Monday 4 July 2016

ಕವಿ ಕನವರಿಕೆ - ಪ್ರೇಮಾಯಣ...


-ಸ್ಯಾಂಡಿ...

       
     ತುಸು ಪ್ರೇಮವಿತ್ತು, ತುಸು ಮೌನವಿತ್ತು ಪ್ರತಿ ಕ್ಷಣವೂ ಮೊದಲ ನೋಟವೋ ಎಂಬಂತೆ ಸಾಗುತ್ತಿತ್ತು ಅವನ-ಅವಳ ಕಣ್ಣುಗಳ ವಿಚಾರ ವಿನಿಮಯ...ಬೇಸಿಗೆ ಉರಿಬಿಸಿಲಿರಲಿ, ಚಳಿ ಚಂಚಲತೆಯಿರಲಿ, ಮಳೆಯ ಪುಳಕತನವಿರಲಿ ಎಲ್ಲಿಯೂ ಎಂದೂ ರಾಜಿಯನುಭವವಿಲ್ಲ... ಪ್ರೀತಿ, ಪ್ರೀತಿಸು, ಪ್ರೀತಿಸುತ್ತೇನೆ ಇವಷ್ಟೇ ಅರಿತು ನಡೆಯುತ್ತಿದ್ದ ಪುಟ್ಟ ಬಾಳು ಅವರದು!!.

ಟೀನೇಜಿನ ಟೈಮ್ ಅದು. ಓದುವಿಕೆಯಿಂದ ಹತ್ತಿರ ಕಂಡಿದ್ದ ಎರಡು ಹೃದಯಗಳು ಭವಿಷ್ಯದ  ಚಿಂತನೆಯನ್ನೇ ಮರೆತಿದ್ದವು. ಕೇವಲ ಪ್ರೀತಿ ಎನ್ನುವ ಮಾಯಾಜಾಲದಲ್ಲಿ ಒಬ್ಬರನ್ನೊಬ್ಬರು ಹಿಂಬಾಲಿಸುತ್ತಿದ್ದರೇ ವಿನಃ ಮುಂದಿರುವ ಭವಿಷ್ಯದ ಗೋಜೆ ಅವಗಿರಲಿಲ್ಲ.

ಚಂದುಟಿಯ ಪಕ್ಕಕ್ಕೊಂದು ಮುತ್ತು, ದೂರಾಗುವ ಭಯಕ್ಕೊಂದು ಅಪ್ಪು... ಟೋಟಲ್ಲಿ ಮನ ಕಲಕದಂತೆ ಸಮನಾಗಿ ಎಳೆವ ತೇರು ಅವರದು. ಪ್ರೀತಿಸುತ್ತಿದ್ದ ಅಷ್ಟು ದಿನಗಳು ಕಳೆದದ್ದೇ ಅರಿಯದ ಜೋಡಿಯ ಹುಡುಗಿಗೆ ಮದುವೆ ಹುನ್ನಾರ ಮನೆಯಲ್ಲಿ ಅದಾಗಲೇ ನಡೆಯಲು ಶುರುವಿಟ್ಟಿದ್ದೆ ತಡ!, ಅವರಿಬ್ಬರಿಗೂ ಸಂಕಷ್ಟಗಳು ತಲೆಯೇರಲು ರೆಡಿಯಾದಂತೆ ಭಾಸವಾಗಿದೆ.

ಮನೆಯವರ ವಿರೋಧ, ದೂರಾದರೆ ಬಾಳು ಸಾಧ್ಯವಿರದ ಭಾದಿತ ಎನ್ನುವ ಆತಂಕ. ಒಂದು ಕಡೆ ಅರ್ಧಂಬರ್ಧ ಕಲಿಕೆಯಲ್ಲಿರುವ ವಿದ್ಯಾಭ್ಯಾಸ, ಇನ್ನೊಂದು ಕಡೆ ಪ್ರೀತಿಯ ತ್ಯಾಗಿಗಳಾಗಿ ಬದುಕು ಕಾಣಲಾರದ ಮಂಪರತೆ, ಭವಿಷ್ಯದಲ್ಲಿ ನೆಲೆಯಾಗದಿರುವ ಧೃಡತೆ!, ಇತ್ಯಾದಿಗಳ ಹೈರಾಣತೆ ಇನ್ನೇನೂ ಜೀವನ ಬಿಗಡಾಯಿಸುತ್ತೆ ಎಂದು ಅರಿತ-ಅರಳಬೇಕಿದ್ದ ಪ್ರೇಮಿಗಳು ಕೊನೆಗೊಂದು ನಿರ್ಣಯದಿಂದ, ಜಯಿಸಬಹುದೆಂಬ ತೀರ್ಮಾನಕ್ಕಿಳಿದಿದ್ದಾರೆ.
ಇಬ್ಬರು ಜೊತೆ ಸೇರಿದ್ದಾರೆ. ದುಃಖವನ್ನು ಮೌನವಾವರಿಸಿಕೊಂಡಿದೆ. ಇಬ್ಬರೂ ಇಹ ತ್ಯಜಿಸಿ ಪರ ಸೇರುವ ನಿರ್ಣಯಕ್ಕೆ ಸಹಿ ಮಾಡಿದ್ದಾರೆ. ಎದುರಿರುವ ಚೂಡಿದಾರದ ವೇಲು ಕೊಕ್ಕೆಯಂತೆ ಕೊರಳೊಳು ಸೇರಿದೆ!!.

     
          ಸಾರ್ಥಕತೆ ಇಲ್ಲದ ಜೀವನದುಸಿರು ಗೆದ್ದೆ ಎಂದು ತನ್ನಾಟ ನಿಲ್ಲಿಸಿದೆ!., ಆಗತಾನೆ ಅರಳಿ ಸುವಾಸನೆ ಬೀರುತ್ತಿದ್ದ ಪ್ರೀತಿ ಮಸಣದ ಪಾಲಾಗಿದೆ!., ಮೌನ ಬಲಿ ಪಡೆದಿದೆ!., ಜನುಮ ಅಂತ್ಯ ಕಂಡಿದೆ!., ಪ್ರೇಮಾಯಣ ಪಾಪ ಭಾವ ತಳೆದಿದೆ..!

No comments:

Post a Comment