Saturday 7 November 2015

ಚಿಂತನೆಯಿಂದ ಅಳಿಯದು ಉಳಿವಿನ ಚಿಂತೆ...


“ದೂರದ ಆಂಧ್ರಪ್ರದೇಶಕ್ಕೆ ಸೇರಿದ  ರಾಯದುರ್ಗದ ಮೋಣಕಾಲ್ಮೂರಿನಿಂದ 11 ಕಿ.ಮೀ ದೂರದಲ್ಲಿರುವ ಆಂಧ್ರಕರ್ನಾಟಕ ಗಡಿಭಾಗದ ಊರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ”.
 ಹೀಗೋಂದು ಅಚ್ಚರಿಯ ಸುದ್ಧಿ ಕೇಳಿ ಪುಳಕಗೊಂಡೆ...
                           ನಿಜ ಕೇವಲ ರಾಯದುರ್ಗವಷ್ಟೇ ಅಲ್ಲದೇ ರಾಜ್ಯದ ಗಡಿ ಭಾಗದಲ್ಲಿರುವ ಹಿರಿಯೂರು, ಚಳ್ಳಕೇರೆ, ಮೊಣಕಾಲ್ಮುರು ತಾಲ್ಲೂಕುಗಳು, ಅಲ್ಲಿನ ಅನೇಕ ಹಳ್ಳಿಗಳು, ಮೊಣಕಾಲ್ಮೂರಿನ ನೆರೆಯ ತಾಲ್ಲೂಕುಗಳು, ನೆರೆಯ ಆಂಧ್ರಪ್ರದೇಶದ ಹಳ್ಳಗಳೊಂದಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಭಾವನಾತ್ಮಕವಾಗಿ ಪರಸ್ಫರ ಸಂಬಂಧವನ್ನು ಹೊಂದಿರುವುದು ಮಾತ್ರವಲ್ಲದೇ, ಗಡಿಭಾಗದಲ್ಲಿರುವ ಏರಡೂ ರಾಜ್ಯಗಳ ಹಳ್ಳಿಗಳಲ್ಲಿ  ಆಚಾರ, ವಿಚಾರ, ಸಂಸ್ಕøತಿಗಳು ಅದೆಲ್ಲಕ್ಕಿಂತ ಹೆಚ್ಚಾದ ಬುಡಕಟ್ಟು ಸಂಸ್ಕೃತಿ ಒಂದೇ ರೀತಿಯಲ್ಲಿವೆ. ಒಂದು ಮಾಹಿತಿಯ ಪ್ರಕಾರ ಇಡೀ ಆಂಧ್ರದಾದ್ಯಂತ 84 ಕನ್ನಡ ಶಾಲೆಗಳಿದ್ದು, ಅಲ್ಲಿನ ಮಕ್ಕಳು ಕನ್ನಡ ವಿಧ್ಯಾಭ್ಯಾಸವನ್ನೇ ಮಾಡುತ್ತಿದ್ದಾರಂತೆ. ಅಷ್ಟೇ ಅಲ್ಲದೆ ಗಡಿನಾಡಭಾಗದಲ್ಲಿರುವ ಜನ ಕನ್ನಡ ಸಾಹಿತ್ಯವನ್ನು ಓದುವ ಬರೆಯುವ ಹಾಗೂ ಅದರ ಬಗ್ಗೆ ಮಾತನಾಡುವಂತಹ ಅಭಿರುಚಿಯನ್ನು ಹೆಚ್ಚು ಮೈಗೂಡಿಸಿಕೊಂಡಿದ್ದು, ಅಲ್ಲಿ ಸುಮಾರು ಜನ ಕನ್ನಡ ಸಾಹಿತಿಗಳನ್ನು ನಾವು ಕಾಣಬಹುದಾಗಿದೆ ಎಂದರೆ ಅಚ್ಚರಿಯಾಗದೇ ಇರಲು ಸಾಧ್ಯವೇ ನೀವೆ ಹೇಳಿ... ನೋಡಿ ಕನ್ನಡ ಪ್ರೀತಿ ಅಂದರೆ ಇದು. ಗಡಿನಾಡಿನಲ್ಲಿದ್ದುಕೊಂಡು ನಾಡು ನುಡಿಯ ಕಂಪನ್ನು ಉಳಿಸುತ್ತಿರುವ, ಬೆಳೆಸುತ್ತಿರುವ ಅವರ ಮುಂದೆ ರಾಜಧಾನಿಯಲ್ಲಿದ್ದುಕೊಂಡು ಪರಭಾಷೆಯನ್ನು ಉಪಯೋಗಿಸುತ್ತಿರುವ ನಾವುಗಳು ಶೂನ್ಯರೆಂದರೆ ಯಾವ ತಪ್ಪಿಲ್ಲ ಬಿಡಿ...
               ನಿಜಕ್ಕೂ ಸತ್ಯ, ಕನ್ನಡ ಭಾಷೆ, ಅದರ ಉಳಿಯುವಿಕೆಯ ಬಗ್ಗೆ ಈಗಾಗಲೇ ಅನೇಕ ಬಾರಿ ಆಂದೋಲನ, ಜಾಗೃತಿಗಳನ್ನು ನಮ್ಮಲ್ಲಿ ನಾವೇ ಎತ್ತಿಕೊಂಡಿದ್ದರೂ, ಅದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಭಿತ್ತಿಕೊಂಡಿದ್ದರೂ, ಎಲ್ಲವೂ ಮುಗಿದ ಮೇಲೆ ನಾವು ಮೊರೆಹೋಗುವುದು ಅನ್ಯಭಾಷೆಗೆ!!!. ಏನು ಮಾಡಲಾಗದು ಸರ್, ವ್ಯವಹರಿಸಲು, ಆಧುನಿಕತೆಯ ಸರಪಳಿಯಲ್ಲಿ ಬದುಕಲು ಅನ್ಯಭಾಷೆ ಬೇಕೆ ಬೇಕು ಎನ್ನುತ್ತೀರಾ!?... ಇರಬಹುದು ಆದರೆ ಅದನ್ನೇ ನಮ್ಮ ಮುಂದಿನ ತಲೆಮಾರಿಗೆ ವರ್ಗಾಯಿಸಿ, ನೋಡಪ್ಪ ಅದನ್ನು ಬಿಟ್ಟರೆ ಸಾಧನೆ ಸಾಧ್ಯವಿಲ್ಲ. ನಮ್ಮ ಭಾಷೆ ಬೇಕಾಗಿಲ್ಲ ಅನ್ನುತ್ತಿರುವುದು ಎಷ್ಟು ಸರಿ!? ನೀವೆ ಹೇಳಿ!???. ನಾವು ಇಲ್ಲೇ ಹುಟ್ಟಿ ಇಲ್ಲೇ ಬೆಳೆದು, ಇಲ್ಲಿನ ಅನ್ನ ನೀರನ್ನೇ ಉಪಯೋಗಿಸಿಕೊಂಡು ನಮ್ಮ ತನವನ್ನೇ ಮರೆತು ಹೆತ್ತವ್ವನ ಭಾಷೆಯನ್ನೇ ಕಡೆಗಣಿಸುತ್ತಿರುವಾಗ, ರಾಜ್ಯದ ಗಡಿ ಭಾಗದಲ್ಲಿ ಇನ್ನೊಂದು ಭಾಷೆಯ ಕಲಿಕೆಯ ಒತ್ತಡವಿದ್ದರೂ ಕನ್ನಡದ ಭಾಷೆಯೇ ಬೇಕು ಎಂದು ಅತೀವ ಆಸಕ್ತಿ ವಹಿಸಿ, ವ್ಯವಹರಿಸಿ, ಶಿಕ್ಷಣ ವಿನಿಮಯಿಸಿಕೊಳ್ಳುತ್ತಿರುವ ಗಡಿನಾಡ ಜನರಿಗೆ ನಿಜಕ್ಕೂ ಸೆಲ್ವ್ಯುಟ್ ಹೊಡೆಯಬೇಕೆನಿಸುತ್ತದೆ.
ಕರ್ನಾಟಕದಲ್ಲಿ ಕನ್ನಡ ಉಳಿಸುವ ಬಗ್ಗೆ, ಬೆಳೆಸುವ ಬಗ್ಗೆ ಚರ್ಚೆ ಆಂದೋಲನಗಳು ನಡೆಯುತ್ತಲೇ ಇರುತ್ತವೆ. ವಿಚಾರವಾದಿಗಳು, ಬುದ್ಧಿಜೀವಿಗಳು ಭಾಷಣ ಬಿಗಿಯುತ್ತಲೇ ಇರುತ್ತಾರೆ. ಆದರೂ ಚಿಂತನೆಗಳಿಂದ ಕನ್ನಡz ಉಳಿವಿನ ಚಿಂತೆ ಮಾತ್ರ ಅಳಿಯುತ್ತಿಲ್ಲ. ಯಾವ ಚಿಂತನೆಗಳು ಕಾರ್ಯರೂಪಕ್ಕೆ ಇಳಿಯದ ಕಾರಣ ಕನ್ನಡದ ಸ್ಥಿತಿ ಇನ್ನೂ ಚಿಂತಾಕ್ರಾಂತವಾಗಿಯೇ ಇದೆ. ಮಾತೆತ್ತಿದರೆ ಕನ್ನಡ ಎಂದು ಹೋರಾಡುವವರೆ ತಮ್ಮ ಮಕ್ಕಳನ್ನು ಒಂಗ್ಲೀಷ್ ಸ್ಕೂಲ್‍ಗೆ ಸೇರಿಸುತ್ತಾರೆ, ದಿನದ ವ್ಯವಹಾರನ್ನು ಅನ್ಯಭಾಷೆಯ ಗೋಜಿಗೆ ಬಿದ್ದು ದಣಿವಾರಿಸಿಕೊಳ್ಳುತ್ತಿದ್ದಾರೆ. ಹೋರಾಟದ ಸಂಖ್ಯೆ, ಹೋರಾಟಗಾರರ ಸಂಖ್ಯೆ, ಅಳಿವಿ ಉಳಿವಿನ ಬಗ್ಗೆ ಮಾತನಾಡುವವರ ಸಂಖ್ಯೆ, ರಾಜಕೀಯ ಪಕ್ಷದ ಕನ್ನಡ ಹೇಳಿಕೆಯ ಕಂತೆ, ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೊಗುತ್ತಿದ್ದರೂ, ನಾಡಿನಲ್ಲಿರುವ ಇಂಗ್ಲೀಷ್ ಶಾಲೆಗಳ ಸಂಖ್ಯೆ, ಅಲ್ಲಿಗೆ ಮಕ್ಕಳನ್ನು ಕಳಿಸುವ ಪೋಷಕರ ಸಂಖ್ಯೆ, ದಿನೇ ದಿನೇ ಹೆಚ್ಚುತ್ತಿರುವ ಅನ್ಯಭಾಷೆಯ ಅಳವಡಿಕೆ, ಯಾವುದು ಕುಗುತ್ತಿಲ್ಲ. ಇಷ್ಟೇಲ್ಲಾ ಧ್ವಂಧ್ವಭಯದ ನಡುವೆಯೂ ಮತ್ತೊಂದು ರಾಜ್ಯೋತ್ಸವ ಬಂದೇ ಬಿಟ್ಟಿದೆ. ಹೋದ ವರ್ಷ ಹಾಕಿದ್ದ ಶಪತಗಳೆಲ್ಲವೂ ಅಲ್ಲೆ ಸತ್ತಿವೆ. ಭಯವಿಲ್ಲ ಈ ವರ್ಷ ಇನ್ನಷ್ಟೂ ಮಾರುದ್ದದ ಶಪತಗಳು ರಾರಾಜಿಸುತ್ತವೆ ಸಂದೇಹವೆ ಬೇಡ. ರಾಜಕೀಯ ಪುಡಾರಿಗಳೇ ದಯವಿಟ್ಟು ನಿಮ್ಮಲ್ಲೊಂದು ವಿನಂತಿ. ನಿಮ್ಮ ಬೆಳೆ ಬೇಯಿಸಿಕೊಳ್ಳಲು ನಮ್ಮ ತಾಯ ನುಡಿಯನ್ನು ಅಸ್ತ್ರವಾಗಿಸಿಕೊಳ್ಳದಿರಿ...
ಮುಖ್ಯವಾಗಿ ರಾಜಧಾನಿಯಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಕನ್ನಡ ಕಲಿಸುವ ಕಾರ್ಯ ಇಂದಿನ ತುರ್ತು ಅಗತ್ಯವಾಗಿ ಬಿಟ್ಟಿದೆಯೇನೊ ಎಂದೆನಿಸುವ ಸುಪ್ತತೆಗೆ ತೆರಳಿರುವುದು ವಿಷಾಧಕರ. ಇದಕ್ಕೆ ಕಾರಣ ಕನ್ನಡ ಭಾರದ ಅನ್ಯಭಾಷೆಯ ಜನ ಇಲ್ಲಿಗೆ ವಲಸೆ ಬಂದಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಕನ್ನಡ ಕಲಿಸುವ ಶಾಲೆಗಳ ಕೊರತೆ ಎನ್ನುವುದು ಎದ್ದು ಕಾಣುತ್ತದೆ.
ಸುಮಾರು 2000 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಕನ್ನಡ ನೆಲಕ್ಕೆ ಗಟ್ಟಿತನವಿದೆ, ಭವ್ಯ ಪರಂಪರೆ ಇದೆ. ಆದರೆ ನಾವು ಸ್ವಯಂ ಪ್ರೇರಿತರಾಗಿ ಉಳಿಸಿ ಬೆಳೆಸುತ್ತಿಲ್ಲ ಅಷ್ಟೆ. ನಮ್ಮ ಇಡೀ ಭಾರತ ದೇಶದಲ್ಲಿ ನೂರಾರು ಭಾಷೆಗಳು ಸಾವಿರಾರು ವರ್ಷಗಳಿಂದ ಸಹಭಾಳ್ವೆ ನಡೆಸುತ್ತಿದ್ದದ್ದು ನಿಮಗೆ ಗೊತ್ತೆ ಇರಬಹುದು.  ಅದನ್ನು 1929ರಲ್ಲಿ ಲೆಕ್ಕಾಚಾರದ ಆಯಾಮಕ್ಕೆ ತಂದ ಗ್ರಿಯರ್ಸನ್ ಎಂಬಾತ  ಸುಮಾರು 139 ಭಾಷೆಗಳು, 544 ಉಪಭಾಷೆಗಳು ಇವೆಯೆಂದು ಮೊಟ್ಟ ಮೊದಲಬಾರಿಗೆ ಭಾಷಾ ಪರಿವೀಕ್ಷಣೆಯಲ್ಲಿ ಗುರುತಿಸಿ ತಿಳಿಸಿದ್ದ. ನಂತರ 1961ರ ಜನಗನತಿಯು 1652 ವರ್ಗೀಕೃತ ಭಾಷೆಗಳು, 184 ಅವರ್ಗೀಕೃತ ಭಾಷೆಗಳು ಇವೆಯೆಂದು ಗುರುತಿಸಿತು. ಆನಂತರದಲ್ಲಿ ಒಟ್ಟು 22 ಭಾಷೆಗಳನ್ನು ಭಾರತೀಯ ಸಂವಿಧಾ£ದÀ 8ನೇ ಅನುಸೂಚಿಯ ಭಾಷೆಯಲ್ಲಿ ಸೇರಿಸಿದ್ದು ಇದರಲ್ಲಿ ಕನ್ನಡ ಭಾಷೆಯೂ ಒಂದು ಎನ್ನುವುದು ನಮ್ಮ ಹೆಮ್ಮೆಯ ವಿಷಯವಾಗಿದೆ. ಇಂತಹ ಪುರಾತÀನ ಮಹತ್ವವಿರುವ, ಪ್ರತಿಶತ 99.99ರಷ್ಟು ವೈಜ್ಞಾನಿಕ ಹಾಗೂ ತರ್ಕಬದ್ಧವಾದ ನಮ್ಮ ಭಾಷೆಯನ್ನು ಉಳಿಸಿ-ಬೆಳೆಸಬೇಕಾದ ನಾವೇ ಇಂದು ಮೂಲೆ ಸೇರುತ್ತಿರುವುದು ನೋವಿನ ವಿಚಾರ. ಏನಾದರಾಗಲಿ ಎದ್ದು ಹೊರಾಡೋಣ ನಮ್ಮ ನಾಡು ನುಡಿಯನ್ನು ಎತ್ತಿ ಬೆಳೆಸೋಣ. ಇದು ನಮ್ಮದು ಎನ್ನುವುದಕ್ಕೆ ಹೆಮ್ಮೆ ಪಡೋಣ.
ಉಳಿಸಿ ಬೆಳೆಸುವುದ್ಹೇಗೆ?
ಲೇಖನಗಳು, ಭಾಷಣಗಳು, ಜಾಗ್ರತಿ ಸಭೆಗಳು ಅನಂತವಾಗಿ ಕೇಳಿಬರುತ್ತಲೇ ಇರುತ್ತವೆ ಆದರೆ ಅದನ್ನು ಕಾರ್ಯರೂಪಕ್ಕೆ ತರುವ ಕುರಿತು ಚಿಂತನೆ ನಡೆಯುವುದಿಲ್ಲ. ಈ ಬಗ್ಗೆ ಸಾಕಷ್ಟು ಗೊಂದಲ, ಅಡೆ-ತಡೆಗಳಿದ್ದರೂ, ನಮ್ಮ ನಿಟ್ಟಿನಲ್ಲಿ ಒಂದಿಷ್ಟು ಪ್ರಯತ್ನ ಮಾಡುವುದು ನಾಳೆಯ ಕನ್ನಡಕ್ಕೆ ಒಳಿತೆನ್ನಿಸುತ್ತದೆ. ಈಗಾಗಲೇ ‘ಕನ್ನಡ ದ್ವೇಷಿಗಳ ವಿರುದ್ಧ ಕರ್ನಾಟಕ’ ಎಂಬ ಗುಂಪೊಂದು ತನ್ನದೇ ಒಂದಿಷ್ಟು ಜನರ ಸಂಘದೊಂದಿಗೆ ಕನ್ನಡ ಭಾಷೆಯ ನಾಳಿನ ಉಳಿವಿಗಾಗಿ ತಮ್ಮ ಕೈಲಾದ ಯತ್ನವನ್ನು ಮಾಡುತ್ತಿದೆ. ಯುದ್ಧರಂಗಕ್ಕಿಳಿಯದೇ ಯುದ್ಧ ಗೆಲ್ಲುವುದು  ಅಸಾಧ್ಯ ಎನ್ನುವಂತೆ ನಾವು ನಮ್ಮ ಭಾಷೆಗಾಗಿ ಕಣಕ್ಕಿಳಿದು ಹೋರಾಡಬೇಕು ಅದರಲ್ಲಿ ಯಾವ ಮುಲಾಜೂ ಬೇಡ. ರಾಜ್ಯ ರಾಜಧಾನಿ ಬೆಂಗಳೂರನ್ನು ತುಂಬುತ್ತಿರುವ ಅನ್ಯಭಾಷಿಕರನ್ನು ಕನ್ನಡ ಕಲಿಯುವಂತೆ ಪ್ರೋತ್ಸಾಹಿಸುವುದರ ಜೊತೆಗೆ ಭಾಷಾಭಿಮಾನವನ್ನು ಬೆಳೆಸಬೇಕು. ಕನ್ನಡ ನಾಡಿನ ಸಂಸ್ಕ್ರತಿ, ಸಾಹಿತ್ಯ ಶ್ರೀಮಂತಿಕೆಯನ್ನು ಹೊಗಳುವ ಮತ್ತು ಹಬ್ಬಿಸುವ ಕೆಲಸಕ್ಕೆ ನಮ್ಮ ಭಾಷಣಿಕರು, ನುಡಿಪ್ರೇಮಿಗಳು, ಸಂಘಟನೆಗಳು  ಸೀಮಿತವಾಗದೇ ನಮ್ಮ ಭಾಷೆಯ ಗತ್ತನ್ನು ಕಾರ್ಯರೂಪzಲ್ಲಿ ತೋರಿಸಿ, ಅವ್ಯಾಹತವಾಗಿ ತೋರಿಸಿ ಎಲ್ಲರಲ್ಲೂ, ಕನ್ನಡವೆ ಸತ್ಯ, ಕನ್ನಡವೇ ನಿತ್ಯವೆನ್ನುವ ಬೀಜವನ್ನು ಭಿತ್ತಬೇಕು. ಅಷ್ಟೇ ಅಲ್ಲದೇ ನಗರದ  ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ ಸಂಘ ಸಂಸ್ಥೆಗಳ ಸಮೀಕ್ಷೆ ಮಾಡಿ ಅಲ್ಲಿನ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ, ನಾಡಿನ ಗಡಿ ಪ್ರದೇಶದಲ್ಲಿರುವ ಶಾಲೆಗಳಿಗೆ ಸರಿಯಾದ ಮೂಲಭೂತ ವ್ಯವಸ್ಥೆ ಹಾಗೂ ಅಗತ್ಯ ಪಠ್ಯಪುಸ್ತಕಗಳ ಸೌಕರ್ಯವನ್ನು ಸರ್ಕಾರ ಓದಗಿಸಬೇಕು. ಕನ್ನಡ ಭಾರದಿರುವವರು ದಿನೇ ದಿನೆ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು ಭಾಷಾಮಾಲಿನ್ಯಕ್ಕೆ ನೇರ ಕಾರಣವಾಗುತ್ತಿದೆ. ಅದಕ್ಕಾಗಿ ಎಲ್ಲರೂ ಸುಲಭವಾಗಿ ಅರಿಯುವ ಹಾಗೂ ಸಂಭಾಷಿಸುವಂತಹ ಸ್ವಯಂ ಭೋಧನ ಕಲಿಕಾ ಪುಸ್ತಕಗಳನ್ನು ಪ್ರಕಟಿಸಬೇಕು. ಕಾರ್ಮಿಕರ ಅನಕ್ಷರಸ್ತ ಮಕ್ಕಳಿಗೆ ಕನ್ನಡ ಭೋಧಿಸುವ ಕಾರ್ಯ ಸರ್ಕಾರ ರೂಪಿಸಬೇಕು.ಕನ್ನಡ ಶಾಲೆಗಳ ಬೆಳವಣಿಗೆಗೆ ಶ್ರಮಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡಿಗರು ಕನ್ನಡ ಪತ್ರಿಕೆಗಳನ್ನು ಮತ್ತು ಕನ್ನಡ ಪುಸ್ತಕಗಳನ್ನು ಕೊಂಡು ಓದುವ  ಸಂಸ್ಕøತಿಯನ್ನು ಬೆಳೆಸಿಕೊಳ್ಳಬೇಕು. ಅಂಗಡಿ ಮುಂಗಟ್ಟುಗಳ ಮುಂದೆ ಬರೆಯುವ ನಾಮಫಲಕ ಕಡ್ಡಾಯವಾಗಿ ಕನ್ನಡದಲ್ಲೇ ಲಿಪಿಯ ಸೌಂದರ್ಯ ಕೆಡದಂತೆ ಬರಯುವ ಕೆಲಸವನ್ನು ಕಡ್ಡಾಯಗೊಳಿಸಬೇಕು.
ವಾಹನದ ತೆಕ್ಕೆಗೆ ಕನ್ನಡ ಭಾವುಟವನ್ನು ಹಾಕಿ ಒಡಾಡುವುದರಿಂದ, ತಮಿಳು, ಮರಾಠಿ ಜನರಿಗೆ ಹೊಡೆಯುವುದರಿಂದ, ಅನ್ಯರಾಜ್ಯದವರ ಪ್ರತಿಮೆ ಅನಾವರಣ ಮಾಡುವುದನ್ನು ನಿಲ್ಲಿಸುವುದರಿಂದ ,ದುಂದು ವೆಚ್ಚದ ರಾಜ್ಯೋತ್ಸವದ ಆಚರಣೆಯಿಂದ, ಬೇರೆ ಭಾಷೆಯ ಚಲನಚಿತ್ರ ಟಿ.ವಿ. ಚಾನೆಲ್ ಗಳನ್ನು ನಿರ್ಭಂಧಿಸುವುದರಿಂದ ಕನ್ನಡದ ಬೆಳವಣಿಗೆಯಾಗುತ್ತದೆ ಎನ್ನುವುದು  ಕೇವಲ ಭ್ರಮೆ ಮಾತ್ರ. ಈ ವಿಧಾನಗಳೆಲ್ಲ ಒಂದು ಸಾರಿ ಕನ್ನಡಿಗರನ್ನು ಭಾವನಾತ್ಮಕವಾಗಿ ಪ್ರತಿಕ್ರಿಯಿಸುವಂತೆ ಮಾಡಬಹುದೇ ವಿನಃ ಬೇರೇನೂ ಸಾಧಿಸದು.
ಇನ್ನಾದರೂ ಮಾತು ಕಡಿಮೆ ಮಾಡಿ ಕೈಗೊಂಡಿರುವ, ಹಿಂದೆ ವಾಚಸಿಕೊಂಡಿರುವ ಮಾತುಗಳ ನೆರವೇರಿಕೆಯನ್ನು ಕಾರ್ಯಗತಗೊಳಿಸಲು ಪಣತೊಡೋಣ. ಅದರ ಮೂಲಕ ನಮ್ಮ ನಾಡು-ನುಡಿಯನ್ನು ಉಳಿಸೋಣ ಬೆಳೆಸೋಣ ಏನಂತೀರಾ!?...

.................................ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು................................................

Friday 6 November 2015

ಅಕ್ರಮ ಮಧ್ಯ ಮಾರಾಟ, ಮಂದಿಗೆ ಮಾರಣವಾಗುತ್ತಿದೆ.

ಹಳ್ಳಿಗಳ ಮೂಲೆ ಮೂಲೆಯ ಜನತೆಯಲ್ಲಿ ಬೀಡು ಬಿಟ್ಟ ಆತಂಕ
ಇದು ಸೆಕೆಂಡ್ಸ್ ಮಧ್ಯವಲ್ಲ ಬದಲಾಗಿ ನಕಲಿ ಮಧ್ಯ
ಇದೇ ರೀತಿ ಗ್ರಾಮೀಣ ಭಾಗದಲ್ಲಿ ತೀರ್ಥ ಸಮಾರಾಧನೆ ಮಿತಿಮಿರಿದರೆ ಮುಂದಾಗುತ್ತದೆ  ವ್ಯಸನಿಯ ವೈಕುಂಟ ಸಮಾರಾಧನೆ
ಪಾಕೆಟ್ ಹೋಯ್ತು ಬಾಟಲಿ ಬಂತು


         ಕಳೆದ ಏಳೆಂಟು ವರ್ಷಗಳ ಹಿಂದೆ ರಾಜ್ಯ ಸರಕಾರ ಸಾರಾಯಿ ನಿಷೇಧ ಮಾಡಿದಾಗ ಸರಕಾರವೇನೋ ಘÀನಂಧಾರಿ ಕೆಲಸ ಮಾಡಿತ್ತು ಎಂಬಂತೆ ಎಲ್ಲರೂ ಬೇಷ್ ಎಂದಿದ್ದೂ ಈಗಲೂ ನಿಮಗೆಲ್ಲಾ ನೆನಪಿರಬಹುದು. ಅಂದಿನ ಕಾಲಘಟಕ್ಕೆ  ಆ ನಿಷೇಧದ ನಿರ್ಧಾರ ರಾಜ್ಯಕ್ಕೆ ಒಳ್ಳೆಯದು ಕೂಡ ಆಗಿತ್ತು. ಆದರೆ ಇಂದು ಕರಾವಳಿ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲೂ ಅಕ್ರಮ ಮಧ್ಯ ಮಾರಾಟದ ಜಾಲ ಭುಗಿಲೆದ್ದಿದ್ದು, ಈಗÀದನ್ನು ಅದನ್ನು ಹತ್ತಿಕ್ಕದಿದ್ದರೆ ನಾಳೆಯ ದಿನಗಳಲ್ಲಿ ಅದು ಗ್ರಾಮೀಣವಾಸಿಗಳ ಜನ ಜೀವನವನ್ನು ತತ್ತರಿಸಿ ಬಿಡುವುದರಲ್ಲಿ ಯಾವ ಸಂಶಯವಿಲ್ಲ. ಅಂದದರ ನಿಷೇಧ ಕಂಡಾಗ ಎಷ್ಟೋ ಮನೆಗಳಲ್ಲಿ ನಗುವಿನ ಅಲೆ ತೇಲಿತ್ತು, ಆದರೆ ಇಂದು ಆ 10 ರುಪಾಯಿಗೆ ಸಿಗುತ್ತಿದ್ದ ಸಾರಾಯಿ ಪಾಕೆಟ್‍ಗಳಾದರೂ ವಾಸಿಯಾಗಿತ್ತು ರೀ, ನೂರಿನ್ನೂರು ರೂಪಾಯಿಯ ಬಾರ್ ಬಾಟಲಿಯ ಸಹವಾಸದಿಂದ ಗಂಜಿ ನೀರಿಗೂ ಪರದಾಡುವಂತಾಗಿದೆ ಎನ್ನುವ ಪರಿಸ್ಥಿತಿ ಎದುರಾಗಿದೆ!.
ಅಂದು ಹೇಗೆ ಮಾರು ದೂರದ ಅಂಗಡಿಗಳಲ್ಲಿ ಸಾರಾಯಿ ಅಂಗಡಿ ಎನ್ನುವ ಫಲಕದೊಂದಿಗೆ ಪಾಕೆಟ್‍ಗಳ ಸಾರಾಯಿ ಸಿಗುತ್ತಿತ್ತೋ, ಇಂದು ಅದೇ ರೀತಿ ನಾಮಫಲಕದ ಜೋತುವಿಕೆ ಇಲ್ಲದೇ ಬಾರ್‍ನ ಬಾಟಲಿಗಳು ಬಾಕ್ಸ್ ಬಾಕ್ಸ್ ನಲ್ಲಿ ಸಿಗುತ್ತಿವೆ. ಇದರಲ್ಲಿ ಸ್ಥಳೀಯ ಬಾರ್ ಓನರ್‍ಗಳ ಕೈವಾಡವೂ ಇದ್ದು, ಬಾರ್‍ನಿಂದ ಹಳ್ಳಿಯೊಳಗೆ ದಿನಸಿ ಅಂಗಡಿಗಳಿಗೆ ಡೈರೆಕ್ಟ್ ಸರಂಜಾಮು ಸಿಕ್ಕಿ ಊರಿಗೆ ಊರೇ ಕೆಡುವಂತೆ ಮಾಡುತ್ತಿದೆ. ಅನೇಕ ಹೆಂಗಸರು ಮಕ್ಕಳು ಇದರಿಂದ ಬೀದಿಗೆ ಬರುತ್ತಿದ್ದರೂ, ಸರ್ಕಾರ ಈ ಬಗ್ಗೆ ಯಾವುದೇ  ಕಟ್ಟುನಿಟ್ಟಿನ ಕ್ರಮವನ್ನೂ, ಕೈಗೊಳ್ಳದಿರುವುದು ನಿಜಕ್ಕೂ ಭಯತರಿಸುವಂತಿದೆ.
  ನಮ್ಮ ದೇಶದ ಜೀವಾಳವೇ ಹಳ್ಳಿಗಳು, ಗ್ರಾಮೀಣ ಪ್ರದೇಶಗಳು. ನಮ್ಮೆಲ್ಲರ ಅಳಿವು ಅಲ್ಲಿದೆ. ಉಳಿವೂ ಅಲ್ಲಿದೆ. ಹಳ್ಳಿಗಳನ್ನು ನಾವಿಂದು ಸುವ್ಯವಸ್ಥಿತವಾಗಿ ಉಳಿಸಿದರೆ ಅವು ಮುಂದೆಯೂ ನಮ್ಮನ್ನು ಸುಭಿಕ್ಷವಾಗಿ ಉಳಿಸುತ್ತವೆ. ಆದ್ದರಿಂದ ಹಳ್ಳಿಗಳನ್ನು ನಿರ್ಲಕ್ಷಿಸಿದರೆ ನಮಗೆ ಉಳಿಗಾಲ ಖಂಡಿತ ಇರುವುದಿಲ್ಲ. ಬಹಳ ವರ್ಷಗಳ ಹಿಂದೆ ಶೇ. 80ರಷ್ಟಿದ್ದ ಹಳ್ಳಯ ಜನಸಾಂಧ್ರತೆ ನಗರೀಕರಣದಿಂದ ಶೇ. 40 ರಿಂದ 50 ರ ಆಸುಪಾಸಿನಲ್ಲಿದೆ. ಇದೀಗ ಹಳ್ಳಿಯೂ ಬದಲಾವಣೆ ಕಂಡಿದೆ ಹಳ್ಳಿಯ ಜನರೆಲ್ಲ ಕೆಲಸವರಸಿ ಸಿ.ಟಿಯ ಕಡೆ ಪಯಣಿಸುತ್ತಿದ್ದಾರೆ ಇದರಿಂದ ಯಾವ ನಷ್ಟವಿಲ್ಲ. ದೇಶ ಪ್ರಗತಿಯಾಗುತ್ತದೆ, ಆದರೆ ಅನಾಚಾರ, ಅನಾಗರಿಕ, ಅವ್ಯವಸ್ಥೆ, ಅಕ್ರಮ, ಇತ್ಯಾಧಿಗಳು ನಡೆದರೆ ಮುಂಬರುವ  ಫಲ ಇಡೀ ದೇಶಕ್ಕೆ ದೇಶವೇ ಪಶ್ಚಾತಾಪಪಡುವಂತಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಶ್ರೀಮಾನ್ ರಾಜಕಾರಣಿಗಳೇ ನೀವೂ ಇಲೆಕ್ಷನ್ ಟೈಮಲ್ಲಿ, ಗೆದ್ದ ನಡುವಲ್ಲಿ, ಅದು ಇದು ಅಂತ ವಾಕ್ ಚಾತುರ್ಯವಾ ತೋರಿಸುತ್ತಾ ಮನೆ ಮನೆಗೆ ಕೇಳುವಂತೆ ಕೂಗುತ್ತಿರಿ, ಆದರೆ ಇಂದು ನಿಮ್ ಹಳ್ಳಿಗಳೇ ಈ ಅಕ್ರಮಗಳಲ್ಲಿ ಬಿದ್ದು ಸಾಯುತ್ತಿದೆ, ನೋಡಿ ಮಾಡಿ ಸರಿಪಡಿಸಲು ನಿಮಗೇನು ದಾಡಿಯಾ!? ಮುಖ್ಯಮಂತ್ರಿಗಳೇ ನಗರ ಮಂದಿಗೆ ಅದು ಇದು ಅಂತ ಹಣ ಸ್ಯಾಂಕ್ಷೆನ್ ಮಾಡುತ್ತಿರುವಿರಿ ಆದರೆ ದೇಶದ ಜೀವಾಳವೇ ಆಗಿರುವ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ, ಅಕ್ರಮಗಳ ತಡೆಯುವಲ್ಲಿ ದಕ್ಷ ಅಧಿಕಾರಿಗಳ ನೇಮಕ, ಸರಿಯಾದ ಕಟ್ಟುನಿಟ್ಟಿನ ಕ್ರಮ ಇತ್ಯಾದಿಗಳನ್ನು ಯಾಕೆ ಕೈಗೊಳ್ಳುತ್ತಿಲ್ಲ!?, ನಗರ ಪ್ರದೇಶದಲ್ಲಿ ಬೇರೆ ಬೇರೆ ಕೆಲಸಕ್ಕೆ ಹಣ ಬಿಡುಗಡೆ ಮಾಡುವ ನೀವುಗಳು ಹಳ್ಳಿಗಳ ಬೆಳವಣಿಗೆಗೆ ಯಾಕೆ ಸಹಕರಿಸುತ್ತಿಲ್ಲ!?, ಲಂಚಗುಳಿಕ ತನದ ಅಧಿಕಾರಿಗಳು ಇದ್ದರೆಂದು ತಿಳಿದರೂ ಅವರನ್ಯಾಕೆ ಕೆಲಸದಿಂದ ಎತ್ತಂಗಡಿ ಮಾಡುತ್ತಿಲ್ಲ!?, ಇದರಿಂದ ನಿಮಗೆಷ್ಟು ಹಣ ಕಿಸೆತುಂಬುತ್ತಿದೆ ಹೇಳಿ!?.
ಕಣ್ಣೇದುರೇ ಸೋಗಲಾಡಿಯ ದಂಧೆಗಳು ನಡೆಯುತ್ತಿದ್ದರೂ ಕಣ್ಣಿದ್ದು ಇಲ್ಲದವರಂತೆ ಮೂಖರಾಗಿ ನಿದ್ರಿಸುತ್ತಿರುವಿರಲ್ಲ ಅಧಿಕಾರಿಗಳೇ,  ನಿಮಗೆ ನಿಮ್ಮ ಕೆಲಸದಲ್ಲಿ ಅತೃಪ್ತಿ ಅಥವಾ ಧೃಡ ಮನಸ್ಸು ಇಲ್ಲವೆಂದರೆ ಹೇಳಿಬಿಡಿ ನಿಮಗಿಂತಲೂ ಹೆಚ್ಚು ಓದಿರುವ ಟ್ಯಾಲೆಂಟೆಡ್ ಎಂಗ್ ಮೈಂಡೆಡ್ ಹುಡುಗ/ಹುಡುಗಿಯರು ಕೆಲಸಕ್ಕಾಗಿ ಕಾದು ಕುಳಿತಿದ್ದಾರೆ ಅವರಿಗಾದರೂ ಆ ಕೆಲಸ ಬಿಟ್ಟುಕೊಟ್ಟು ಸೈಲೆಂಟ್ ಆಗಿ ಸೈಡ್‍ಗೆ ಹೋಗಿ ಆಗಲಾದರೂ ದಕ್ಷ ರಾಜ್ಯ ಸೃಷ್ಟಿಯಾಗುತ್ತದಾ, ಇಲ್ಲವಾ ನೋಡೋಣ...
ವಿಷಯಕ್ಕೆ ಬರುತ್ತೇನೆ..,
ಕುಡಿತ ಕುಡಿಯುವವರನ್ನು, ಕುಡಿಯದವರನ್ನು ಟೋಟಲ್ಲಿ ಇಡೀ ಫ್ಯಾಮಿಲಿಯನ್ನು ವಿನಾಶದಂಚಿಗೆ ದೂಡುವುದಲ್ಲದೇ ಮಿತಿಮೀರಿದರೆ ದೇಶಭಾಂಧವ್ಯಕ್ಕೂ ಧಕ್ಕೆ ತರುವ ಪರಿಣಾಮಕಾರಿ ಕೆಟ್ಟತನವನ್ನು ಬೀರುತ್ತದೆ ಎಂಬ ಮಾತು ನೂರಕ್ಕೆ ನೂರು ಸತ್ಯ. ಮಧ್ಯಪಾನದಿಂದ ಸತ್ತವರ ಪ್ರತಿ ಕುಟುಂಬದಲ್ಲೂ ಒಂದೊಂದು ನೋವಿನ ಕಥೆ ಇದೆ, ಕೆಲ ಕುಟುಂಬಗಳು ಅನಾಥವಾಗಿವೆ, ಸತ್ತವರ ಮನೆ ಮಕ್ಕಳು ವಿಘಟಿತರಾಗಿದ್ದರೆ, ಮಡದಿ ಮಕ್ಕಳು ಊಟಕ್ಕಾಗಿ ಕೂಲಿನಾಲಿಯನ್ನೇ ಅವಲಂಭಿಸುವ ಪರಿಸ್ಥಿತಿ ನಿರ್ಮಾಣವಾಗಿವೆ. ಹೀಗೆ ಪಟ್ಟಿಗೈಯುತ್ತಾ ಹೋದರೆ ಮಧ್ಯಪಾನ ಮನೆ ಕೆಡಿಸಿ ತಲ್ಲಣಿಸುತ್ತಿದೆ ಅಲ್ಲದೇ ಬೇರೇನೂ ಉಪಯೋಗಿ ಕಾರ್ಯ ಮಾಡುತ್ತಿಲ್ಲ. ಒಂದು ಕಡೆ ರೈತರ ಸಾಲ ಭಾದೆಯ ಸಾವು ಇನ್ನೊಂದು ಕಡೆ ಈ ಸಮಸ್ಯೆ. ದಿನಕಳೆದರೆ ಏನಾಗುತ್ತದೋ ತಿಳಿಯುತ್ತಿಲ್ಲ. ಸರ್ಕಾರಕ್ಕೆ ಇದು ತಿಳಿಯುತ್ತಿಲ್ಲ, ಎಲ್ಲ ಆದ ಮೇಲೆ ಚಿಂತಿಸಿ ಫಲವಿಲ್ಲ.
 ಇದೀಗ ಹಳ್ಳಿಗಳಲ್ಲಿ ಅಕ್ರಮವಾಗಿ ಎಣ್ಣೆ ಸರಭರಾಜು ಎತೇಚ್ಚವಾಗಿ ನಡೆಯುತ್ತಿರುವುದು ನೋಡಿದರೆ ಕಣ್ಣಾಲಿಯಲ್ಲಿ ಭಯ ದಿಗಿಲುಗೊಳ್ಳುತ್ತಿದೆ. ಹಳ್ಳಿ ಮಂದಿಯ ಕೆಲವರಿಗೆ ಕುಡಿಯೋದೆ ಕೆಲಸವಾದರೆ ಇನ್ನೂ ಕೆಲವರಿಗೆ  ಬೀದಿ ಬೀದಿಯ ಅಂಗಡಿಗಳಲ್ಲಿಟ್ಟು ಮಾರೋದೆ ಬ್ಯುಸಿನ್ನೆಸ್ಸಾಗಿದೆ. ಒಂದು ಮೂಲದ ಪ್ರಕಾರ ಊರನ್ನೇ  ಕಾದು ಸುವ್ಯವಸ್ಥೆಯಲ್ಲಿಡಬೇಕಾದ ಪೋಲೀಸರು ಹಣದ ಆಮೀಷಕ್ಕೆ ಬಿದ್ದು ತಿಂಗಳಿಗೆ ಇಂತಿಷ್ಟು ಎಂಬಂತೆ ಲಂಚ ಪಡೆದು, ಅಕ್ರಮ ಧಂಧೆಗಳು ತಮ್ಮೆದುರೇ ನಡೆಯುವುದ ತಿಳಿದರೂ ಸುಮ್ಮನಿರುತ್ತಿದ್ದಾರೆ. ಇದು ರೋಲ್ ಕಾಲ್ ರೂಪವನ್ನು ಕರಾವಳಿಯ ಅನೇಕ ಕಡೆ ಕಾಣುತ್ತಿದ್ದು, ಕಾವಲು ಪಡೆಯುವವನೇ ಜಗಕೆ ಕತ್ತಲಾಗುತ್ತಿದ್ದಾನೆ. ಈ ಅವ್ಯವಸ್ಥೆ ಸರಕಾರ ಮನಗಾಣಬೇಕು. ಕುಡಿತದಂತ ಕೆಟ್ಟ ಚಟ ಹಳ್ಳಿಗಳಲ್ಲಿ ಪ್ರಭೆಬೀರುವುದನ್ನು ತಡೆಗಟ್ಟಬೇಕು. ಭ್ರಷ್ಟ ಅಧಿಕಾರಿಗಳನ್ನು ಕೈ ಬಿಟ್ಟು ದಕ್ಷ ಅಧಿಕಾರಿಗಳ ನೇಮಕಕ್ಕೆ ಸಾಕ್ಷಿಯಾಗಬೇಕು, ಇದಕ್ಕಾಗಿ ಸೂಕ್ತ ಕ್ರಮಗಳನ್ನು ಆದಷ್ಟು ಬೇಗ ಜರುಗಿಸಬೇಕು.

 ಆಧೀಕೃತವಾಗಿ ಮುಖ್ಯಗ್ರಾಮಗಳಲ್ಲಿ ಬಾರ್ ಹಾಗೂ ಮದ್ಯದಂಗಡಿ ನಡೆಸಲು ಲೈಸನ್ಸ್ ನೀಡಿರುವುದೇ ಇದಕ್ಕೆಲ್ಲಾ ಮುಖ್ಯ ಕಾರಣವಾಗಿದ್ದು, ಅನಧೀಕೃತವಾಗಿರುವ ಹಾಗೂ ನಿರ್ದಿಷ್ಟ ಪ್ರದೇಶಕ್ಕೆ ಇಂತಿಷ್ಟು ಎಂಬಂತೆ ಪರಿಷ್ಕರಿಸಿ ಹೆಚ್ಚು ಉಳಿದಿರುವ ಎಲ್ಲಾ ಮಧ್ಯದಂಗಡಿಗಳನ್ನು ಮುಚ್ಚಿಸುವ ಕೆಲಸ ಮಾಡುವುದರ ಜೊತೆಗೆ, ಏಕಾಏಕೀ ಲೈಸೆನ್ಸ್ ನೀಡುವ ಪದ್ಧತಿಯನ್ನು ನಿಲ್ಲಿಸಬೇಕು. ಹಳ್ಳಿ ಹಳ್ಳಿಗಳ ಸಣ್ಣ ಪುಟ್ಟ ಕಿರಾಣಿ ಅಂಗಡಿ ಸೇರಿದಂತೆ, ಹೊಲ ಗದ್ದೆಯ ಗುಡಿಸಲು, ಹಾಡಿ ಗುಡ್ಡಗಳಲ್ಲು ಅನಧೀಕೃತ ಸ್ಟೋರೆಜ್‍ನ ಜೊತೆಗೆ ಮಾರಾಟಗಳು ನಡೆಯುತ್ತಿದ್ದು, ಇದನ್ನೆಲ್ಲ ತಡೆಯಲೋಸುಗವಾಗಿ ಒಂದಿಷ್ಟು ದಕ್ಷ ಅಧಿಕಾರಿಗಳನ್ನು ನೇಮಕ ಮಾಡಿ ತಪಾಸಣೆಗೆ ಬಿಟ್ಟು ಅಕ್ರಮದಂಧೆಗಾರರನ್ನು ಬಂಧಿಸಬೇಕು.
ಹಳ್ಳಿ ಹಾಗೂ ಗ್ರಾಮೀಣ ಪ್ರದೇಶವಾಸಿಗಳೇ ಕೊನೆಯಲ್ಲಿ ಒಂದು ಮಾತು, ಅಪಾಯಕಾರಿ ಮಧ್ಯದ ಚಟದಿಂದ ಹೊರಬರಲು ಸಾಕಷ್ಟು ಉಪಾಯಳಿವೆ. ಯಾರೇನೆಂದರೂ ನಿಮ್ಮ ನಿರ್ಧಾರದ ಮೇಲೆ ಎಲ್ಲಾ ನಿಂತಿರುವುದು. ವ್ಯಸನಿಗಳ ನಿರ್ಧಾರದಿಂದ ಮಾತ್ರ ಮಧ್ಯದ ಗೀಳನ್ನು ಬಿಡಲು ಸಾಧ್ಯ. ಗಟ್ಟಿ ಮನಸ್ಸು ಮಾಡಿ ಮಧ್ಯವ್ಯಸನದಿಂದ ಹೊರಬರಲು ಪ್ರಯತ್ನಿಸಿ. ಇದರಿಂದ ಉತ್ತಮ ಆರೋಗ್ಯ ಹೊಂದಿ ಬಹುಕಾಲ ಬಾಳಲು ಸಾಧ್ಯ. ವಿಷವಾದರೂ ಒಂದೇಟಿಗೆ ವ್ಯಸನಿಯೊಬ್ಬನನ್ನೇ ಸಾಯಿಸಬಹುದು ಆದರೆ ಕುಡಿತ ನಿಧಾನವಾಗಿ ಇಡೀ ಮನೆ ಮಠವನ್ನೇ ಸಾಯಿಸುತ್ತದೆ. ಜಾಗೃತರಾಗೋಣ-ಜಾಗೃತಗೊಳಿಸೋಣ-ಜಾಗೃತಿ ಇರೋಣ...

ಹೆಣ್ಣು-11




ಹೆಣ್ಣು ಮನುಪ್ರಣಿತ ಪುರುಷಕೇಂದ್ರಿತ ವ್ಯವಸ್ಥೆಯಲ್ಲಿ ಬೇರುಗಂಟಿದಂತೆ ಯಾವಾಗಲೂ ಪುರುಷನಿಂದಲೇ ದೌರ್ಜನ್ಯಕ್ಕೆ ಒಳಗಾಗಿ ಸಾಯುತ್ತಾಳೆ ಎನ್ನುವ ಮಾತು ಶುದ್ಧ ಸುಳ್ಳು. ಯಾಕೆಂದರೆ ಇತ್ತೀಚಿಗೆ ಅನೇಕ ಹೆಣ್ಣು ಮಕ್ಕಳು ಯಾವ ದೌರ್ಜನ್ಯವೂ ಇಲ್ಲದೇ ಸಾವನ್ನು ಕಾಣುತ್ತಿರುವುದೇ ಈ ಮಾತಿಗೆ ಕಾರಣ. ಮೊನ್ನೆ ಮೊನ್ನೆ ನಡೆದ ಒಂದು ಘಟನೆ ನಿಜಕ್ಕೂ ಈ ಮೇಲೆ ಆಡಿದ ಮಾತಿಗೆ ಕಾರಣವೆಂದು ಕಡಾಖಂಡಿತವಾಗಿ ಹೇಳುವೆ. ಆಗಿದ್ದಿಷ್ಟು...
ಮಂಗಳೂರು ಸಮೀಪದ ಹಳ್ಳಿಯೊಂದರಲ್ಲಿ ಪಿ.ಯು.ಸಿ ಓದುತ್ತಿರುವ ಹುಡುಗಿಯೊಬ್ಬಳು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅವಳದಿನ್ನು ಚಿಗುರುತ್ತಿರುವ ಬದುಕು. ಯಾವ ಕಷ್ಟವಾಗಲಿ, ಹಿತಶತ್ರುಗಳಾಗಲಿ, ಜೀವನದ ಸಮಸ್ಯೆಯಾಗಲಿ ಅವಳಿಗಿರಲಿಲ್ಲ. ಆದರೆ ಅವಳ್ಯಾಕೆ ಜೀವ ತೆಗೆದುಕೊಂಡಳು ಎನ್ನುವುದೇ ಎಲ್ಲರ ಯಕ್ಷ ಪ್ರಶ್ನೆ!?.
 ಸರಿ ಸುಮಾರು  ಇಪ್ಪತ್ತು ದಿನಗಳ ಬಳಿಕ ಅವಳ ಸಾವಿಗೆ, ಮಾನಸಿಕ ದೌರ್ಬಲ್ಯವೇ ಕಾರಣ ಎಂದು ಪ್ರಾಥಮಿಕ ವರದಿಯೊಂದು ತಿಳಿಸಿತು. ನಿಜಕ್ಕೂ ಇತ್ತೀಚಿಗೆ ಇಂತಹ ಘಟನೆಗಳು ಜಾಸ್ತಿಯಾಗುತ್ತಿವೆ. ಆಕೆಗೆ ಎಲ್ಲವೂ ಚೆನ್ನಾಗಿತ್ತು. ಓದುತ್ತಿರುವ ಕಾಲೇಜು, ಅಪ್ಪ-ಅಮ್ಮ ಬೆಳೆಸಿದ ರೀತಿ, ಮನೆ ಪರಿಸರ, ಗೆಳೆಯ-ಗೆಳತಿಯರು ಹೀಗೆ ಪ್ರತಿಯೊಂದು ಚೆನ್ನಾಗಿದ್ದ ಅವಳಿಗೆ ಆ ದಿನ ಸಾಯಲು ಕಾರಣವಾಗಿದ್ದು ಯಾವುದೋ ಸಣ್ಣ ಸಿಲ್ಲಿ ಮ್ಯಾಟರ್. ಅವರ ತಂದೆಯವರೇ ಹೇಳುವ ಹಾಗೆ ಡ್ರೆಸ್ ಬೇಕು ಎಂದು ಹಠ ಹಿಡಿದಿದ್ದಳಂತೆ, ಈಗ ಆಗಲ್ಲ ಸ್ವಲ್ಪ ದಿನದ ಬಳಿಕ ತೆಗೆದುಕೊಡುವೆ ಎಂದಾಗ ಕೋಪ ದುಃಖ ಎರಡನ್ನು ಉಮ್ಮಳಿಸಿಕೊಂಡ ಆಕೆ ಈ ಕೆಟ್ಟ ವರ್ತನೆ ತೋರಿದ್ದಾಳೆ.
ಯಾಕೆ ಹೀಗೆ!? ಹೆಣ್ಣಿನ ಮನಸ್ಸು ಬೆಣ್ಣೆಯಂತೆ ಎಂಬ ಮಾತಿದೆ ನಿಜ ಆದರೆ ಇಷ್ಟೊಂದು ಮೃದುವಾಗಿರುತ್ತದಾ!? ಹುಟ್ಟು ಅಂದ ಮೇಲೆ ಒಬ್ಬರಿಂದ ಒಬ್ಬರಿಗೆ  ನಾನಾ ರೀತಿಯ ವ್ಯತ್ಯಾಸಗಳಿರುವುದು ಸಹಜ. ಅದಕ್ಕಾಗಿ ನಿರಾಶವಾದಿಗಳಾಗದೇ ಎದುರಿಸುವ ಧೈರ್ಯಶಾಲಿಗಳಾಗಬೇಕು. ಜಗತ್ತು ಇಂದು ನಮಗಾಗಿ ಏನು ನೀಡದೇ ಇರಬಹುದು ಆದರೆ ಶ್ರಮಪಟ್ಟು ಜೀವನವನ್ನು ಪ್ರೀತಿಸಿ ಮುಂದೆ ಅಡಿ ಇಟ್ಟರೆ ಖಂಡಿತಾ ನಾವಂದುಕೊಂಡದ್ದನ್ನೆಲ್ಲಾ ಸಾಧಿಸಿ ಪಡೆಯಬಹುದು. ಸಮಾಜ ಬದಲಾಗುತ್ತಿದೆ ಅದರಂತೆ ನಾವು ಬದಲಾಗುತ್ತಿದ್ದೇವೆ. ಎಷ್ಟೋ ಜನ್ಮದ ಪುಣ್ಯದ ಫಲವಾಗಿ ಮನುಷ್ಯ ಜನ್ಮವನ್ನು ತಾಳುತ್ತೆವೆಂದು ಪುರಾಣದಲ್ಲೊಂದು ಮಾತಿದೆ ಅಂತಹ ಪವಿತ್ರ ಜನ್ಮವನ್ನು ಬೇಡವೆಂದು ತಿರಸ್ಕರಿಸಿಕೊಂಡು ಜೀವ ಕಳೆದುಕೊಳ್ಳುವುದು ಎಷ್ಟು ಸರಿ!?.
ಚರಿತ್ರೆಯಲ್ಲಿ ಅವಳದು ದುರವಸ್ಥೆ ಇರಬಹುದು. ಆದರೆ ಇಂತಹ ಘಟನೆಗಳೆಲ್ಲ ನಡೆಯುವುದು ಮನಸ್ಸಿನ ಅವ್ಯವಸ್ಥೆಯಿಂದಲೇ ಹೊರತು ಬೇರೆನಿಂದಲೂ ಅಲ್ಲ. ಇದು ಮನಸ್ಸಿನ ದೌರ್ಬಲ್ಯವೇ ಹೊರತು ಬೇರೆನೂ ಅಲ್ಲ. ಅವನಿಂದ-ಅವರಿಂದ ಕಿರುಕುಳ, ಅದರಿಂದ-ಇದರಿಂದ ಬೇಸರ ಎನ್ನುವ ಸಿಲ್ಲಿ ಸಿಲ್ಲಿ ವಿಷಯವನ್ನು ಬದಿಗಿಟ್ಟು ಮನ್ನಡೆಯಿರಿ. ಮನಸ್ಸಿನ ದುರ್ಬಲತೆಯನ್ನು ಸರಿದೂಗಿಸಿಕೊಂಡು ಧೈರ್ಯವಾಗಿರಿ. ನೆನಪಿಡಿ ಹೆಣ್ಮಕ್ಕಳೇ ‘ಜಗತ್ತಿನಲ್ಲಿ ಪುರುಷರಿಗಿಂತ ಮುಂದಿರುವುದು ಮಹಿಳೆಯರೇ’...