ಡಾ. ಎಂ.ಎಂ. ಕಲಬುರ್ಗಿಗೆ ಗುಂಡು, ಯುವಕರೇ ನಿಮಗ್ಯಾಕೆ ಇಷ್ಟವಾಯ್ತು ಈ ಸೌಂಡು...
ವಿಚಾರದ ಧನಿಗಳ ಸದ್ದಡಗಿಸುವ ಇಂತಹ ಕೃತ್ಯಗಳು ಖಂಡನೀಯ.
ಅವರನ್ನು ನೀವ್ಹೇಗೆ ಸಂಶೋಧಕನೇ ಅಲ್ಲಾ ಅಂತೀರಾ!?...
ಬಲ ಪಂಥೀಯ ವಾದಿಗಳೇ ನೀವೆಷ್ಟು ಓದಿದ್ದೀರಿ!!?
ಗುಂಪುಗಾರಿಕೆ ಮಾಡಿಕೊಂಡು ಮಾತುಗಾರಿಕೆಗಿಳಿದರೆ ಅದನ್ನು ‘ಅಭಿವ್ಯಕ್ತಿ ಸ್ವಾತಂತ್ರ್ಯ’ವೆನ್ನುವುದಿಲ್ಲ.
ಶಬ್ಧ ಬಳಕೆಯ ಬಗ್ಗೆ ಇರುವ ಜಿಜ್ಞಾಸೆ ಹಾಗೂ ಪಂಥೀಯ ನಿಲುವುಗಳ ಬಗ್ಗೆ ಇರುವ ತಾರ್ಕಿಕ ಧ್ವಂಧ್ವಗಳನ್ನು
ನನ್ನ ಮಾತು, ಪ್ರಶ್ನೆ ಎಲ್ಲಾ ಯುವಜನಾಂಗಕ್ಕೆ, ನಾವೇಕೆ ಹೀಗೇ ಜಾತಿ, ಮತ, ಭೇಧ,ಎಂಬ ಅಸಹ್ಯಕರ ಭಾವದಿಂದ ಕಚ್ಚಾಡುತ್ತಲೇ ಬಾಳುತ್ತಿದ್ದೇವೆ!?, ಸರಿಯಾಗುವುದು ಯಾವಾಗ!? ಎಂಬಿತ್ಯಾಧಿಗಳು ನನನ್ನು ಈ ಸಂಧರ್ಭ ಜಿಜ್ಞಾಸೆಗೆ ಸಿಲುಕಿ ತಡಕಾಡಿಸುತ್ತಿವೆ. ಮಿತ್ರರೇ ಇದೊಂಥರ ಪ್ರಶ್ನೆ ಎನಿಸಿದರೂ, ಉತ್ತರ ಕಂಡುಕೊಳ್ಳುವ ಮಾರ್ಗ ಗೊತ್ತಿದ್ದರೂ, ಬಹುಶಃ ಕಷ್ಟಪಟ್ಟು ಜಿಜ್ಞಾಸೆಯಿಂದಲೇ ಮಥಿಸಿ ಸತ್ಯ ಕಂಡುಕೊಳ್ಳಬೇಕೇನೋ ಗೊತ್ತಿಲ್ಲ..! ಆದರೆ ಒಂದು ಮಾತು ನಿಜ!, ‘ಇಂದು ನಡೆಯುತ್ತಿರುವ ಅನಾಚಾರಕ್ಕೆ, ಗೂಂಡಾಗಿರಿಗೆ ‘ಬೆಳೆಯುತ್ತಿರುವ ನಮ್ಮಂತ ನಡುವಯಸ್ಸಿನ ಯುವಕರುಗಳೇ ಕಾರಣ’. ಅವರ ರೋಷ, ಕೋಶ ಎಲ್ಲವೂ ಬಲಪಂಥಕ್ಕೆ ಸಿಲುಕಿ ಅನಾಚಾರಕ್ಕೆ ಮುಹೂರ್ತವಿಡುತ್ತಿರುವುದು ನಿಜ.
ಬಿಸಿ ರಕ್ತದ ಪಂಥೀಯರೇ ನೀವು ಇದೇ ಸತ್ಯ, ಇದೇ ಹೌದು, ಇದೇ ಸರಿ ಎಂದು ವಾದಿಸಿ ಆದರೆ ನನ್ನ ನಿಲುವೇ ಸರಿ ನಾನೋಬ್ಬನೇ ಧರ್ಮ ಉಳಿಸುವವನು ಎನ್ನುವುದು ಎಷ್ಟು ಐಕ್ಯರೂಪಿ!?. ತಪ್ಪುಗಳ ಲೆಕ್ಕಾಚಾರ ಹಾಕದೇ, ಪ್ರಭುತ್ವದ ಶಾಂತಿ ನೆಮ್ಮದಿಯನ್ನು ಸುಖಿಯಾಗಿಡುವ ಐಕ್ಯರೂಪಿ ಗುಣವನ್ನು ಹೊಂದದೆ, ನನ್ನ ಧರ್ಮವೇ ಶ್ರೇóಷ್ಠ ಎಂದು ವಾದಿಸುವುದು ಎಷ್ಟು ಸರಿ!?. ಹೇಳುವ ಮಾತಿನಲ್ಲಿ ಕೇಳುವ ತಾಳ್ಮೆಯೂ ಇರಬೇಕು. ಇದ್ದರೆ ಚಂದ.
ಯಾಕೆ ಈ ಮಾತು ಎಂದು ನೀವು ಚಿಂತಿಸುತ್ತಿರಬಹುದು ಅದಕ್ಕೆ ಕಾರಣವೂ ಇದೆ,
ಮೊನ್ನೆ ಮೊನ್ನೆ ಅಪರಿಚಿತ ವ್ಯಕ್ತಿಗಳಿಂದ ನಡೆದ ಹಿರಿಯ ಸಾಹಿತಿ ಮತ್ತು ಸಂಶೋಧಕ ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿರವರ ಹತ್ಯೆ ನಾಡು ನುಡಿಯ ಜನರನ್ನು ಬೆಚ್ಚಿ ಬೀಳಿಸಿದ್ದಲ್ಲದೇ ಜನರಲ್ಲಿ ‘ಏನಪ್ಪಾ ಕಾಲ ಯಾಕೆ ಈ ಥರ ಎನ್ನುವ ಯಕ್ಷ ಪ್ರಶ್ನೆ ನೆಲೆಸುವಂತೆಯೂ ಮಾಡಿತ್ತು. ಹಂತಕರು ಯಾಕೆ ಗುಂಡು ಹೊಡೆದು ಅವರನ್ನು ಕೊನೆಗಾಣಿಸಿದ್ದಾರೆ ಎನ್ನುವುದು ಇಂದಿಗೂ ಸರಿಯಾದ ವಿಚಾರಣೆಯಲ್ಲಿ ತಿಳಿಯದಿದ್ದರೂ, ಮಾನವೀಯ ಹೃದಯವಂತರಿಗೆ ನೋವಾದರೂ ಅವರು ಸತ್ತ ಬಗೆ ಹಾಗೂ ವಿಚಾರ ಹಲವಾರೂ ಪಂಥೀಯ ನಿಲುವುಗಳ ಪುಂಡರಿಗೆ ಪಾಯಸವುಂಡಷ್ಟು ಖುಷಿ ನೀಡಿದ್ದು, ಆಶ್ಚರ್ಯವಾಗುತ್ತದೆ. ಇದು ನಮ್ಮ ದೌರ್ಬಲ್ಯವಲ್ಲದೇ ಮತ್ತೇನೆನ್ನಿಸಿ ಪೆನ್ನನ್ನು ಕೈಗೆತ್ತಿಕೊಂಡಿರುವೆ ಅಷ್ಟೇ. ಸತ್ಯ ತಿಳಿಸುವ, ತಮ್ಮನ್ನು ತಮಗೆ ಅರಿಸುವ ಸಣ್ಣ ಮೊಂಡುತನ ನನ್ನದಾದರೂ ಚಿಂತೆಯಿಲ್ಲ. ಖಂಡಿತಾ ಇದು ಹುಚ್ಚುತನ ಮಾತ್ರಾ ಅಲ್ಲಾ.
ನೇರ ನಿಷ್ಠುರ ಮಾತುಗಳು ಹಾಗೂ ಬರವಣಿಗೆಯಿಂದ ಅನೇಕ ಬಾರಿ ವಿವಾಧಗಳಿಗೂ ಸಿಲುಕಿದವರಾಗಿದ್ದ ಡಾ.ಕಲಬುರ್ಗಿಯ ಗ್ರಂಥ ‘ಮಾರ್ಗ’ದ ಮೊದಲ ಸಂಪುಟದಲ್ಲಿನ ಎರಡು ಲೇಖನಗಳು 1989ರಲ್ಲಿ ಭಾರಿ ವಿವಾಧ ಸೃಷ್ಟಿಸಿತ್ತು, ಈ ಎರಡು ಲೇಖನಗಳು ಬಸವಣ್ಣನ ಪತ್ನಿ ಹಾಗೂ ಸೋಧರರಿಗೆ ಸಂಬಂಧಿಸಿದ್ದವಾಗಿದ್ದವು. ಮುಂದೆ ತನಗೆ ತಾನೇ ಮೋಸಮಾಡಿಕೊಂಡಂತೆ ತಮ್ಮ ಲೇಖನಗಳನ್ನು ಬರೆದ ಕಲಬುರ್ಗಿ ಇದು ‘ಬೌದ್ಧಿಕ ಆತ್ಮಹತ್ಯೆ’ ಎಂದು ಮರುಗಿದ್ದರು. ಏರಡು ವರ್ಷಗಳ ಹಿಂದೆ ಅನಂತಮೂರ್ತಿಯವರ ಮಾತೊಂದನ್ನು ತಪ್ಪಾಗಿ ಉಲ್ಲೇಖಿಸಿದ ಪ್ರಕರಣದಲ್ಲಿ ಕಲಬುರ್ಗಿ ಸಮಸ್ತ ಹಿಂದೂ ಜನತೆಯ ಕೆನ್ನಾಲಿಗೆಗೆ ಗುರಿಯಾಗಿದ್ದಲ್ಲದೇ ನೋವಲ್ಲೇ ಸಂಶೊಧನೆಯನ್ನು ಮುಂದುವರಿಸುತ್ತಾ ಸಾಯೋ ದಿನದವರೆಗೂ ಎದೆಗುಂದದೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರನ್ನು ಬೃಹತ್ ಧರ್ಮಧ್ವೇಷಿ ಎಂಬ ಪಟ್ಟವನ್ನು ನೀಡಿದ್ದು, ಸ್ವತಃ ಅವರಿಗೆ ನೋವಿದ್ದರು ಯಾವುದನ್ನೂ ಮನಸ್ಸಲ್ಲಿಟ್ಟುಕೊಳ್ಳದೇ ಬದುಕಿದ್ದರು.
ಆಡಿದ ಮಾತು ಎಲ್ಲವೂ ಸರಿಯಿರಬೇಕೆಂದೇನೂ ಇಲ್ಲ, ಅವರವರ ನಿಲುವು ಅಷ್ಟೆ. ಒಬ್ಬ ಸಂಶೋಧಕನಾಗಿ ಅವರಾಡಿದ ಮಾತು ಸಂಶೋಧನೆಯ ಎಳೆ ಇರಬಹುದು ಆದರೆ ಅದನ್ನೇ ಹಿಡಿದು ಕೊನೆಗಾಣಿಸಬಾರದಿತ್ತು. ಅಥವಾ ಅದನ್ನು ತಪ್ಪೆಂದು ನಾವು ಚರ್ಚಿಸುವುದು ಬಿಟ್ಟು, ಸಂಶೋಧನೆಯೇ ಸರಿಯಿಲ್ಲ, ಅವನೊಬ್ಬ ಸಂಶೋಧಕನೇ ಅಲ್ಲ ಎನ್ನುವುದು ಎಷ್ಟು ಸರಿ!? ಸಾರಸ್ವತ ಲೋಕದ ಒಬ್ಬ ಚಿಂತಕ, ಶ್ರೇಷ್ಠ ಬರಹಗಾರ ಸತ್ತನೆಂದರೆ ನಾವು ಪಟಾಕಿ ಸಿಡಿಸಿ ಸಂಭ್ರಮಿಸುತ್ತೇವೆಂದರೆ ನಾವೆಂತ ಮಾನವತಾವಾಧಿಗಳಾದೆವು ನೀವೆ ಹೇಳಿ,
ಸಮಾಜದಲ್ಲಿ ಯಾವೊಬ್ಬ ಸಾಮಾನ್ಯನಾಗಲಿ, ಶ್ರೀಮಂತನೇ ಆಗಿರಲಿನ ಸತ್ತ ಎಂದರೆ ಅವನ ಹಿಂದಿನ ಎಂತಹ ಕೆಟ್ಟ ಕರ್ಮ ಫಲಗಳಿದ್ದರು, ಎಲ್ಲವನ್ನು ಪಕ್ಕಕ್ಕಿಟ್ಟು ಅರ್ಪಣೆಯಾಗಿ ಮನಪೂರ್ಣ ನಮನ ಸಲ್ಲಿಸಬೇಕಾಗಿರುವುದು ನಮ್ಮ ಹಿಂದೂ ಸಂಸ್ಕøತಿಯ ಸಂಸ್ಕಾರ. ಅದನ್ನ ಬಿಟ್ಟು ಹಿರಿಯ ತಲೆ ಉರುಳಿತು, ಸಾವು ಖುಷಿಕೊಟ್ಟಿತು, ಇನ್ನೂ ಕೆಟ್ಟ ಸಾವು ಅವನದಾಗಬೇಕಿತ್ತು, ಇಷ್ಟು ದಿನ ಬದುಕಲು ಬಿಟ್ಟಿದ್ದೆ ಹೆಚ್ಚು ಎನ್ನುವುದು,ಸತ್ತಿದ್ದಕ್ಕೆ ಹಬ್ಬ ಆಚರಿಸುವುದು ಮಾನವೀಯತೆ ಅಲ್ಲ. ಬೇಜಾವಾಬ್ದಾರರಾಗಿ ಉಂಡಾಡಿ ಗುಂಡನ ಹಾಗೆ ಬೊಬ್ಬಿರುವ ಬಾಯಿಯಿದೆ ಎಂದು ಕತ್ತೆ, ನಾಯಿಗಳಂತೆ ಬೋರ್ಗೆರೆದರೆ ನಮ್ಮ ಸಂಸ್ಕøತಿಯನ್ನು ನಾವೇ ಬೀದಿಲಿಟ್ಟು ಮಾನ ತೆಗೆಸಿಕೊಂಡಂತೆ ವಿನಃ ಕಿಂಚಿತ್ತು ಉಳಿಸಿದಂತಲ್ಲ. ಕಲಬುರ್ಗಿ ಸತ್ತ ನಂತರ ಬಲಪಂಥೀ, ಎಡ ಪಂಥೀಯ ನಿಲುವುಗಳ ಮಧ್ಯದಲ್ಲಿ, ಟಿ.ವಿ ಹಾಗೂ ಸೋಷಿಯಲ್ ಮೀಡಿಯಾಗಳ ಮಾಧ್ಯಮದಲ್ಲೂ ಅನೇಕ ಮಾತುಗಾರಿಕೆಯ ಹೊಡೆದಾಟಗಳಾಯಿತು. ಹಿಂದೂ ಮುಂದು ಯೋಚಿಸದ ಯುವಕರು ತಮಗನಿಸಿದಂತೆ ಸ್ಟೇಟಸ್ ಕೊಟ್ಟು ಮೆರೆದರು. ಇದೆಲ್ಲಾ ಅವರ ಮನೆಯವರಿಗೆ, ಸಂಬಂಧಿಕರಿಗೆ, ಆಗಿದ್ದರೆ ಆಗೇನು ಹೇಳುತಿದ್ದರೋ ನಾ ತಿಳಿಯೆ. ಈ ಹಿಂದೆ ಅನಂತ ಮೂರ್ತಿ ಸತ್ತಾಗಲೂ ಅವರೊಬ್ಬ ಹಿಂದೂ ಧರ್ಮ ವಿರೋಧಿ, ಅವಹೇಳನಕಾರಿ ವ್ಯಕ್ತಿ ಎಂದು ಪಟಾಕಿ ಸಿಡಿಸಿದ ಘಟನೆಗಳು ನಡೆದಿದ್ದು ಮಾಸುವಾಗಲೇ ಮತ್ತೊಮ್ಮೆ ಈ ರೀತಿಯ ಘಟನೆ ಸಂಭವಿಸಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ನಾಚಿಗೆ ಗೇಡಿನ ಸಂಗತಿ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಅಷ್ಟಕ್ಕೂ ಈ ಜಾತಿ-ಭೇಧ ಎನ್ನುತ್ತಾ ವಿಷ ಬಿಜ ಬಿತ್ತುತ್ತಿರುವವರು ಯಾರೂ!?... ನಾವೇ ಅಲ್ಲವೇ!?... ಯಾಕೆ ಬೇಕು ಇದು?. ಬರಿಯ ಸ್ವಾತಂತ್ರ್ಯ ದಿನಾಚರಣೆಯ ದಿನ ‘ನಾವು ಭಾರತೀಯರು, ನಾವೆಲ್ಲ ಒಂದೇ, ಅವಳ ಮಕ್ಕಳು’ ಎಂದು ಹೇಳುತ್ತೇವೆ ಆದರೆ ಈಗ್ಯಾಕೆ ಈ ಮೊಂಡುತನ.
ಯುವಕರೇ ಪದೇ ಪದೇ ಮಾತುಗಳನ್ನೇ ನೆಕ್ಕಿಕೊಳ್ಳುತ್ತಾ ಡೆಮಾಕ್ರಸಿಯ ವಿಷಬೀಜ ಬಿತ್ತುತ್ತಿದ್ದೀರಲ್ಲಾ, ನೀವು ಸಮಾಜದ ಸಹಿಷ್ಣು ಕಾಪಾಡುವ ವ್ಯಕ್ತಿಗಳಾ!?, ನೀವು ನಮ್ಮ ಭಾರತಾಂಭೆಯ ಮಕ್ಕಳಾ!? ನಿಮಗೆ ಕರಣೆ ಮಮಕಾರದ ಭಾವನಾತ್ಮಕತೆಯ ನಲಿವು ಗೊತ್ತಿದ್ಯಾ!?? ಮೊದಲು ಪಂಥಗಳನ್ನು ಬಿಟ್ಟು, ಕಾರಣಿಭೂತರಾದ ಹಂತಕರನ್ನು ಹಿಡಿಯಲು ಸಹಾಯ ಮಾಡಿ. ಉಗ್ರತ್ವಕ್ಕೆ ಶಹಬ್ಬಾಸ್ ಎಂದರೆ ನಾವೆಂಥಾ ನೈತಿಕೆಯುಳ್ಳವರು.
ಡಾ.ಎಂ ಎಂ. ಕಲಬುರ್ಗಿಯವರಿಗಾದ ಗತಿಯೇ ನಾಳೆ ನಿಮಗೂ ನಿಮ್ಮ ಮಕ್ಕಳಿಗೂ ಆದರೆ ಅದನ್ನು ಹೀಗೆ ಕಾಣುತ್ತೀರಾ!?, ಸ್ವಲ್ಪ ಚಿಂತಿಸಿ, ಕಚ್ಚಾಟ ನಮ್ಮನ್ನು ಬದಲಿಸುವುದಿಲ್ಲ, ಮೆರೆದಾಟ ಎಂದು ಮೇಲೆ ನಿಲ್ಲಿಸುವುದಿಲ್ಲ.ಬದಲಾಗೋಣ. ಸಂಘ ಸಂಘಟನೆಗಳ ಬೆಂಬಲವಿದೆಯೆಂದು ಗುಂಪುಗಾರಿಕೆ ಸರಿಯಲ್ಲ.ಅವುಗಳು ಇರುವುದು ಒಳ್ಳೆಯ ಕಾರ್ಯಮಾಡಲು ಹೊರತು ನೀಚತನಕ್ಕಲ್ಲ. ನಿಮಗೆ ಹೇಗೆ ಮಾತನಾಡುವ ಹಕ್ಕಿದೆಯೋ ಹಾಗೆ ಎಲ್ಲರಿಗೂ ತನ್ನ ಭಾವನೆ ವ್ಯಕ್ತಪಡಿಸುವ ಹಕ್ಕಿದೆ. ಆಂದ ಮಾತ್ರಕ್ಕೆ ಗುಂಪುಗಾರಿಕೆ ಮಾಡಿಕೊಂಡು ಮಾತುಗಾರಿಕೆಗಿಳಿದರೆ ಅದನ್ನು ‘ಅಭಿವ್ಯಕ್ತಿ ಸ್ವಾತಂತ್ರ್ಯ’ವೆನ್ನುವುದಿಲ್ಲ.
ನಾನೊಬ್ಬ ಮುಖ್ಯಸ್ಥ ನನ್ನ ಹಿಂದೆ ಸುಮಾರು ಜನರ ನಾಯಿ ಬಾಲವಿದೆ ಎಂದ ಮಾತ್ರಕ್ಕೆ ಕಿರುಚಬಾರದು ಬದಲಾಗಿ ಫ್ರೌಡರಾಗಬೇಕು, ಓದಬೇಕು, ಲೋಕ ಜ್ಞಾನ ಮೈಗೂಡಿಸಿಕೊಳ್ಳಬೇಕು.
ವಿವಿಧ ಸಂಪಾದಕರು ಸಂಪಾಧಿಸಿರುವ ಸಮಗ್ರ ವಚನ ಸಂಪುಟಗಳಲ್ಲಿರುವ ಇಪ್ಪತ್ತು ಸಾವಿರ ವಚನಗಳನ್ನು ಆರಿಸುವಲ್ಲಿ ಕೊನೆಯ ಪಕ್ಷ ಮೂವತ್ತುಸಾವಿರ ವಚನಗಳನ್ನಾದರೂ ನಿಕಟವಾಗಿ ಓದಿದ್ದಾರೆ ಡಾ.ಎಂ ಎಂ. ಕಲಬುರ್ಗಿ..ಉತ್ತರ ಕೊಡಿ ಬಲ ಪಂಥೀಯ ವಾದಿಗಳೇ ನೀವೆಷ್ಟು ಓದಿದ್ದೀರಿ???. ಅನಂತಮೂರ್ತಿ ಅಥವಾ ಕಲಬುರ್ಗಿ ಮಾಡಿರುವ ಸಾಹಿತ್ಯ ಕೃಷಿಯ ಒಂದು ಎಳೆಯನ್ನ ನೀವು ಮಾಡಿದ್ದೀರಾ?.. ಅದು ನಿಮ್ಮಿಂದ ಸಾಧ್ಯವಾದರೂ ಇದ್ಯಾ?.. ನಿಮಗೆ ಕೂಗುವುದು, ಬೆಂಕಿಹಚ್ಚುವುದು, ಉರಿಯುತ್ತಿರುವ ಅಗ್ನಿಗೆ ತುಪ್ಪ ಸುರಿಯಲು ಗೊತ್ತು ಆದರೆ ಯೋಚಿಸುವುದು ಮಾತ್ರಾ ಗೊತ್ತಿಲ್ಲ ಅಲ್ವಾ...
ನಾನು ಒಬ್ಬ ಹಿಂದೂ, ನನಗೂ ಕೆಚ್ಚೆದೆ ಇದೆ, ರೋಷವಿದೆ. ಹಾಗಂತ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ವಾಗ್ವಾದಗಳ ನೆಲೆಗಳಲ್ಲಷ್ಟೇ ಉಳಿಸದೇ ಒತ್ತಡಗಳನ್ನು ಸೃಷ್ಟಿಸುವಂತಹ ಈ ಬಗೆಯ ಬೆದರಿಕೆಯ ವಾತಾವರಣ ಸೃಷ್ಟಿಸುವುದು ಸಾಮಾಜಿಕ ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ. ಪ್ರಜಾ ಪ್ರಭುತ್ವದಲ್ಲಿ ಅದರಲ್ಲೂ ಕನ್ನಡದ ನೆಲದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ ಆದರೆ ವಿಚಾರದ ದನಿಗಳ ಸದ್ದಡಗಿಸುವ ಇಂತಹ ಕೃತ್ಯಗಳು ಖಂಡನೀಯ. ವಿಚಾರಗಳನ್ನು ಹತ್ತಿಕ್ಕಿದಷ್ಟೂ ಅವು ಬೆಳೆಯುತ್ತಲೇ ಇರುತ್ತವೆ ಯಾವುದೇ ಭಿನ್ನಾಭಿಪ್ರಾಯವೂ ಕೊಲೆಯ ಹಂತಕ್ಕೆ ಹೋಗಬಾರದು. ಇದೆಲ್ಲವನ್ನು ಅರಿಯುವ ಅಗತ್ಯ ಇಂದು ನಮ್ಮ ಸಮಾಜಕ್ಕಿದೆ.
‘ನಿನ್ನ ಆಭಿಪ್ರಾಯವನ್ನು ನಾನು ಒಪ್ಪುವುದಿಲ್ಲ ಆದರೆ ಅಭಿಪ್ರಾಯವನ್ನು ಹೊಂದುವ ನಿನ್ನ ಸ್ವಾತಂತ್ರ್ಯವನ್ನು ನನ್ನ ಜೀವ ಕೊಟ್ಟಾದರೂ ರಕ್ಷಿಸುತ್ತೇನೆ’ ಎನ್ನುವುದು ನಮ್ಮ ‘ಪ್ರಜಾಪ್ರಭುತ್ವ’. ಆದರೆ ಇಂದು ಹಾಗಾಗುತ್ತಿಲ್ಲ ಜನ ನೈತಿಕತೆಯನ್ನೇ ಮರೆತು ವರ್ತಿಸುತ್ತಿದ್ದಾರೆ. ಇಲ್ಲಿ ಯಾರೂ ಯಾರ ಮೇಲೂ ಏನೂ ಹೇಳುವಂತಿಲ್ಲ. ಬಲವಂತನ ಮಾತು ಬಡವಂತ ಕೇಳಲೆಬೇಕು. ಇಲ್ಲವಾದರೆ ಜಗಳವಾಗುತ್ತದೆ, ಹೊಡೆದಾಟ ನಡೆಯುತ್ತದೆ. ಅಷ್ಟೇ ಏಕೆ ಪಾಪಿಗಳು ಕೊಲೆಯನ್ನು ಮಾಡುತ್ತಾರೆ. ಇದರಲ್ಲಿ ರಾಜಕೀಯದ ಹಾವು ಏಣಿ ಆಟವೂ ಇದೆ ಎನ್ನುವುದು ತಿಳಿದಿದ್ದರೂ ಜನ ಅಸಹನೆಯ ಭಾವನೆಗಳಿಂದ ಹೊರಬರುತ್ತಿಲ್ಲ...ಹಾಗೆ ಮಾಡುವುದರಿಂದ ನಾವು ಮೂಲಭೂತ ವಾದಿಗಳಂತೆ ಸತ್ಯಶೋಧನೆಯ ಕಣ್ಣು ಕಳೆದುಕೊಳ್ಳುತ್ತೇವೆ.
ಕೊನೆ ಮಾತು ಸರ್ಕಾರ ಸೇರಿ ಎಲ್ಲರಿಗಾಗಿ... ವಾದ ವಿವಾದಗಳ ನಡುವೆ ಕಲಬುರ್ಗಿಯವರ ಸಾವಿನಿಂದಾಗಿ, ಒಂದು ಬಗೆಯ ವಿಶಿಷ್ಟ ವಿದ್ವಾಂಸ ಮಾರ್ಗದ ಕಡು ಸಂಶೋಧನಾ ನಿಷ್ಠೆಯ ಕೊನೆಯ ಕೊಂಡಿಯೊಂದು ಕಳಚಿ ಹೋದದ್ದರ ಬಗ್ಗೆ ತುಂಬಾ ವಿಷಾಧವಿದೆ. ಹಾಡ ಹಗಲೇ ಸಾಹಿತಿಯೊಬ್ಬನನ್ನು ಗುಂಡೇಟಿನಿಂದ ಕೊಲ್ಲುವ ಪರಿ ನಿಜಕ್ಕೂ ಒಳ್ಳೆಯದಲ್ಲ. ಟೀಕಿಸುವುದನ್ನು ಬಿಟ್ಟು ನಾವೆಲ್ಲ ಎದ್ದೇಳಬೇಕಿದೆ. ಈ ಬಗ್ಗೆ ಸರ್ಕಾರ ತೀವ್ರ ಕಾಳಜಿ ಮತ್ತು ಭಧ್ರತೆ ಇಟ್ಟು ದುಷ್ಟ ಶಕ್ತಿಗಳನ್ನು ಮೊಳಕೆಯಲ್ಲೇ ಚಿವುಟಬೇಕು. ಮಾನ್ಯ ಮುಖ್ಯಮಂತ್ರಿಗಳೇ, ಅದು ಯಾರಾದರೂ ಸರಿ ಆದಷ್ಟು ಬೇಗ ವಿಚಾರಿಸಿ ಸಮಾಜದ ನೆಮ್ಮದಿ ಕಾಪಾಡಿ, ಅಬ್ಬರಿಸುವ ಬೊಬ್ಬಿರುವ ಅಶಾಂತಿ ರೂಪಿಸುವ ಕೋಮುಗಲಭೆಯನ್ನು ಹುಟ್ಟಿಸುವವರನ್ನು ಜಾಡಿಸಿ ಒದೆಯಿರಿ...ಮುಲಾಜೇ ಬೇಡ...
No comments:
Post a Comment