅದ್ಧೂರಿಯನ್ನೇ ಕೈಗೊಂಡು, ಸಿನಿಮಾ ತಾರೆಯರ, ಧುರೀಣರ, ಗಣ್ಯರ ಆಗಮನಭಿಲಾಷೆಯಿಂದಲೇ ಹಾಡಿ, ಕುಣಿದು, ಕುಪ್ಪಳಿಸಿ ಭಾಷಾಭಿಮಾನ ಮೆರೆದಿದ್ದಾರೆ. ಮತ್ತೂ ಹಲವರು ಇನ್ನೂ ಕೂಡ ರಾಜ್ಯೋತ್ಸವದ ಹಬ್ಬ ನಡೆಸುತ್ತಲೇ ಇದ್ದಾರೆ, ಅಂಗಡಿ ಮುಂಗಟ್ಟುಗಳಿಂದ ಸಹಾಯಧನದ ನೆಪದಲ್ಲಿ ಹಣ ಕೀಳುತ್ತಲೇ ಇದ್ದಾರೆ, ಫಂಕ್ಷನ್ ಆಯೋಜನೆಯಲ್ಲಿ ದಿನದೂಡುತ್ತಿದ್ದಾರೆ... ಇರಲಿ ಅದೇನೆ ಇರಲಿ, ವರ್ಷವಿಡೀ ರಾಜ್ಯೋತ್ಸವ ಮಾಡಬೇಕೆಂಬ ಮಾತು ಕೇಳಿ ಕೇಳಿ ನಮಗೂ  ಹೀಗೆಲ್ಲಾ ನಡೆದರೆ ಇಡೀ ವರ್ಷ, ಕನ್ನಡಾಂಬೆಯ ಪೂಜೆಯನ್ನು ನೋಡಿ ಕಣ್ಮನ ಸೆಳೆದುಕೊಳ್ಳಬಹುದೆಂಬ ಆತ್ಮತೃಪ್ತಿಯೂ ಇದೆ.
 ಈ ಅನಿಯಮಿತ ಅದ್ಧೂರಿ ಸಮಾರಂಭಗಳು ಕೇವಲ ಇಲ್ಲಿನವರ ಕನ್ನಡ ಹೃದಯಾಭಿಮಾನಕ್ಕೆ ಮಾತ್ರಾ ಸೀಮಿತವಾ? ಅಥವಾ ಇಲ್ಲಿ ಬಂದು ನೆಲೆಸುವ ಪ್ರತಿ ಬಂಧು ಬಾಂಧವರಿಗೂ ಸಮರ್ಪಣೆಯಾ? ಎನ್ನುವುದರ ಬಗ್ಗೆ ಬಹುಶಃ ಯಾರೂ ಚಿಂತಿಸುವ ಮನಸ್ಸು ಮಾಡಿಲ್ಲ ಅನಿಸುತ್ತಿದೆ. ಕನ್ನಡ ಶಾಲೆಗಳು, ಕನ್ನಡ ಮಾತನಾಡುವ ದಿನಚರಿಗಳು, ಕನ್ನಡ ಕಲಿಸುವ ಡಿಂ ಡಿಮಾಗಳು ಅಲ್ಲಲ್ಲಿ ತನ್ನ ಕಳೆಬರಗಳನ್ನು ಕಳಚಿಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯಾದರೂ, ಹೋರಾಟದ ಹೆಸರಿನ ಜೊತೆ ಅಲ್ಲಲ್ಲಿ ಅವುಗಳ ಬಗ್ಗೆ ಮಾತುಕಥೆ, ಚರ್ಚೆ ಇತ್ಯಾದಿಗಳ ಚರ್ಯೆಯು ಕಂಡುಬರುತ್ತಿದೆ. ಸುಮಾರು ಅಷ್ಟು ವರ್ಷಗಳ!!!.., ಸುಮಾರು ಇಷ್ಟು ಶತಮಾನಗಳ!!!..,ಅದು-ಇದು ಇದೆ... ಎಂದು ಕೊಚ್ಚಿಕೊಳ್ಳುವ ನಾವುಗಳೇ ಇಂದು ಕನ್ನಡದ ಉಳಿವನ್ನು ಅಥವಾ ಅದರ ಉಳಿವಿನ ಚಿಂತೆಯನ್ನು ಎಷ್ಟು ಸೀರಿಯಸ್ ಆಗಿ ತೆಗೆದುಕೊಂಡಿದ್ದೇವೆಂದು ಮಥಿಸಿದರೆ ಉತ್ತರ ಎಷ್ಟು!!?? ಎನ್ನುವ ಖ್ವಷನ್ ಮಾರ್ಕ್‍ಗೆ ತಿರುಗುತ್ತದೆ. ಇದು ಆಶ್ಚರ್ಯವಾದರೂ ಸತ್ಯ...
 ಎಲ್ಲಾ ಕಡೆಯಿಂದಲೂ ಕನ್ನಡ ನಾಡು ನುಡಿಗೆ ದಬ್ಬಾಳಿಕೆಯ ಬಿಸಿ ಮುಟ್ಟುತ್ತಿದೆ ಬಹುತೇಕ ಎನ್ನುವ ಎಲ್ಲವೂ ಬೇರೆ ಭಾಷೆಗಳ ಲೀನತೆಗೆ ಹೊಂದಿಕೊಳ್ಳುತ್ತಿದೆ, ವಿದ್ಯೆ, ವ್ಯವಹಾರ, ಕಸುಬು, ಕೈಗಾರಿಕೆ ಇತ್ಯಾದಿಗಳಲ್ಲೂ ಅನ್ಯಭಾಷೆಯೇ ಮೇಲುಗೈ ಸಾಧಿಸಿ ನಮ್ಮೂರಲ್ಲೇ, ನಮ್ಮನ್ನವನ್ನೇ ತಿಂದು, ನಮ್ಮ ನೀರನ್ನೇ ಕುಡಿದು ಕ್ಯಾಕರಿಸಿ ನಮ್ಮ ಮುಖಕ್ಕೆ ಉಗಿಯುತ್ತಿದೆ. ಹೀಗೆ ಹೋದರೆ ಮುಂದಿನ ಗತಿ...!?
 ಇಂತಹ ಒಂದು ಸಂಚಕಾರ ಇತ್ತೀಚಿಗೆ ಮನೋರಂಜನೆಯ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ತಯಾರಾಗುವ ಪ್ರತಿ ಪ್ರೋಗ್ರಾಮ್‍ನಿಂದ ಹಿಡಿದು, ಅದನ್ನು ನಡೆಸುವ ಇನ್ ಚಾರ್ಜರ್ ಕೂಡ ಅನ್ಯರಾಜ್ಯದವನೇ ಆಗಿದ್ದು ನಮ್ಮನ್ನು ಬುಗುರಿಯಾಡಿಸುತ್ತಿದ್ದಾನೆ. ಈ ಸರದಿ ಇದೀಗ ಜನಸಾಮಾನ್ಯರ ಅತ್ಯಮೂಲ್ಯ ಮನೋರಂಜನೆಯ ಭಾಗವಾಗಿರುವ ಸಿನಿಮಾರಂಗಕ್ಕೂ ಕಾಲಿಟ್ಟಿದ್ದು, ಇದರ ಬಗ್ಗೆ ಮಂಡಳಿಯವರು ಸರಿಯಾದ ನಿರ್ಧಾರ ತೆಗೆದುಕೊಳ್ಳದೇ ಹೋದಲ್ಲಿ ಮುಂದೊಂದು ದಿನ ನಮ್ಮ ಇಂಡಸ್ಟ್ರೀಯೂ ಮೂಲೆಗುಂಪಾಗಿ, ಪರಭಾಷೆಯ ಚಿತ್ರಗಳ ಎದುರು ತಲೆ ಎತ್ತಿ ನಿಲ್ಲುವುದು ಕಷ್ಟಸಾಧ್ಯ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
ನಮ್ಮ ಕನ್ನಡ ಚಿತ್ರರಂಗಕ್ಕೆ ನೇರ ಅಥವಾ ದೂರ ಸಂಪರ್ಕ ಹೊಂದಿರುವ ಯಾರಾದರೂ ಒಬ್ಬರನ್ನು, ಸ್ಯಾಂಡಲ್‍ವುಡ್ ಸಮಸ್ಯೆ ಏನು!? ಎಂದು ಕೇಳಿದರೂ ಸಾಕು, ‘ಪರಭಾಷೆ ಚಿತ್ರಗಳ ದಾಳಿ’, ‘ಕನ್ನಡಿಗರು ಚಿತ್ರಮಂದಿರಕ್ಕೆ ಬರುವುದಿಲ್ಲ’ , ‘ಕನ್ನಡ ಚಿತ್ರಗಳನ್ನು ನೋಡುವುದಿಲ್ಲ’, ಎಂಬೆಲ್ಲಾ ಉದ್ಧುದ್ದ ಭಾಷಣ ಬಿಗಿಯುತ್ತಾರೆ. ಅವರು ಹೇಳುವ ಮಾತು ಸರಿಯಾಗಿಯೇ ಇರಬಹುದು ಹಾಗೆಯೇ ಅದಕ್ಕೆ ಕಾರಣಗಳು ಹಲವಿರಬಹುದು ಆದರೆ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ನನಗೆ ತೋರುವುದೇನೆಂದರೆ, ಈ ಎಲ್ಲಾ ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಚಿತ್ರರಂಗವೇ ಹೊಣೆ!... ಅದು ಪ್ರತ್ಯಕ್ಷವಾಗಿರಬಹುದು ಅಥವಾ ಪರೋಕ್ಷವಾಗಿರಬಹುದು.
ಕನ್ನಡ ಚಿತ್ರರಂಗಕ್ಕೆ ತವರು ಮನೆಯಾಗಿರುವ ಗಾಂಧಿನಗರದಲ್ಲೇ, ಇಂದು ನಮ್ಮ ಭಾಷೆಯ ಹೀರೋಗಳ ಕಟೌಟ್  ಬೀಳಬೇಕಾದ ಸ್ಥಳಗಳಲ್ಲಿ, ಅನ್ಯಭಾಷೆಯ ಹೀರೋ ಒಬ್ಬನ ಕಟೌಟ್ ನಿಲ್ಲಿಸಿ ಅವರ ಸಿನಿಮಾಗಳನ್ನು ಗೆಲ್ಲಿಸುವಷ್ಟು ಆಳವಾದ ಬೇರನ್ನು ಬಿಟ್ಟಿದೆ ಪರಭಾಷೆ. ವರ್ಷಗಳ ಹಿಂದೆ ಮೆಜೆಸ್ಟಿಕ್ ಒಂದರಲ್ಲೇ ಸಾಲು ಸಾಲಿದ್ದ ಸಿನಿಮಾ ಥೀಯೇಟರ್‍ಗಳು ಇಂದು  ಕೆಲವೇ ಕೆಲವು ಎಣಿಕೆಗಳಿಗೆ ಬಂದು ನಿಂತಿದೆ. ಇನ್ನೂ ರಾಜ್ಯದ ವಿವಿಧ ಪ್ರದೇಶಗಳಲ್ಲಿದ್ದ ಅದೆಷ್ಟೋ ಚಿತ್ರಮಂದಿರಗಳು ಹೇಳ ಹೆಸರಿಲ್ಲದಂತೆ ಮುಚ್ಚಿದೆಯೋ ನಾ ಕಾಣೆ...
ಯಾಕೆ ಈ ಸಮಸ್ಯೆ???, ಯಾಕೆ ಈ ಸಂಕಷ್ಟ???.
ಒಂದು ಕಡೆ ಹೈ ಬಜೆಟ್, ಇನ್ನೊಂದು ಕಡೆ ಡಬ್ಬಿಂಗ್ ಭೂತ. ಇವೆರಡು ಕನ್ನಡ ಚಿತ್ರರಂಗಕ್ಕೆ ನುಂಗಲಾರದ ತುತ್ತಾಗಿದ್ದು, ವಾರಂಪ್ರತಿ ಎಷ್ಟೆóóಷ್ಟೋ ಸಿನಿಮಾಗಳು ತೆರೆ ಕಂಡರೂ, ಚಿತ್ರಮಂದಿರ ಸಿಗದೇ  ಎತ್ತಂಗಡಿಯಾಗುತ್ತಿರುವುದು ನೋಡಿದರೆ ಕನ್ನಡಕ್ಕೆ, ಕನ್ನಡ ಚಿತ್ರಗಳಿಗೆ ಎಷ್ಟೆಲ್ಲಾ ಸಂಚಕಾರ ಬಂದಿದೆ ಎಂಬುದನ್ನು  ಅರಿಬಹುದಾಗಿದೆ. ಕನ್ನಡ ಚಿತ್ರಗಳು ಗೆಲ್ಲಬೇಕಾದ ಪ್ರಮುಖ ಭಾಗಗಳಲ್ಲೇ ಪರಭಾಷೆ ಚಿತ್ರಗಳು ತಮ್ಮ ದರ್ಪವನ್ನು ತೋರ್ಪಡಿಸುತ್ತಿದ್ದರೂ, ಕೈ ಕಟ್ಟಿ ಕುಂತಿದೆ ನಮ್ಮ ವಾಣಿಜ್ಯ ಮಂಡಳಿ. ಇದಕ್ಕೇನಂತೀರಾ?...
 ರಾಜ್ಯದಲ್ಲಿ ಪರಭಾಷೆ ಚಿತ್ರಗಳ ಹಾವಳಿ ತಡೆಯಲು ಚಲನಚಿತ್ರ ಮಂಡಳಿ ಯಾವುದೇ ಆಸಕ್ತಿ ತೋರುತ್ತಿಲ್ಲ. ಖುರ್ಚಿಯಲ್ಲಿರುವವರಿಗೆ ಕೇವಲ ಅಧಿಕಾರ ಅನುಭವಿಸುವುದೊಂದೆ ಧ್ಯೇಯವಾಗಿದೆ. 1934 ರಲ್ಲಿ ತೆರೆಕಂಡ ‘ಸತಿಸುಲೋಚನ’ ಎಂಬ ಮೊದಲ ವರ್ಣಮಯ ಚಿತ್ರ ಕಾಲಿರಿಸಿದ್ದರಿಂದ ಹಿಡಿದು ರಾಜ್ ಮತ್ತು ವಿಷ್ಣುವರ್ಧನ್‍ರವರ ಕೊನೆ ದಿನಗಳವರೆಗೂ ಕನ್ನಡ ಚಿತ್ರರಂಗ ಮೇರು ಶಿಖರದ ಹೆಸರು, ಅಭಿಮಾನ, ಅವಕಾಶ, ಗೆಲುವು ಎಲ್ಲವನ್ನು ಹೊಂದಿತ್ತು. ಆದರೆ ಇಂದು ಕಾಲಿರಿಸುತ್ತಿರುವ ಹೊಸ ಹೊಸ ಟೇಸ್ಟ್‍ಗಳು ಇಡೀ ಚಿತ್ರರಂಗವನ್ನೇ ಗುಲ್ಲೆಬ್ಬಿಸಿ ಬಿಟ್ಟಿವೆ. ಮಂಡಳಿಯ ಮುಖ್ಯಸ್ಥರೇ ನಿಮಗ್ಯಾಕೆ ಬೇಕು ಆ ಅಧಿಕಾರ. ನಿಮ್ಮನ್ನಲ್ಲಿ ಕುಳಿಸಿರುವುದು ಕೇವಲ ಸಿನಿಮಾ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವುದು, ಸರ್ಕಾರದಿಂದ ಬಿಡುಗಡೆಯಾಗುವ ಕಾಂಚಾಣವನ್ನು ತಮ್ಮ ಖಜಾನೆಗೆ ತುಂಬಿಕೊಳ್ಳುವುದು, ಪತ್ರಿಕೆ, ಟಿ.ವಿ ಚಾನೆಲ್‍ಗಾಗಿ ಆ ಸಿನಿಮಾ, ಈ ಸಿನಿಮಾದ ಪ್ರೆಸ್ ಮೀಟ್ ನಡೆಸಿ  ಅದರಲ್ಲಿಷ್ಟು ದುಡ್ಡು ಹೊಡೆಯುವುದು ಮಾಡುವುದಕ್ಕಲ್ಲ. ಬದಲಾಗಿ ಎಲ್ಲಿ ನಮ್ಮ ಭಾಷೆಯ ಚಿತ್ರಗಳಿಗೆ ಅಡ್ಡಿ ಬರುತ್ತಿದೆ?, ನಮ್ಮ ಭಾಷೆಯ ಚಿತ್ರ ಬಿಡುಗಡೆಗಳ ಸಮಸ್ಯೆ ಏನು!?, ಇತ್ಯಾದಿಗಳ ಬಗ್ಗೆಯೂ ಚರ್ಚಿಸಿ, ಗಮನಿಸಿ ಹೋರಾಡಲಿ ಎನ್ನುವುದಕ್ಕೆ...ಬಹುಶಃ ಇದು ನಿಮಗೆಲ್ಲಿ ತಿಳಿಯುತ್ತೇ. ಹೊರಗೆ ಒದ್ದಾಡಿ ಸಾಯುವವರು ನೀವಲ್ಲವಲ್ಲ...
ಒಂದು ಅಂದಾಜಿನ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನಲ್ಲಿ ತೆಲುಗು ಚಿತ್ರಗಳು 60 ಕ್ಕೂ ಹೆಚ್ಚಿನ ಚಿತ್ರಮಂದಿರ, ತಮಿಳು ಚಿತ್ರಗಳು 40 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿವೆಯಂತೆ. ಹೀಗಿರುವಾಗ ಕನ್ನಡ ಸಿನಿಮಾಗಳನ್ನು ನೋಡಬೇಕೆಂದರೂ ಎಲ್ಲರಿಗೂ ನೋಡಲಾಗುತ್ತದೆಯೇ!!?  ನೀವೇ ಹೇಳಿ...
ಬಹುಶಃ ಬೆಂಗಳೂರಿ£ ಒಳಪ್ರದೇಶವೆನಿಸಿಕೊಂಡಿರುವ ಕೆಲವೊಂದು ಸಂಧಿಗೊಂದಿಗಳಿಗೆ ಹೋದರೆ ಕನ್ನಡ ಭಾಷೆ ಮಾತನಾಡುವವರೆ ಸಿಗುತ್ತಿಲ್ಲ, ಅಂಥದ್ದರಲ್ಲಿ ಕನ್ನಡ ಸಿನಿಮಾಗಳು ನೋಡಲು ಸಿಗುತ್ತವೆಯೇ!?. ಎಷ್ಟೋ ಜನ ಸಿನಿಮಾ ನೋಡಲು ಮಲ್ಟೀಪ್ಲೆsÉಕ್ಸ್‍ಗಳಿಗೆ ದುಬಾರಿ ಹಣವನ್ನು ಕೊಟ್ಟು ಕೂರಬೇಕಾದ ಸಂಧರ್ಭ ಇಂದೊದಗಿದೆ ಎಂದರೆ ಅದಕ್ಕೆ ಈ ಮೇಲಿನ ಸಮಸ್ಯೆಯೇ ಕಾರಣ. ಅಂತಹವರಲ್ಲಿ ನಾನು ಒಬ್ಬ. ಯಾಕೆಂದರೆ ನಮ್ಮ ಏರಿಯಾದಲ್ಲಿ ಹಾಲು ಮಾರುವವನು ಕೂಡ ಕನ್ನಡ ಮಾತನಾಡುತ್ತಿಲ್ಲ. ನಮ್ಮ ಏರಿಯಾದಲ್ಲಿ ಒಂದೇ ಒಂದು ಕನ್ನಡ ಸಿನಿಮಾವನ್ನು ಪ್ರದರ್ಶನಕ್ಕಿಡುತ್ತಿಲ್ಲ. ಕನ್ನಡ ಸಿನಿಮಾ ನೋಡಬೇಕು ಎಂದರೆ ನಗುತ್ತಾರೆ. ಅತ್ತ ಕಡೆ ಮಲ್ಟೀಫ್ಲೇಕ್ಸ್ ಥೀಯೇಟರ್‍ಗಳು ದುಬಾರಿ ಹಣ ಪಡೆದು ಸಾಯಿಸುತ್ತಾರೆ...ಎಲ್ಲಿಗೆ ಹೋಗಲಿ ನಾನೊಬ್ಬ ಸಾಮಾನ್ಯ ಪ್ರೇಕ್ಷಕ. ಪ್ರೇಕ್ಷಕ ನೊಂದರೆ ಸದಭಿರುಚಿಯೂ ನೋಯುವುದಿಲ್ಲ, ಕಡಿಮೆಯಾಗುವುದೂ ಇಲ್ಲ. ಬದಲಾಗಿ ಬೇರೆ ಕಡೆ ವಾಲಬಹುದು ಎಚ್ಚರವಹಿಸಿ...
ಭಾಷೆಯ ಮೇಲಿನ ಅಭಿಮಾನ ಹಾಗೂ ಉತ್ತಮ ಚಿತ್ರಗಳು ಬಂದರೆ ಬೇರೆ ಭಾಷೆಯ ಯಾವುದೇ ಚಿತ್ರ ರಿಲೀಸ್ ಆದರೂ ಅದನ್ನು ಬದಿಗಿಟ್ಟು  ಕನ್ನಡ ಸಿನಿಮಾ ನೋಡಲು  ಜನರು ಬಂದೇ ಬರುತ್ತಾರೆ. ಹಾಗಂದ ಮಾತ್ರಕ್ಕೆ ಕನ್ನಡದಲ್ಲಿ ಉತ್ತಮ ಚಿತ್ರಗಳು ಕಡಿಮೆ ಇವೆ ಅಂತಲ್ಲ ಆದರೆ ಅದು ಪರಭಾಷೆ ಚಿತ್ರದೊಂದಿಗೆ ಪೈಪೋಟಿ ಇಳಿಯಲು ಸಿದ್ಧವಿಲ್ಲ. ಇಳಿದರೂ ಸೋಲಬೇಕಾದ ಪರಿಸ್ಥಿತಿ ನಮ್ಮವರೇ ತಂದಿದ್ದಾರೆ. ಕಾರಣ ‘ಚಿತ್ರಮಂದಿರಗಳ ಅಭಾವ’.
ಯಾವ ಭಯವೂ ಬೇಡ ನಮ್ಮಲ್ಲಿ ಬ್ಯುಸಿನೆಸ್‍ಗೇನೂ ಕೊರತೆ ಇಲ್ಲ. ಸಮಸ್ಯೆ ಎಲ್ಲಿಯೂ ಇಲ್ಲ ನಮ್ಮೊಳಗೆ ಇದೆ. ಖುರ್ಚಿಯಲ್ಲಿ ಕುಳಿತಿರುವವರು ಎದ್ದು ನಿಲ್ಲುತ್ತಿಲ್ಲ, ಅಧಿಕಾರ ದಾಹ ತೀರುತ್ತಿಲ್ಲ, ಹೆಸರು ಮಾಡಿರುವವರು ಕ್ರೀಯಾತ್ಮಕವಾಗಿ ಕೆಲಸ ಮಾಡುತ್ತಿಲ್ಲ,  ಹೆಸರಿಲ್ಲದವರು ಬಡಾಯಿ ಮಾತುಗಳನ್ನಾಡುವುದು ಬಿಡುತ್ತಿಲ್ಲ. ತಣ್ಣಗಿರುವಾಗ ಇದೆಲ್ಲಾ ನಮ್ಮದಲ್ಲವೆಂದು ತಮ್ಮ ಪಾಡಿಗೆ ಅವರವರ ಚಿತ್ರ ಬಿಡುಗಡೆ ಮಾಡಿ ಹಣ ಸಂಪಾದಿಸಿಕೊಂಡು ಸುಮ್ಮನೆ ಕೂರುವರಿಗೇನು ಕಡಿಮೆ ಇಲ್ಲ. ಕನ್ನಡ ಚಿತ್ರರಂಗದ ಉಳಿವಿಗಾಗಿ ಮತ್ತು ಅಭಿವೃದ್ಧಿಗಾಗಿ ಯಾರೂ ಪ್ರಯತ್ನಿಸುತ್ತಿಲ್ಲ. ಅನ್ಯಭಾಷೆಯ ಚಿತ್ರಕ್ಕೆ ಕೋಟಿ ಕೋಟಿ ಸುರಿದು ಖರೀದಿಸುವವರು ನಮ್ಮ ಭಾಷೆಯ ಚಿತ್ರಗಳನ್ನು ಮುಟ್ಟಿ ಮೂಸುತ್ತಿಲ್ಲ...
ಇಂತಹ ಸಮಸ್ಯಾ ಸಂಧಿಯಲ್ಲಿ ಸಿಲುಕಿರುವ ಚಿತ್ರೋದ್ಯಮ ಈ ಹೊತ್ತಿನಲ್ಲಿ ಒಗ್ಗಟ್ಟು ಪ್ರದರ್ಶಿಸಲೇಬೇಕಾಗಿದೆ. ನಿರ್ದೇಶಕರು ನಿರ್ಮಾಪಕರು ಮಾತ್ರವಲ್ಲದೇ ನಟ- ನಟಿಯರು ಕೂಡ ಪರಭಾಷೆಯ ಹಾವಳಿ ತಡೆಯಲು ಮುಂದಾಗಬೇಕಾಗಿದೆ. ಈ ಹಿಂದೆ ಪರಭಾಷೆಯ ಚಿತ್ರಗಳು ಕೇವಲ ಇಪ್ಪತ್ತೇಳು ಚಿತ್ರಮಂದಿರದಲ್ಲಿ ಮಾತ್ರಾ ಬಿಡುಗಡೆಯಾಗಬೇಕು ಎನ್ನುವ ಒಪ್ಪಂದ ರೂಡಿಯಲ್ಲಿತ್ತು. ಆದರೆ ಆ ನಂತರ ಕೆಲವು ಚಿತ್ರಗಳು ಇನ್ನೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗತೊಡಗಿದವು. ಕೊನೆಗೆ ಅದು ನ್ಯಾಯಾಲಯದ ಮೆಟ್ಟಿಲೇರಿತು. ತೀರ್ಪು ಪರಭಾಷಿಕ ಚಿತ್ರ ತಯಾರಕರ ಪರವಾಗಿ ಬಂತು. ಇದರಿಂದ ಇನ್ನಷ್ಟು ಹೊಡೆತ ನಮಗಾಯಿತು. ಕೆಲ ವರ್ಷಗಳ ಹಿಂದೆ ಮಲಯಾಳಿ ಚಿತ್ರಗಳು ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿರಲಿಲ್ಲ. ಆದರೆ ಇದೀಗ ಅವು ಕೂಡ  ಲಾಭ ಮಾಡಿಕೊಳ್ಳುತ್ತಿವೆ. ತಮಿಳುನಾಡು ಸರ್ಕಾರ ಪರಭಾಷಾ ಚಿತ್ರಗಳ ಬಿಡುಗಡೆಗೆ ಸಂಬಂಧಿಸಿದಂತೆ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಿದ್ದು ಈ ಬಗ್ಗೆ ನಾವು ಕೂಡ ಚಿಂತನೆ ನಡೆಸಬೇಕಾಗಿದೆ.
ವರನಟ ಡಾ. ರಾಜ್‍ಕುಮಾರ್‍ರವರು ಅಂದು ನನ್ನ ಕ್ಷೇತ್ರ ಅಲ್ಲ ಎಂದು ಗೋಕಾಕ್ ಚಳುವಳಿಯಲ್ಲಿ ಇಳಿಯದಿದ್ದರೆ, ಚಳುವಳಿಗೆ ಅಷ್ಟು ಜನ ಸೇರುತ್ತಲೇ ಇರಲಿಲ್ಲ, ಚಳುವಳಿ ಆಗುತ್ತಲೇ ಇರಲಿಲ್ಲ. ಅವರ ಸಿನಿಮಾಗಳನ್ನು ನೋಡಿ ಬೆಳೆದವರು ನಾವು. ಅವರ ಸಿನಿಮಾಗಳಿಂದ, ಅವರ ನಡವಳಿಕೆಗಳಿಂದ ಕೆಲವನ್ನಾದರೂ ಅನುಸರಿಸಿದರೆ  ಕನ್ನಡ ಮತ್ತು ಕರ್ನಾಟಕ ಚಿತ್ರರಂಗ ಮತ್ತೆ ಹಿಂದಿನ ದಿನಗಳನ್ನು ನೋಡಬಹುದು!!! ಎನಿಸುತ್ತದೆ. ಏನಂತೀರಾ???...