Tuesday, 14 June 2016

ಮಳೆಗೆ ಶುರು ಬಾಲ್ಯದ ನೆನಪ ತೇರು



ಬರಡಾಗಿ ಬೆಂಡಾದ ಭುವಿಗೆ ತಂಪಾಗೋ ಕಾಲ ಸನ್ನಿಹಿತವಿನ್ನೂ..
ಶುರುವಾಗುತ್ತದೆ ಎಲ್ಲೆಲ್ಲೂ ಹನಿಮಳೆಯ ಪುಳಕವಿನ್ನೂ...

ಜಯಂತ್ ಕಾಯ್ಕಿಣಿ ಹೇಳುವಂತೆ "ಮಳೆಯ ಹನಿಯಲ್ಲಿ ಕೂತು ಇಳೆಗೆ ಬಂದಂತೆ ಮುಗಿಲು"..
ನಿಜ.! ಎಂಥಾ ಸಾಲುಗಳಲ್ವಾ!, ಇಷ್ಟುದಿನ ಮೇಲೆ ತೇಲಾಡುತ್ತಿದ್ದ ಮೋಡಗಳು, ಇಳೆಗೆ ಹನಿಯಾಗಿ ಮುಗಿಲನ್ನು ತರುವ ಸನ್ನಿಹಿತ ಬರುತ್ತಿದೆ.ಮೋಡಗಳೆಲ್ಲಾ ಮುಗಿಲಾಗುವ ಕಾತರಿಕೆಯಲ್ಲಿ ತಾ ಮುಂದು ನಾ ಮುಂದು ಎಂದು ಬಂದು ಒಬ್ಬೋಬ್ಬರಿಗೆ ಇಷ್ಟ, ಇನ್ನೂ ಕೆಲವರಿಗೆ ಕಷ್ಟವಾಗೋ ಪ್ರಮಯವೂ ಬರುತ್ತಿದೆ..ಆದ್ರೂ ಮಳೆಕೊಡುವ ನೆನಪು, ಖುಷಿ, ಬಹುಹಿಂದಿನ ಪುನರ್ಮಿಲನದ ಭಾವನೆ, ಪುಳಕ, ಇನ್ಯಾವುದು ಕೊಡಲಾರವು ಅಲ್ವಾ..ಅದೇಷ್ಟೋ ನೋವು-ನಲಿವು, ದುಃಖ-ದುಮ್ಮಾನಗಳು ಜೊತೆ ಇದ್ದರೂ ಒಮ್ಮೆ ಹನಿಮಳೆಯಲಿ ಕೈಚಾಚಿ ಭಾವಪೂರ್ಣವಾಗಿ ನೆನೆದರೆ ಅದರ ಹಿತವೆ ಬೇರೆ ಮುಖ್ಯವಾಗಿ ಅದು ನೀಡೊ ಬಾಲ್ಯ ಜೀವನದ ಆ ಸುಖವೆ ಬೇರೆ ಅಲ್ವಾ!.

ಆಗೆಲ್ಲಾ ನಮ್ಮ ಚಿಕ್ಕವಯಸ್ಸು, ಹರಿದಕೊಡೆಯ ಜೊತೆ, ತುಂಬು ಭಾರದ ಚೀಲಾ ಬಗುಲಲ್ಲಿ..ಜೊತೆಗೆ ಮಧ್ಯಾಹ್ನದ ತಂಪು ಊಟದ ಬುತ್ತಿ(ಇಗಿನ ಮಕ್ಕಳದ್ದು ಬಿಸಿಯೂಟ),ಶಾಲೆಯ ಪ್ರಾರಂಭದ ದಿನಗಳೇ ಮಳೆಯ ಚಳಿ..ರಸ್ತೆಯ ಕೆಂಪುಮಣ್ಣಿನ ಪಾಕದ ಮೇಲೆ ಸವಾರಿ ಅಲ್ಲಲ್ಲಿ ಹರಿಯೋ ಸಣ್ಣ ಜರಿಗಳಲ್ಲಿ ಮೀನು ಹಿಡಿದುಬಿಡೊ ಆಟ..ಆಗ ಬರುತಿದ್ದ ಪ್ಯಾರಗಾನ್ ಚಪ್ಪಲಿ.,, ಇದೆ ಮೊದಲಾದವುಗಳ ಸಂಘಮ..

ಸ್ವಲ್ಪ ದುಡ್ಡಿರೋರು ತಮ್ಮ ಮಕ್ಕಳಿಗೆ ಹೊಸ ಕೊಡೆಯನ್ನ ತೆಗೆಸಿಕೊಟ್ಟರೆ, ನಮ್ಮ ಬಡವರ ಪಾಡು ನಡೆದಿದ್ದೆ ಹರಿದ ಹಿರಿದಾದ ಉದ್ದನೆಯ ಹಿಡಿಯ ನಡುವೆ..ಆ ಸುಖವೆ ಒಂಥರ ಬೇರೆ;ನಡುದಾರಿಯಲ್ಲಿ ಗಾಳಿಮಳೆಗೆ ಸಿಕ್ಕ ಛತ್ರಿ ಮೇಲಕ್ಕೆ ಹಾರಿದ್ದು, ಒಂದೇ ಕೊಡೆಯ ನಡುವೆಅಡಿ ನಾಲ್ಕು ಜನರು ಆಶ್ರಯ ಪಡೆದು ಮೈ ಒದ್ದೆಯೊಂದಿಗೆ ಮನೆ ಸೇರಿದ್ದು, ಅನ್ಯಾಯದ ಮರೆಯುವಿಕೆಯ ನಡುವೆ ಶಾಲೆಯಲ್ಲೆ ಛತ್ರಿ ಮರೆತು ಗೆಳೆಯನ ಜೊತೆ ಆಶ್ರಯ ಕೇಳಿದ್ದು, ರಸ್ತೆಯ ಹೊಂಡದ ನೀರನ್ನ ಕಾಲಲ್ಲಿ ಚೊಗೆದು ಖುಷಿಪಟ್ಟಿದ್ದು, ತೊರೆಗಳಲ್ಲಿ ಮೀನು ಹಿಡಿಯುತ್ತಾ ಕುಳಿತು ಸಮಯ ಮರೆತು ಮಾಸ್ಟರ್ ಹತ್ತಿರ ಭೈಸಿಕೊಂಡಿದ್ದು, ಹೊಸ ಕೊಡೆಬೇಕು ಅಂತಾ ಅಮ್ಮನ ಹತ್ತಿರ ಗೋಗೆರೆದಿದ್ದು, ಲೋ ಮಳೆರಾಯ ಇವತ್ತು ಇಡೀ ಬಾ ಶಾಲೆಗೆ ರಜೆ ಕೊಡುತ್ತಾರೆ ಅಂತ ಮಳೆರಾಯನಿಗೆ ಭುವಿಯಿಂದಲೇ ಕರೆಕೊಟ್ಟಿದ್ದು.., ಹೀಗೆ ಹಲವು ಅಂಶಗಳು ಸವಿಮಳೆಯ ಮೆಮೋರಿಯಲ್ ಮೆಮೋರೇಬಲ್ ಆಗೆ ಕುಳಿತು ನಮ್ಮೇದೆಯಲ್ಲಿ ಕಚಗುಳಿಯ ಪುಳಕವೆಬ್ಬಿಸಿದರೆ ಆಶ್ಚರ್ಯ ಪಡಬೇಕಿಲ್ಲಾ ಅಲ್ವಾ .ನಿಮಗೂ ಇಗ ನಿಮ್ಮ ಹಳೆಯ ಮೆಮೋರೆಬಲ್ ನೆನಪಿನ ಸವಿ ಕಾಡುತ್ತಾ ಇದ್ಯೆನೋ ಅಲ್ವ..

ನೀವು ಒಮ್ಮೆ ಸಖತ್ತಾಗಿರೋ ಅನುಭವ ಪಡಿಬೇಕು ಅಂದ್ರೆ ಹನಿ ಮಳೆಯಲ್ಲಿ ಹಾಯಾಗಿ ಬಾನಿಗೆ ಮುಖಚಾಚಿ , ಕಣ್ಮುಚ್ಚಿ ನೆನೆದು ಬಾಲ್ಯದ ಸವಿ ನೆನಪನ್ನ ಸವಿಯಿರಿ..
ಹಾ..,! ಶೀತ ಜ್ವರ ಬರೋತರ ನೆನಿಬೇಡಿ ಅಮೇಲೆ ಕಷ್ಟವಾದೀತು.. ನಿಮಗೆ ಎನನಿಸಿತ್ತು ಮಳೆಯಲ್ಲಿ ನೆನೆದಾದ ಮೇಲೆ ನನಗೂ ತಿಳಿಸಿ..


Monday, 13 June 2016

ಕವಿ ಕನವರಿಕೆ - ಪ್ರೇಮಾಯಣ...


-ಸ್ಯಾಂಡಿ...

ಕಾತರಿಕೆ ಅವಳ ಮನದಲ್ಲಿ ಹನಿಯಂತೆ ಜಿನುಗುತ್ತಿತ್ತು. ಸುಂದರತೆಯ ವೈಭೋಗವು ಹುಟ್ಟಿನಿಂದಲೇ ಬಳುವಳಿಯಾಗಿ ಅವಳಿಗಪ್ಪಿತ್ತು. ಮುಂಜಾನೆ ಬಿಸಿಚಳಿಯ ಗಾವು ನಡುಕತೆ ಸೃಷ್ಟಿಸುತ್ತಿದ್ದರೂ, ಹೊಸ ಭೇಟಿಗೆ, ಹೊಸ ಕಂಪನತೆಗೆ ಬೇಗನೆ ಎದ್ದು ಅಂದಕ್ಕಿಂತ ಅಂದವಾಗಿ ಸಿಂಗಾರ ಮಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಳು ಆಕೆ. ಕಾರಣ ಇಷ್ಟೇ ಅರಿಯದ ಪ್ರೀತಿಯಲ್ಲಿ ಬಿದ್ದಿದ್ದ ಅವಳಿಗೆ ನವಿರಾದ ಪ್ರೇಮಾಂಕುರವಾಗಿದ್ದು ಪಕ್ಕದೂರಿನ ಹುಡುಗನ ಜೊತೆ. ಅವರಿಬ್ಬರ ಪ್ರಥಮ ಭೇಟಿಯ ಚಡಪಡಿಕೆಯೇ ಇವಳ ಈ ದಿನದ ಪಯಣಕ್ಕೆ ಹೊಸ ರೂಪದ ಇಂಪಾಗಿತ್ತು.

ಅದೇನೋ ತಳಮಳ, ಅದೇನೋ ನಾಚಿಕೆ, ಕೆಂಪಾದ ಕೆನ್ನೆತುಂಬೆಲ್ಲಾ ಹೊಸ ಅಪ್ಪುಗೆ ದೊರೆಯುವ ವೈಯಾರ, ನಿಂತಲ್ಲಿ ನಿಲ್ಲಲೂ ಬಿಡದೆ ಮನೆಯಿಂದ ನಡೆ ಹೊರಡುವಂತೆ ಮಾಡಿತ್ತು.

 ಆಗಲೇ ಸೂರ್ಯ ಬೆಟ್ಟಗುಡ್ಡಗಳನ್ನು ಸೀಳಿ ಮೇಲೆ ಬಂದಿದ್ದ. ಮೊದಲೇ ನಿರ್ಧರಿಸಿದ್ದ ಸ್ಥಳದಲ್ಲಿ ಅವನು ಕಾಯುತ್ತಿದ್ದ. ಕೈಯಲ್ಲೊಂದು ಪ್ರೇಮ ಪತ್ರ ಹಿಡಿದಿದ್ದಾನೆ. ಕಣ್ಣಿಂದ ದೂರ ಇರುವ ಅವಳನ್ನು ಕಣ್ಮಚ್ಚಿ ನೆನಸಿಕೊಳ್ಳುತ್ತಿದ್ದಾನೆ. ಇವಳೋ ಭಯಪಡುತ್ತಲೇ ಹತ್ತಿರ ಹೋಗಿದ್ದಾಳೆ. ಸಮಯ ಮಿಂಚು ಗುಡುಗುಗಳು ಒಟ್ಟಿಗೆ ಸೇರುವ ಸನ್ನಿಹಿತ... ಇಬ್ಬರೂ ಬೇವತಿದ್ದಾರೆ!... ತುಟಿ ತೊದಲುತ್ತಿದೆ!..ಗಂಟಲು ಸ್ವರ ಕಟ್ಟಿಸುತ್ತಿದೆ!.. ಸೌಂದರ್ಯವರ್ಧಕ ಕರಗಿ ಇವರ ಮಧ್ಯೆ ನಾನಿರಲ್ಲ!!! ನನ್ನ ಅವಶ್ಯಕತೆ ಇಲ್ಲ!!! ಎಂದು ನಾಚಿ ದೂರಸರಿಯುತ್ತಿದೆ!.. ಮಾತನಾಡಬೇಕೆಂದಿದ್ದ ಪದಗಳೆಲ್ಲ ಮೌನದಲ್ಲಿ ನೀನಾಡು!.. ನೀನಾಡು!.. ಎನ್ನುತ್ತಿವೆ. 

      ಬೀಸೋಗಾಳಿಯು, ಇವರ ಬೆವರ ಹನಿಗೆ ಬಾ ತೊಂದರೆ ಮಾಡಬೇಡ ಎಂದು ಆವಿಯಾಗಿಸುತ್ತಿದೆ!..
ಕೊನೆಗೂ ಹುಡುಗನೇ ನಿವೇದಿಸಿದ್ದಾನೆ... ‘ನನ್ನ ಪ್ರತಿ ಹೆಜ್ಜೆಗೂ ನಿನ್ನ ಗೆಜ್ಜೆಯ ಸದ್ದಿರಬೇಕು, ನಿನ್ನ ಪ್ರತಿ ನೋವಿಗೂ ನನ್ನ ಪ್ರೀತಿಯ ಮದ್ದಿರಬೇಕು’...
   ಮುದ್ದಿನ ಹುಡುಗನ ಮುದ್ದು ಮಾತಿಗೆ ಅವಳು ಸೋತು ಸುಣ್ಣವಾಗಿದ್ದಾಳೆ...ಪೆದ್ದುಮುದ್ದಾದ ಪ್ರೀತಿ ಇಬ್ಬರನ್ನು ಬಾಚಿ ತಬ್ಬಿಕೊಂಡಿದೆ...ಸೂರ್ಯನ ಕಿರಣ ನಾಚಿ ಮೋಡ ಸೇರಿದೆ. ಪ್ರಕ್ರತಿಯ ಕಲರವ ಬೆಚ್ಚಿ ಮೌನವಹಿಸಿದೆ...

ಎದುರು ಮನೆಯ ತಾತ ಸತ್ತೋದರು:..


   
ಇಡೀ ಏರಿಯಾಕ್ಕೆ ಅವರೊಂಥರ ಓಲ್ಡ್...ಸದಾ ಮೌನಿ...ಮೊನ್ನೆ ಸತ್ತೋದರು... ಸರಾಗ ಕನ್ನಡ ಬರದಿದ್ದರೂ ಕರ್ನಾಟಕವೇ ನನ್ನ ಮನೆ ಎಂದು ತಿಳಿದ ತಿಳುವಳಿಕ, ಅಂತಿಮವಾಗಿಯೂ ಇಲ್ಲಿಯೇ ಉಸಿರು ಬಿಟ್ಟು ಹೊರಟು ಹೋದ ಈ ಮಣ್ಣಿನ ಅಭಿಮಾನಿ. 
  
        ಸದಾ ಒಂಟಿಯಾಗಿರುತ್ತಿದ್ದ ಅಜ್ಜನನ್ನು ನಾನು ಸುಮಾರು ದಿನದಿಂದ ನೋಡುತ್ತಲೇ ಇದ್ದೆ. ಒಬ್ಬಳು ಹುಡುಗಿ ಅವರನ್ನು ನೋಡಿಕೊಳ್ಳುತ್ತಿದ್ದಳು. ಬಹುಶಃ ಯಾರೂ ಇಲ್ಲವೇನೋ ಅಂದುಕೊಂಡಿದ್ದೆ. ಒಂದಿನ ವಿಷಯ ತಿಳಿಯಿತು!, ತಾತನಿಗೆ ಇಬ್ಬರು ಮಕ್ಕಳು. ಅವರಿಬ್ಬರು ತಾತನ ಜೊತೆ ಇಲ್ಲ. ಬೆಳೆಸಿ, ಓದಿಸಿ ವಿದೇಶಕ್ಕೆ ತಾತನೇ ಕಳುಹಿಸಿದ್ದರಂತೆ. ಮಕ್ಕಳ ವಾಸ ಯಾವಾಗ ಹೊರದೇಶದಲ್ಲೇ ಫಿಕ್ಸ್ ಆಯ್ತೋ!, ಅಂದಿನಿಂದ ಅವರು ಒಂಥರಾ ತಾತನಿಂದ ಹೊರಗಿದ್ದರು.

ನಾನು ದಿನಾ ಬೆಳಿಗ್ಗೆ ಎದ್ದು ಆಫೀಸ್‍ಗೆ ಹೊರಡೋ ಮುಂಚೆ ಮನೆಯ ಹೊರಗಿನ ಅಂಗಳದಲ್ಲಿ ಕುಳಿತಿರುತ್ತಿದ್ದ ತಾತ ದಿನಾಲೂ ಮುಗುಳ್ನಗೆ ಬೀರುತ್ತಿದ್ದರೇ ವಿನಃ, ಎಂದಿಗೂ ನನ್ನ ಅವರ ನಡುವೆ ಫೇಸ್ ಟು ಫೇಸ್ ಮಾತುಗಾರಿಕೆಯೇ ಆಗಿರಲಿಲ್ಲ.
ನನ್ನದು ಒಂಥರಾ ಮೌನ!.. ಅವರದು ಇನ್ನೊಂದು ಬಗೆಯ ಮೌನ!!. ಮಾತನಾಡಬೇಕು ಅಂದುಕೊಂಡಾಗೆಲ್ಲಾ ಆಫೀಸ್ ಲೇಟಾಗುತ್ತೆ!!, ಎನ್ನುವ ಸಮಯದ ಭಯದಿಂದಲೋ!, ಏನಿರುತ್ತೆ ಮಾತನಾಡಲು ಎನ್ನುವ ಕಾತುರತೆ ಇರದೆಯೋ!, ಮತ್ತೆ ಮಾತಾನಾಡೊಣ ಎನ್ನುವ ಭವಿಷ್ಯದ ಬಂಧದಿಂದಲೋ! ಹಾಗೆ ಬೈಕ್ ಸ್ಟಾರ್ಟ್ ಮಾಡಿ ಅವರೆದುರೇ ದಿನಾಲೂ ಪಯಣಿಸುತ್ತಿದ್ದೆ. ಆದರೆ ಉದ್ದನೆಯ ದಾರಿ ಎಡಕ್ಕೆ ತಿರುಗಿ ನನ್ನ ಬಿಂಬ ಮಾಯವಾಗುªವÀರೆಗೂ ದುರುಗುಟ್ಟಿಕೊಂಡು ಬೆನ್ನನ್ನೇ ನೋಡುತ್ತಿದ್ದ ತಾತ ಎಂದೂ ನನ್ನ ಬೈಕ್ ರೈಡ್ ಬಗ್ಗೆಯಾಗಲಿ, ಟೈಮಿಂಗ್‍ಗಾಗಲಿ, ನಡೆದುಕೊಳ್ಳುತ್ತಿದ್ದ ರೀತಿಗಾಗಲಿ ಎಲ್ಲೂ ಯಾವ ಬೇಸರಿಕೆಯನ್ನೂ ಕಂಡಿರಲಿಲ್ಲ. ಯಾಕೆಂದರೆ ಅವರು ಒಂದಿನವೂ ನನ್ನನ್ನು ಬೇರೊಬ್ಬ ಹುಡುಗ ಎನ್ನುವಂತೆ ನೋಡಿರಲಿಲ್ಲ.

         
   ಅವರೊಂಥರ ಮೌನಿಯಾಗಿದ್ದರು!!. ಉದ್ದ ಮೀಸೆ, ದಪ್ಪ ದೇಹ, ಕಟ್ಟುಮಸ್ತಾದ ತೋಳು ಎಲ್ಲವೂ ಈಗಲೂ ಹಾಗೆ ಮನದ ಗೋಡೆಯಲ್ಲಿ ವ್ಯಕ್ತಿಚಿತ್ರ ಅಚ್ಚೊತ್ತಿದಂತಿದೆ.  ಆದರೆ ಮೊನ್ನೆ ಮೊನ್ನೆ ಇದ್ದ ಅವರೆದುರಾಗುವಿಕೆಯ ಉಪಸ್ಥಿತಿ ಇಂದು ಆ ಅಂಗಳದಲ್ಲಿಲ್ಲ ಅಷ್ಟೆ...

          ಹೊರದೇಶಗಳಲ್ಲಿ ಮಕ್ಕಳಿದ್ದ ಪಕ್ಷಕ್ಕೋ ಅಥವಾ ತನ್ನ ಒಡನಾಟಕ್ಕೆ ಸಾಥ್ ಕೊಡುತ್ತವೇ ಎನ್ನುವ ಆಸೆಗೋ!, ಏನೋ!... ಎರಡು ನಾಯಿಗಳನ್ನು ಮುದ್ದಿನಿಂದ ಸಾಕಿದ್ದರು. ಇದೀಗ ಅವುಗಳು  ಅನಾಥವಾಗಿವೆ. ಇಂದು ನಾ ಪಾರ್ಕಿಂಗ್‍ಗೆ ಬಂದು ಬೈಕ್ ನಿಲ್ಲಿಸುವಾಗ ಅವುಗಳು ಗೊಳೋ ಎಂದು ಅಳುತ್ತಾ ಕೂಗುತ್ತವೆ. ಸಾಂತ್ವಾನ ಹೇಳೋಣ ಅಂದರೆ ಏನೆಂದು ಹೇಳಲಿ... ಬಹುಶಃ ತಾತ ಸತ್ತಿರುವ ವಿಚಾರ ಅವುಗಳಿಗೂ ತಿಳಿಯಿತೋ ಏನೋ...ಎಂದು ಸುಮ್ಮನಾಗುವೆ...ದಿನಾ ಸಂಜೆ ಬೆಳಿಗ್ಗೆ ನನ್ನ ನಾ ಬೈಕ್ ಹತ್ತಿರ ಹೋದಾಗ ಅವು ಮತ್ತೆ ಮತ್ತೆ ಕೂಗುತ್ತಿವೆ. ಬಿಳಿ ಮೈಯ ಟಾಮಿಯಂತೂ ಅಜ್ಜನ ಉಪಸ್ಥಿತಿ ಕಾಣದೆ ಕಂಗೆಟ್ಟಿದಂತಿದೆ!.. 

        ಪಕ್ಕದ ಮನೆಯ ಅಂಕಲ್ ಹೇಳುತ್ತಿದ್ದಾರೆ, ತಾತ ಮೊದಲು ಐದಾರು  ನಾಯಿ, ಹತ್ತಿಪ್ಪತ್ತು ಕೋಳಿಗಳನ್ನು ಸಾಕಿದ್ದರಂತೆ...ಇದೀಗ ಆರೋಗ್ಯ ಸ್ಥಿತಿಯ ಹದಗೆಡುವಿಕೆಯಿಂದಾಗಿ ಅವುಗಳಂಕಿಯನ್ನು ಕಡಿಮೆಗೊಳಿಸಿದ್ದರಂತೆ...ಡೆಹರಾಡೂನ್ ಮೂಲದಿಂದ ಇಲ್ಲಿಗೆ ವಲಸೆ ಬಂದು, ಕನ್ನಡ ಕಲಿತು, ಇಲ್ಲಿಯೇ ಮನೆ ಕಟ್ಟಿ ವಾಸವಾಗಿದ್ದ ಅವರು ಮೊದಲೆಲ್ಲ ದುಡಿದ ಅರ್ಧದಷ್ಟನ್ನು ಪ್ರಾಣಿ ಪಕ್ಷಿಗಳಿಗೆ ಖರ್ಚುಮಾಡುತ್ತಿದ್ದರಂತೆ. ‘ಅವರು ಯಾಕೆ ಸೈಲೆಂಟ್ ಆಗಿ ಇರುತ್ತಿದ್ದರು’!? ಎನ್ನುವ ನನ್ನ ಪ್ರಶ್ನೆಗೆ, ಮದುವೆಯಾಗಿ ಎರಡು ಮಕ್ಕಳು ಹುಟ್ಟಿ, ಸ್ವಲ್ಪ ಸಮಯದಲ್ಲೇ ಹೆಂಡತಿ ಅನಾರೋಗ್ಯದಿಂದ ಸತ್ತಿದ್ದು ತಾತನ ಸೈಲೆಂಟ್ ನೆಸ್‍ಗೆ ಕಾರಣವಿರಬಹುದೆನೋ! ಎನ್ನುತ್ತಿದ್ದಾರೆ ಏರಿಯಾ ಮಂದಿ.
ಮಕ್ಕಳ ಜೀವನವನ್ನು ಚೆನ್ನಾಗಿರುವಂತೆ ನೋಡಿಕೊಂಡಿದ್ದ ತಾತ ಮನಸ್ಸು ಮಾಡಿದ್ದರೆ ಇನ್ನೊಂದು ಮದುವೆಯಾಗಬಹುದಿತ್ತು ಆದರೆ ಮಕ್ಕಳಿಗಾಗಿ ಮದುವೆಯನ್ನೆ ಮಾಡಿಕೊಳ್ಳಲಿಲ್ಲ ಎಂಬುದು ಅವರ ಒಡನಾಡಿಯೊಬ್ಬರ ಮಾತು.

        ಏನಿದ್ದರೂ ಎಲ್ಲವೂ ಉಸಿರಿರೋವರೆಗೆ ಅನ್ನುವ ಮಾತು ನಿಜ ಅನಿಸುತ್ತದೆ. ಮೊನ್ನೆಯವರೆಗೂ ದಿನಾ ಕಾಣುತ್ತಿದ್ದ ತಾತನ ಖುರ್ಚಿ, ಅಂಗಳ ಇಂದು ಅವರಿಲ್ಲದೇ ಖಾಲಿ ಹೊಡೆಯುತ್ತಿದೆ. ನೆನಪು ಗಿರಕಿಯಂತೆ ಬಡಿ ಬಡಿದು ಮನ ನೋಯಿಸುತ್ತಿದೆ.  ಈ ನೋವಲ್ಲಿ ನನ್ನಜ್ಜನು ನೆನಪಾಗುತ್ತಿದ್ದಾರೆ.  

ನಮ್ಮ ವ್ಯಕಿತ್ವಗಳೆಲ್ಲ ರೂಪುಗೊಂಡಿದ್ದು ಅಜ್ಜಂದಿರಿಂದಲೇ. ಅವರ ಅನುಭವ, ಅವರ ಕಥೆಗಳು, ಅವರ ಎದೆಗಾರಿಕೆ ಇತ್ಯಾದಿಗಳೆಲ್ಲವೂ ನಮಗಂದು ವೈವಿಧ್ಯಮಯವಾಗೆÉೀ ಜೀವನ ರೂಪಿಸಿದ್ದವೆಂದರೆ ತಪ್ಪಿಲ್ಲ. ಇವತ್ತು ಎಷ್ಟೇ ಉನ್ನತ ವ್ಯಾಸಂಗ ಮುಗಿಸಿ ಬದುಕು ಕಟ್ಟಿಕೊಂಡಿದ್ದರೂ ನನಗೆ ಸಮಾಜದಲ್ಲಿ ಮಾನವೀಯತೆಯನ್ನು ಕಲಿಸಿಕೊಟ್ಟಿದ್ದು ಅಜ್ಜನ ಕತೆಗಳೇ ಹೊರತು ಇಂದು ನಾವು ಓದುತ್ತಿರುವ ಸ್ಟೋರಿಗಳಲ್ಲ.

     ಶಾಲೆಗಳಲ್ಲಿ ಬೇಸಿಗೆ ರಜೆ ಬಂದರೆ ಅಜ್ಜನ ಮನೆಗೆ ಹೋಗುವುದು, ಅಜ್ಜಿಯಿಂದ ಕೈ ತುತ್ತು ತಿನ್ನಲು ಹವಣಿಸುವುದು, ರಾತ್ರಿಯಾದರೆ ಕಥೆ ಹೇಳಿ ಮಲಗಿಸಿ ಎಂದು ದೊಂಬಾಲು ಬೀಳುವುದೆಲ್ಲ ಇಂದು ಕನಸಷ್ಟೆ. ನನ್ನಜ್ಜ ಕತೆ ಹೇಳುತ್ತಿದ್ದಾಗಂತೂ ನಾನು ಈ ಭೂಮಿ ಮೇಲಿರುವುದನ್ನೆ ಮರೆತು ಕಲ್ಪನಾ ಲೋಕದಲ್ಲಿ ವಿರಹಿಸುತ್ತಿದ್ದೆÉ. ಅಜ್ಜ ಕತೆ ಕಟ್ಟಿ ಹೇಳುವ ರೀತಿಯೇ ಹಾಗಿತ್ತು. ಕತೆಯೊಳಗೆ ತಾವೇ ಪ್ರವೇಶಿಸಿಕೊಂಡು ನಮ್ಮನ್ನು ಅಲ್ಲಿಗೆ ಎಳೆದುಕೊಂಡು ಹೋಗುತ್ತಿದ್ದರು. ಅಷ್ಟೇ ಅಲ್ಲದೇ ಬ್ರಿಟೀಷರ ವಿರುದ್ದದ ಹೋರಾಟದಲ್ಲಿ  ತಾತ ಮತ್ತು ಅವರ ಗೆಳೆಯರು ಸಿಡಿದು ನಿಂತಿದ್ದು, ಚಳ್ಳೆಹಣ್ಣು ತಿನ್ನಿಸಿ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಂಡಿದ್ದು, ಹೀಗೆ ಹೋರಾಟದ ಬದುಕನ್ನು ಹೇಳುತ್ತಿದ್ದಾಗ ನಮ್ಮ ಕಣ್ಣ ಮುಂದೆಯೇ ಅವೆಲ್ಲ ನಡೆದಂತಿರುತ್ತಿತ್ತು.

          ಬೇಸಿಗೆ ರಜೆಯ ದಿನಗಳಲ್ಲಿ ಅಜ್ಜನ ಬೆನ್ನ ಹಿಂದೆ ತಿರುಗಿ ಕಾಲ ಕಳೆಯುತ್ತಿದ್ದ ನನಗೆ, ಈಗಲೂ ಅವರು ಬಾಳಿ ಬದುಕಿದ್ದ ಮನೆಗೆ ಹೋದೆನೆಂದರೆ ಹಳೆಯ ನೆನಪುಗಳೆಲ್ಲ ಕಾಡದೆ ಇರದು. ಕೆರೆ, ಗದ್ದೆ, ಬೀದಿಯಲ್ಲಿರುವ ದೇವರ ಕಲ್ಲು, ಕಾಡಿಗೆ ಹೋಗುತ್ತಿದ್ದಾಗ ವಿರಾಮ ಪಡೆಯಲು ನಿಲ್ಲುತ್ತಿದ್ದ ಗುತ್ತುಗಳು, ರಾತ್ರ್ರಿ ಬೇಟೆಗೆ ಸಜ್ಜಾಗುತ್ತಿದ್ದಾಗ, ‘ನೀನಿನ್ನು ಚಿಕ್ಕವನು ಇಲ್ಲೇ ಇರು ಬರುವುದು ಬೇಡ ನಾನು ಶಿಕಾರಿ ಮಾಡಿಕೊಂಡು ಬರುವೆ.. ಕಾಯುತ್ತಿರು’... ಎಂದು ಅಜ್ಜಿಯ ತೋಳ ತೆಕ್ಕೆಯಲ್ಲಿ ನನ್ನ ಮಲಗಿಸಿ, ರಾತ್ರಿಯಿಡಿ ಕಾಡಿನಲ್ಲಿ ಪ್ರಾಣಿಗಳಿಗಾಗಿ ಬಲೆ ಬೀಸಿ ಮೊಮ್ಮಗನಿಗೆ ಮಾಂಸದೂಟ ಹಾಕಲು ಓಡಾಡುತ್ತಿದ್ದ ನನ್ನಜ್ಜ ಇಂದಿಗೂ ನನಗೆ ಇತಿಹಾಸ.

     ಪ್ರತಿದಿನ ಸಂಜೆ ‘ವಂದಿಪೆ ನಿನಗೆ ಗಣನಾಥ’ ಎಂದು ಪ್ರಾರಂಭವಾಗುವ ಭಜನೆಯ ಪರಿಪಾಠವನ್ನು ಹೇಳಿಕೊಟ್ಟಿದ್ದ ತಾತ, ಹಳ್ಳಿಯಲ್ಲಿ ಸುದೀರ್ಘ ರಾತ್ರಿಯಿಂದ ಬೆಳಗಿನವರೆಗೆ ನಡೆಯುತ್ತಿದ್ದ ಯಕ್ಷಗಾನ ಬಯಲಾಟಕ್ಕೆ ಕರೆದುಕೊಂಡು ಹೋಗಿದ್ದ ನೆನಪು ಇದೆ ನನಗೆ. ಆಗೆಲ್ಲ ಚಳಿಯಾಗುತ್ತೆ! ಎಂದು ಅವನ ಹೆಗಲ ಮೇಲಿದ್ದ ಟವೆಲ್‍ನ್ನು ನನ್ನ ತಲೆ ಮೇಲೆ ಹೊದೆಸುತ್ತಿದ್ದ ತಾತನ ಬಗ್ಗೆ ಬರೆಯಹೊರಟರೇ ಬರವಣಿಗೆ ಮುಗಿಯೋದಿಲ್ಲ.

         
     ನಮ್ಮ ಸುತ್ತಮುತ್ತಲಿನ ಇತಿಹಾಸ, ಪೌರಾಣಿಕ ಮಹತ್ವವನ್ನು ಯಾವುದೇ ಪಠ್ಯಕ್ರಮಗಳ ಓದಿಲ್ಲದೇ ಅಜ್ಜ ಕತೆಗಳ ಮೂಲಕ ತಿಳಿಯುತ್ತಿದ್ದ ನನಗೆ ಇಂದಿನ ಮಕ್ಕಳಿಗೂ ಅಜ್ಜಂದಿರ ಅಪ್ಪುಗೆ ಬೇಕು ಎನಿಸುತ್ತಿದೆ.

       ಇಂದಿನ ದಿನಗಳಲ್ಲಿ ಅಜ್ಜ ಮೊಮ್ಮಕ್ಕಳ ಗಾಢ ಸಂಬಂಧ ಮೊದಲಿನ ಹಾಗೇ ಕಂಡು ಬರುವುದಿಲ್ಲ. ಇವತ್ತಿನ ಮಕ್ಕಳು ಅಜ್ಜ-ಅಜ್ಜಿಯರ ಜೊತೆ ಬೆರೆಯಲು ತಂದೆ ತಾಯಂದಿರು ಬಿಡುತ್ತಿಲ್ಲ. ಯಂತ್ರದ ರೀತಿ ಬೆಳೆಸುತ್ತಿದ್ದಾರೆ. ಮೊದಲೆಲ್ಲ ಹಿರಿಯರ ಪ್ರಭಾವ ಮಕ್ಕಳ ಬೆಳವಣಿಗೆಗೆ ಪೂರಕವಾಗಿತ್ತು. ಇಂದು ಬೇಸಿಗೆಯ ಶಿಬಿರಗಳಿಗೆ ಮಕ್ಕಳನ್ನು ದೂಡುವ ಪಾಲಕರು ಮಕ್ಕಳನ್ನು ಮನೆಯಲ್ಲೇ ಕ್ರೀಯಾಶೀಲರನ್ನಾಗಿಸುವ ಪ್ರಯತ್ನದಲ್ಲಿ ಸಂಬಂಧಗಳ ಪ್ರೀತಿ ತೋರದೆ ಕೂಡಿ ಹಾಕುತ್ತಿದ್ದಾರೆ. ಮಕ್ಕಳು ಮತ್ತು  ಹಿರಿಯರ ನಡುವೆ ಪಾಲಕರು ತಡೆಗೋಡೆಯಾಗಿರದೆ ಬೆಸೆಯುವ ಕೊಂಡಿಯಾಗಬೇಕು. ಇಂದು ಶಾಲೆ ಮುಗಿಸಿ ಮನೆಗೆ ಬರುವ ಮಕ್ಕಳು ಟ್ಯೂಶನ್, ಟಿ.ವಿ ಇತ್ಯಾದಿಗಳಲ್ಲೇ ಸಮಯ ಹಾಳುಮಾಡುವುದನ್ನು ನಿಲ್ಲಿಸಿ ಹಿರಿಯರ ಜೊತೆ ಬೆರೆತು ಭಾಂಧವ್ಯ ಸವಿಯಬೇಕು ಆಗಲೇ ಮಕ್ಕಳ ವ್ಯಕ್ತಿತ್ವ, ಕಲ್ಫನಾ ಶಕ್ತಿ, ಕ್ರೀಯಾಶೀಲತೆ ಚಿಗುರಲು ಸಾಧ್ಯ.
ಏನೇ ಇರಲಿ...ನನ್ನ ತಾತನು ಇಂದು ನನ್ನ ಬಳಿ ಇಲ್ಲ. ಊರಿಂದ ಉದ್ಯೋಗವರಸಿ ಬೆಂಗಳೂರಿಗೆ ಬಂದ ನಂತರ ಎದುರು ಮನೆಯ ತಾತನೇ ನನ್ನವರಾಗಿ ಮನಸೆಳೆಯುತ್ತಿದ್ದರು. ಆದರೆ ಅವರ ಉಪಸ್ಥಿತಿ ಇಂದಿಲ್ಲ. ದಿನಾ ಬೆಳಿಗ್ಗೆ ಸಿಗುತ್ತಿದ್ದ ಸ್ಮೈಲ್ ಫೇಸ್ ಎದುರಿಲ್ಲ...

        ಇಂದು ಎಲ್ಲವೂ ಖಾಲಿ ಖಾಲಿಯಾಗಿ, ನೆನಪುಗಳು ಮಾತ್ರಾ ಉಳಿದಿದೆ ಜೋಲಿಯಾಗಿ...ಎದುರು ಮನೆಯ ತಾತನನ್ನ ಇಂದು ಮಾತನಾಡಿಸಬೇಕು ಅನ್ನಿಸುತ್ತಿದೆ!.  ಆದರೆ ಅವರೇ ಇಲ್ಲ. ಅವರಿಲ್ಲದ ಆ ಜಾಗ ಮತ್ತೆ ಮತ್ತೆ ಕಣ್ಣನ್ನು ಆಕರ್ಷಿಸಿ, ಹೃದಯ ಕರಗಿಸುತ್ತಿದೆ. ಕರಗುವ ಭಾವ ಕಣ್ಣಂಚಲಿ ನೀರು ತರಿಸುತ್ತಿದೆ...ಮಕ್ಕಳು ತಾತನ ಅಂತ್ಯಕ್ರಿಯೆಯ ನಂತರ ಪರಲೋಕಕ್ಕೆ ವಾಪಾಸಾಗಿದ್ದಾರೆ. ತಾತನನ್ನ ನೋಡಿಕೊಳ್ಳುತ್ತಿದ್ದ ಹುಡುಗಿ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದಾಳೆ. ಅಂಗಳ ಬೀಕೋ ಎನ್ನುತ್ತಿದೆ...

Thursday, 9 June 2016

ಸಿರಿ ಬುಲೆಟ್ - ನಾಮ ಹಾಕುವ ಓಲಾ...

ಊಲಾಲಾ ಆಡುವ ಓಲಾ...
ಅಯ್ಯೋ ಓಲಾ ಇರುವುದು ಬಡವರ ಪಾಲಿಗಲ್ಲಯ್ಯ!!.
‘ಪೀಕ್ ಚಾರ್ಚ್’ ಎಂದು ಫಜೀತಿಗೆ ಸಿಲುಕಿಸುತ್ತಾರೆ ಹುಷಾರ್!!!
ಇಂಗ್ಲೀಷ್ ಓದಿ ಅರ್ಥೈಸಿಕೊಳ್ಳಲು, ಬಂದಿಲ್ಲವೆಂದರೆ ನಿಮ್ಮ ಕತೆ ಗೋವಿಂದ..! 

          ಮಾರುಕಟ್ಟೆಗಿಂದು ಬರಗಾಲವಿಲ್ಲ... ಎಲ್ಲ ರಂಗದಲ್ಲಿಯೂ ಅದರ ವ್ಯಾಪಕತೆ ಜೋರಾಗಿದೆ, ಹಬ್ಬಿಕೊಂಡಿದೆ!..ತಬ್ಬಿಕೊಂಡಿದೆ!.. ಅನೇಕ ವರ್ಷಗಳಿಂದ                                                                                                                                                                                                                                                                ಅಂತ್ಯವಿಲ್ಲವೆಂಬಂತೆ ಲಾಭ ನಷ್ಟಗಳ ಮೆಟ್ಟಿಲ ಮಜಲುಗಳನ್ನು ಹತ್ತಿಕೊಂಡು ಸಾಗುತ್ತಲೇ ಇದೆ. ಪ್ರಾರಂಭದಲ್ಲಿ ಮಾರುಕಟ್ಟೆ ಎನ್ನುವ ಪದ ಸಂಚಾರವಾಗಿದ್ದು ಕಿರಾಣಿ ಸರಕು, ಜಾನುವಾರು ಹಾಗೂ ಇತರ ಸರಕುಗಳ ಕೋಡು-ಕೊಂಡುವಿಕೆಯಲ್ಲಾದರೂ, ಔಧ್ಯಮಿಕ ಕ್ರಾಂತಿಯ ನಂತರದ ದಿನಗಳಲ್ಲಿ ಮಾನವ ಸ್ಮಾರ್ಟ್ ಥಿಂಕಿಂಗ್ ನಡೆಸುತ್ತಾ, ಎಲ್ಲಾ ವ್ಯವಹಾರದ ಪ್ರಗತಿ ಕಂಡುಕೊಳ್ಳಲು ಮಾರ್ಕೆಟಿಂಗ್ ವ್ಯಾಕುಲತೆಯ ಸಂಚಲನ ಸೃಷ್ಟಿಸಿಕೊಂಡ.

         ದೇಶ ಪ್ರಗತಿಯಲ್ಲಿದೆ ನಿಜ!, ಬೆಳವಣಿಗೆ ಕಾಣುತ್ತಿದೆ ಅದೂ ನಿಜ!!. ಅನೇಕಾನೇಕ ಕಂಪೆನಿಗಳು ಮಾರುಕಟ್ಟೆಯ ಸಹಾಯದಿಂದ ಇಂದು ತಲೆಯೆತ್ತಿ ನಿಂತು ದೇಶದ ಪ್ರಗತಿಯಲ್ಲಿ ಸಕ್ರೀಯವಾಗಿವೆ. ಒಂದರ ಹಿಂದೆ ಒಂದು ಎಂಬಂತೆ ಲಕ್ಷಗಟ್ಟಲೇ ಕಂಪೆನಿಗಳು ಮಾರುಕಟ್ಟೆಯ ಲಾಭದಿಂದ ಬೀಗಿ ಬೆಂಡಾಗದೆ ನೆಲೆನಿಂತಿವೆ. ಆದರೆ ಆ ಲಾಬಾಂಶಗಳ ಅತೀ ಆಸೆ ಇದೀಗ ಅಕ್ರಮಗಳು ತಾಂಡವವಾಡುವಂತೆ ಮಾಡಿದೆ. ಸಾವಿರ ಎನ್ನುವಂತಹ ಲಾಭಾಂಶ ಲಕ್ಷಕ್ಕೇರಿಸಬೇಕು ಎನ್ನುವ ದುರಾಸೆಗಳಿಂದ ಸಾಮಾನ್ಯ ವರ್ಗದ ಜನತೆಯನ್ನು ಬಂಡವಾಳ ವರ್ಗ ಯಾಮಾರಿಸುತ್ತಿದೆ. ಅಂತಹ ಒಂದು ಲೇಟೆಸ್ಟ್ ವಂಚನೆಯ ಮಾಹಿತಿಯೇ ಈ ಲೇಖನ. 
ಯಾಮಾರಬೇಡಿ ಹುಷಾರಾಗಿರಿ...

     ಇಂತಹದೊಂದು ಆಕ್ರಮಣಶೀಲತೆ ಸೃಷ್ಟಿಯಾಗುತ್ತಿರುವುದು ಬೇರೆಲ್ಲೂ ಅಲ್ಲ, ‘ಬಡವರ ಟ್ಯಾಕ್ಸಿ’, ‘ಕಡಿಮೆ ಬಾಡಿಗೆಯಲ್ಲಿ ಸರ್ವರೂ ಚಲಿಸಿ’ ಎಂಬಂತ ಘೋಷವಾಕ್ಯವನ್ನಿಟ್ಟು ಮಾರುಕಟ್ಟೆಯಲ್ಲಿ ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ವಾಹನಗಳೊಂದಿಗೆ ಸವಾರಿ ಆರಂಭಿಸಿದ ‘ಓಲಾ ಕ್ಯಾಬ್’ ಸರ್ವಿಸ್‍ನಲ್ಲಿ!..
ಎಸ್!.. ನಿಜ...

ನಂಬಲಾಗುತ್ತಿಲ್ಲವಾ!? ನಂಬಲೇಬೇಕು!..
    ಹಾಗಿದೆ-ಹೀಗಿದೆ!, ಆ ಸೇವೆ ಇದೆ-ಈ ಸೇವೆ ಇದೆ!., ಎಂದು ನಂಬಿಸಿ ಸಾವಿರಾರು ಜನರನ್ನು ತನ್ನತ್ತ ಸೆಳೆದು ಆ್ಯಪ್ ಎನ್ನುವ ಮಾಯಾಜಾಳದಲ್ಲೇ ಪಿಕ್ ಅಪ್ ಡ್ರಾಪ್ ಎನ್ನುವ ಆಟ ಆಡಿ, ನಂಬಿಸಿ ಇದೀಗ ಹೊಸ ಹೊಸ ಪ್ಲಾನ್ ಗಳ ಅಪ್ ಡೇಟ್ ನಿಂದ ಕತ್ತು ಕುಯ್ಯಲು ಮುಂದಾಗಿದೆ ಓಲಾ ಎನ್ನುವ ಒಡೆಯನ ಕಾರು.

ಉದಾಹರಣೆ ಕೊಡ್ತೀನಿ ಓದಿ:
   ತೀರಾ ಮೊನ್ನೆ ಮೊನ್ನೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬೇಕೆಂದುಕೊಂಡಿದ್ದ  ಆಕಾಶ್ ಎಂಬ ವ್ಯಕ್ತಿ ಮಾಮೂಲಿಯೆಂಬಂತೆ ಬೆಳಿಗ್ಗೆ 5:50 ರ ಸುಮಾರಿಗೆ ಓಲಾ ಕ್ಯಾಬ್ ಬುಕ್ ಮಾಡಿಕೊಂಡು ಕೋರಮಂಗಲದಿಂದ   ಏರ್ ಪೋರ್ಟ್‍ಗೆ ಸಾಗಿದ್ದ. ಅಲ್ಲಿಂದಲ್ಲಿಗೆ ಸುಮಾರು 50 ಕಿಲೋಮೀಟರ್ ದೂರ ಟ್ಯಾಕ್ಸಿ ಪ್ರಯಾಣ ಆಗಿರಬಹುದು. ಏರ್‍ಪೋರ್ಟ್ ತಲುಪಿದ ನಂತರ ಆಕಾಶ್‍ಗೆ ಟ್ಯಾಕ್ಸಿ ಬಿಲ್ ನೋಡಿ ಗಾಬರಿ!!. ಸಾಮಾನ್ಯವಾಗಿ ಅಬ್ಬಾಬ್ಬಾ ಅಂದರೆ 800 ರೂಪಾಯಿಯ ಒಳಗೆ ಕಾಣಿಸಬೇಕಾಗಿದ್ದ ಬಿಲ್ ಮೊತ್ತ ಬರೋಬ್ಬರಿ 2,767 ರೂ ತೋರಿಸುತ್ತಿತ್ತು. ಕ್ಷಣಾರ್ಧದಲ್ಲಿ ತೀವ್ರ ವಿರೋಧದ ನಡುವೆ ಸಿಡಿದೆದ್ದ ಆಕಾಶ್, ಕ್ಯಾಬ್‍ನ ಡ್ರೈವರ್ ಮೇಲೆ ಜಗಳಕಾಯ್ದರು ಯಾವ ಪ್ರಯೋಜನವಾಗದೆ ಬಿಲ್ ಪೇಮೇಂಟ್ ಮಾಡಲೇಬೇಕಾಯಿತು. ಓಲಾ ಕಸ್ಟಮರ್ ಕೇರ್‍ಗೆ ಫೋನ್ ಮಾಡಿ ವಿಚಾರಿಸಿದರೆ ಅವರ ಉತ್ತರ, ಸರ್ ನಿಮಗೆ ‘ಪೀಕ್ ಚಾರ್ಚಸ್’ ಅಪ್ಲೈ ಆಗಿದೆ, ಪೀಕ್ ಆಪ್ಶನ್‍ನಲ್ಲಿ ನೀವು ಬುಕ್ ಮಾಡಿದ್ರಿ!... ಡಿಸ್ ಪ್ಲೇ ಮೆಸೇಜ್ ಓದಿ ನೋಡಿ ನೀವು ಕ್ಯಾಬ್ ಬುಕ್ ಮಾಡಬೇಕಿತ್ತು. ಏನೂ ಮಾಡಲಾಗುವುದಿಲ್ಲ ಪೇ ಮಾಡಲೇಬೇಕು ಎಂದು ಕೈತೊಳೆದುಕೊಂಡಿದ್ದಾರೆ. ಲೆಕ್ಕಾಚಾರ ಮಾಡಿ ನೋಡಿದರೆ ಆಕಾಶ್‍ರವರ ಪ್ರಯಾಣದ 50 ಕಿ,ಮೀನಲ್ಲಿ ಮೊದಲ 30 ಕಿ.ಮೀಗೆ 540 ರೂ. ಹಾಗೂ ನಂತರದ 20 ಕಿ.ಮೀಗೆ 1,639 ರೂ. ಚಾರ್ಜಸ್ ಬಿದ್ದಿದೆ. ಎಲ್ಲಿದೆ ಸ್ವಾಮಿ ಇಷ್ಟೊಂದು ಬಿಲ್!! ಯಾವ ಮಾಮೂಲಿ ಟ್ಯಾಕ್ಸಿ, ಆಟೋದವರು ಇಷ್ಟು ಚಾರ್ಚ್ ಮಾಡುತ್ತಾರೆ ನೀವೇ ಹೇಳಿ!?.  

   ಆಕಾಶ್‍ಗೆ ಒಂದು ಕಿಲೋ ಮೀಟರ್‍ಗೆ 81.95 ರೂ ಚಾರ್ಜಸ್ ಬಿದ್ದಿತ್ತು. ಸದ್ಯ ಒಂದು ಲೀಟರ್ ಪೆಟ್ರೋಲ್‍ಗೆ 67.64 ಹಾಗೂ ಡೀಸೆಲ್ ಬೆಲೆ ಇರುವುದು 55.32 ರೂ. ಅಂದರೆ 1 ಲೀಟರ್ ಪೆಟ್ರೋಲ್, ಡೀಸೆಲ್‍ಗಿಂತಲೂ ದುಪ್ಪಟ್ಟು ದುಡ್ಡನ್ನು ತೆಗೆದುಕೊಂಡು ಅದಕ್ಕೊಂದು ನಾಮಧ್ಯೇಯ ಎಂಬಂತೆ ಪೀಕ್ ಚಾರ್ಚ್ ಎಂದು ಚಾಕಚಕ್ಯತೆಯಲ್ಲಿ ತಲೆ ಹೊಡೆದು ದುಡ್ ಮಾಡುವುದೆಂದರೆ ಇದೆ ಅಲ್ವಾ!?
 ಈಗ ಹೇಳಿ ಸ್ವಾಮಿ ಮಾಮೂಲಿ 1 ಕಿ.ಮೀ ಗೆ 6 ರೂ.ನಂತೆÉ ಟ್ಯಾಕ್ಸಿ ದೊರಕಿಸಿಕೊಡುತ್ತಿದ್ದ ಓಲಾ ಯಜಮಾನ ಹೀಗೆಲ್ಲಾ ಅಕ್ರಮವಾಗಿ ಆಟವಾಡಿ ಊಲಾಲಾ ಆಡುತ್ತಿರುವುದನ್ನು ಏನೆಂದು ಕರೆಯಬಹುದು!?

    ಇಂತಹ ಅಕ್ರಮವನ್ನು ಬಯಲಿಗೆಳೆಯಬೇಕು, ಸಾಮಾನ್ಯರಿಗಾಗುತ್ತಿರುವ, ಮುಂದೆ ಆಗಬಹುದಾದ ಅನ್ಯಾಯವನ್ನು ತಡೆಯಬೇಕು, ಈ ಬಗ್ಗೆ ಹೆಚ್ಚಿನ ಪರೀಕ್ಷೆ ನಡೆಸಬೇಕೆಂದು ನಮ್ಮ ಸಿರಿ ತಂಡ  ಓಲಾ ಕ್ಯಾಬ್ ಬುಕ್ ಮಾಡಿ ಹೊಸತೊಂದು ಸಾಹಸಕ್ಕೆ ಕೈ ಹಾಕಿತು.

     ಮೂರು ಜನರಿದ್ದ ನಮ್ಮ ತಂಡ, ಸಿರಿ ಕಛೇರಿ ಪ್ಯಾಲೆಸ್ ಗುಟ್ಟಹಳ್ಳಿಯಿಂದ ಮೈಸೂರು ರಸ್ತೆಯ ಬಳಿ ಇರುವ ಸ್ಯಾಟಲೈಟ್ ಬಸ್ ಸ್ಟ್ಯಾಂಡ್‍ವರೆಗೆ ಓಲಾ ಕ್ಯಾಬ್ ಬುಕ್ ಮಾಡಿ ಹೊರಟುಬಿಟ್ಟಿತು. ಹೋಗುವಾಗ ಮಿನಿ ಕ್ಯಾಬ್ ಮಾಡಿಕೊಂಡು, ಸಾಮಾನ್ಯ ಬುಕ್ಕಿಂಗ್‍ನಲ್ಲಿ ಹೋಗಿ ಇಳಿದೆವು. ಚಾರ್ಜಸ್ 125 ರೂಪಾಯಿ ಆಯ್ತು. ಮತ್ತೆ ರಿಟರ್ನ್, ಓಲಾ ಆ್ಯಪ್ ಓಪನ್ ಮಾಡಿ ಪೀಕ್ ಚಾರ್ಜಸ್‍ನಲ್ಲಿ ಬುಕ್ ಮಾಡಲಾಯಿತು. ಅದು ಯಾವ ನಿಖರವಾದ ಮೆಸೇಜ್‍ಗಳನ್ನು ಕಣ್ಣಿಗೆ ಕಾಣಿಸದೇ ಬುಕ್ಕಿಂಗ್ ತೆಗೆದುಕೊಂಡಿತು. ಸೆಟಲೈಟ್ ಬಸ್ ಸ್ಟ್ಯಾಂಡ್‍ನಿಂದ, ಪ್ಯಾಲೇಸ್ ಗುಟ್ಟಳ್ಳಿಗೆ ಬಂದು ಇಳಿಯಿತು ನಮ್ಮ ತಂಡ. ಇಳಿಯುವವರೆಗೂ ಪೀಕ್ ಚಾರ್ಜಸ್‍ನಲ್ಲಿ ಪ್ರಯಾಣಿಸಲಾಗುತ್ತಿದೆ ಎಂದು ನಮ್ಮ ತಂಡಕ್ಕಾಗಲಿ, ಡ್ರೈವರ್‍ಗಾಗಲಿ ತಿಳಿಯಲೇ ಇಲ್ಲ. ಮಧ್ಯೆ ಯಾವ ಮೆಸೇಜ್ ಕೂಡ ಸಂದೇಶ ಸಾರಲಿಲ್ಲ... ಜರ್ನಿ ಅಂತಿಮಗೊಳಿಸಿ ಬಿಲ್ ಡಿಸ್ ಪ್ಲೇ ಆದಾಗಲೇ ತಿಳಿಯಿತು. ಕೇವಲ 8 ಕಿ.ಮೀನ ನಮ್ಮ ಪ್ರಯಾಣಕ್ಕೆ ಬರೋಬ್ಬರಿ 512 ರೂಪಾಯಿಯ ಬಿಲ್ ಹೊರಬಿದ್ದಿತ್ತು!.. 
ಅಬ್ಬಾ!! ಹೀಗೂ ದುಡಿತಿದ್ದಾರಾ ಓಲಾ ಸಂಸ್ಥೆ ಎನ್ನುವ ಶಾಕ್ ಆಗ ನಮಗಾಯಿತು.

   
       ನಿಗಧಿಪಡಿಸಿದ ಹತ್ತಾರುಪಟ್ಟು ಹೆಚ್ಚು ಮೊತ್ತವನ್ನು ನಮಗೆ ಅರಿವಿಲ್ಲದೇ, ಇರಿದು ರಕ್ತಬರದಂತೆ ಸಾಯಿಸಿ ಸುಲಿಗೆಗೈಯುವುದೆಂದರೆ ಇದೆ ಅಲ್ಲವಾ!!? ಎರಡೂವರೆ ವರ್ಷಗಳ ಹಿಂದೆ ಓಲಾ ದೆಹಲಿಯಲ್ಲಿ ಚಾಲ್ತಿಯಾದಾಗ ಬೆಂಗಳೂರಿಗೆ ಬರಲಿ ಎಂದು ನಾವೂ ಸ್ವಾಗತಿಸಿದ್ದೆವು. ಎಲ್ಲೆಲ್ಲೂ ಓಲಾ ಓಲಾ ಎನ್ನುವ ಮಾತುಬಂದಾಗ ಇನ್ನಾದರೂ ಆಟೋ ರಿಕ್ಷಾದವರು ಮಾಡುವ ಸುಲಿಗೆಗೆ ಬ್ರೇಕ್ ಬಿತ್ತು. ಒಳ್ಳೆಯ ಸೇವೆ ಎಂದು ಅಪ್ಪಿಕೊಂಡಿದ್ದೆವು. ಪ್ರಾರಂಭದಲ್ಲಿ ‘ಕಡಿಮೆ ದರ, ಸಾಮಾನ್ಯನಿಗೆ ವರ’.., ಎನ್ನುವಂತಿದ್ದ ಓಲಾವನ್ನು ‘ಬಡವರ ಪ್ರಯಾಣದ ದೇವರಾಯಿತು, ಎಲ್ಲರಿಗೂ ಕೈ ಗೆಟುಕುವ ದರದಲ್ಲಿ ಸಿಗುತ್ತೆ’ ಹಾಗೆ ಹೀಗೆ ಎಂದೆಲ್ಲಾ ಪಟಾಕಿ ಹಾರಿಸಿದ್ದ ಓಲಾ ಸಂಸ್ಥೆ ಇದೀಗ ‘ಪೀಕ್ ಚಾರ್ಚಸ್’ ಎನ್ನುವ ಮೂಲಕ ಬಡ ಸವಾರರನ್ನು ಪ್ರಯಾಣದ ಬಳಿಕ ಪೀಕಲಾಟಕ್ಕೆ ದೂಡುವುದು ನಿಶ್ಚಿತ ಎನಿಸುತ್ತಿದೆ.     

   ಅಷ್ಟಕ್ಕೆ ನಮ್ಮ ತಂಡ ಸುಮ್ಮನಾಗಲಿಲ್ಲ. ಕಸ್ಟಮರ್ ಕೇರ್‍ಗೆ ಡಯಲ್ ಮಾಡಿ ವಿಚಾರಿಸೋಣವೆಂದು ಟೋಲ್ ಫ್ರಿ ನಂಬರ್‍ಗೆ ಡಯಲ್ ಮಾಡಿತು. ಒಂದೆರಡು ಬಾರಿ ನೇರ ಕನೆಕ್ಟ್ ಆಗದೆ ಆಟ ಆಡಿಸಿದ ಅವರ ಕಸ್ಟಮರ್ ಸರ್ವಿಸ್, ನಂತರ  5 ನಿಮಿಷದ ವೈಟಿಂಗ್‍ನಲ್ಲಿ ಆಂಗ್ಲಬಾಷೆಯಲ್ಲಿ ಮಾತುಗಾರಿಕೆಗೆ ಇಳಿಯಿತು. ಅಂತೂ ಮೇಲೆ ಹೇಳಿದಂತೆ ತಮ್ಮ ನಿಲುವೇ ಸರಿ, ನೀವು ಬುಕ್ ಮಾಡಿದ್ದೇ ತಪ್ಪು, ಸರಿಯಾಗಿ ನೋಡಿಕೊಂಡು ಮಾಡಬೇಕು, ಪೀಕ್ ಚಾರ್ಜಸ್ ಇದ್ದರೆ ನಿಮ್ಮ ಮೊಬೈಲ್‍ನಲ್ಲಿ ವಾರ್ನಿಂಗ್ ಮೆಸೇಜ್ ಬರುತ್ತೆ!, ಅದನ್ನು ಗಮನಿಸದೇ ಬುಕ್ ಮಾಡಿದರೆ ಹೀಗೆ ಆಗುತ್ತೆ! ಎನ್ನುವ ಮಾತಿನೊಂದಿಗೆ, ‘ನಾವೇನು ಮಾಡಲು ಬರುವುದಿಲ್ಲ ಸರ್ ದಯಮಾಡಿ ಪೇ ಮಾಡಿ’ ಎಂದಳಾಕೆ. ‘ಆಯ್ತು ಮಾಡ್ತೀವಿ.., ಆದ್ರೆ ಯಾಕೀಥರ ಬಡವರ ಮೇಲೆ ಸುಲಿಗೆ ಮಾಡುತ್ತೀರಾ? ನಿಮ್ಮ ಮ್ಯಾನೇಜ್‍ಮೆಂಟ್ ಲೆವೆಲ್‍ಗೆ ಕಾಲ್ ಕನೆಕ್ಟ್ ಮಾಡಿ ನಾವು ಮಾತಾಡ್ತೇವೆ’ ಅಂದ್ರೆ ‘ಹಾಗೆ ಕನೆಕ್ಟ್ ಮಾಡೋಕೆ ಆಗುವುದಿಲ್ಲ ಸರ್ ಬೇಕಿದ್ರೆ ನಿಮ್ಮ ಅಹವಾಲನ್ನು ಮೇಲ್ ಮೂಲಕ ನಾನು ಮಂಡಳಿಗೆ ತಿಳಿಸುತ್ತೇನೆ, ನಿಮಗೆ ಮೇಲ್ ಬರುತ್ತೆ ನಿಮ್ಮ ಕಂಪ್ಲೇಂಟ್ ಪಡೆದುಕೊಳ್ಳುತ್ತೇನೆ’ ಎನ್ನುತ್ತಾ ಕಾಲ್ ತುಂಡರಿಸಿದ ಆಕೆ ಇವತ್ತಿನವರೆಗೂ ನಾವು ಕಾಯುತ್ತಿದ್ದರೂ ಯಾವ ಕಂಪ್ಲೇಂಟ್ ಕಾಪಿಗಳನ್ನು ಇ-ಮೇಲ್‍ಗೆ ರವಾನಿಸದೇ ಇರುವುದು ಸಂಶಯಕ್ಕೆ ಎಡೆಮಾಡಿದೆ.

   ಹೌದು ಸ್ವಾಮಿ!, ನಾವು ಬಡವರು ಅದನ್ನು ಬಿಡಿ ಆದರೆ ಎಲ್ಲರಿಗೂ ಇಂಗ್ಲೀಷ್ ಬುರುತ್ತದಾ!? ಅದನ್ನು ಹೇಳಿ ಮೊದಲು!!! ನಾವೇನೋ ಓದಿದ್ದೀವಿ, ಇಂಗ್ಲೀಷ್ ಕಲಿತಿದ್ದೀವಿ, ಮೆಸೇಜ್‍ನ್ನು ಓದಿ ಬುಕ್ ಮಾಡುತ್ತೇವೆ!, ಆದರೆ ಒಬ್ಬ ಸಾಮಾನ್ಯ ಮನುಷ್ಯ, ಇಂಗ್ಲೀಷ್ ಬರದಿದ್ದವನು ನಿಮ್ಮ ಕಾರ್‍ನಲ್ಲಿ ಚಲಿಸಬೇಕಲ್ಲ... ಅವನು ಹೇಗೆ ಆ ನಿಮ್ಮ ವಾರ್ನಿಂಗ್ ಮೆಸೇಜ್‍ಗಳನ್ನೆಲ್ಲಾ ಓದುತ್ತಾನೆ!?? ಉತ್ತರ ನೀಡಿ...

   ಪ್ರಾರಂಭ ದಿನಗಳಲ್ಲಿ ಗ್ರಾಹಕರು, ಡ್ರೈವರ್‍ಗಳನ್ನು ಸೆಳೆಯುವ ದೃಷ್ಟಿಯಿಂದ ಸಾವಿರ ಸಾವಿರ ಸಂಬಂಳ, ಇನ್‍ಸೆಂಟಿವ್ ನೀಡುತ್ತಿದ್ದ ಓಲಾ ಒಡೆಯ ಇಂದು  ಅಂದುಕೊಂಡಂದ್ದಕ್ಕಿಂತ ಅಧಿಕ ಲಾಭ, ಹಾಗೂ ಜನ ಬಲ ಬಂದ ಕೂಡಲೇ ಎಲ್ಲದಕ್ಕೂ ಬದಲಾವಣೆ ಹಾಡಿದ್ದಾನೆ. ಅಂದು ಡ್ರೈವರ್‍ಗಿದ್ದ ಲಾಭಾಂಶ ಕಡಿಮೆಗೊಳಿಸಿದ್ದಾನೆ. ಇನ್ ಸೆಂಟಿವ್‍ನಲ್ಲೂ ಹಂಬಾಕಿನ ಆಟವಾಡುತ್ತಿದ್ದಾನೆ.

  ಇಷ್ಟೇ ಅಲ್ಲದೇ ಕ್ಯಾಬ್‍ಗಳು ಎಷ್ಟು ದುರ್ಬಳಕೆಯ ಹಂತಕ್ಕೆ ಇಂದು ತಲುಪಿದೆ ಎಂದರೆ, ವರದಿಯೊಂದರ ಪ್ರಕಾರ ಕ್ಯಾಬ್‍ಗಳು ರಾಜ್ಯ ಪರವಾನಗಿ ಪಡೆದು, ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತಿವೆ ಎಂದು ಹೇಳಲಾಗಿದೆ. ಅದೆಷ್ಟೋ ಕ್ಯಾಬ್‍ಗಳಲ್ಲಿ ಇನ್ನೂ ಯಾವುದೇ ರೀತಿಯ ಡಿಜಿಟಲ್ ಮೀಟರ್ ಅಳವಡಿಸಿಲ್ಲ, ರಸ್ತೆÉ ತೆರಿಗೆ ಪಾವತಿಸಿಲ್ಲ, ವಾಹನಗಳ ಅರ್ಹತೆ, ಪತ್ರದ ಅವಧಿ ಮುಗಿದಿದ್ದರೂ ವಾಹನಗಳ ಕಾರ್ಯಾಚರಣೆ ಮುಂದುವರಿದಿರುವುದು ಬೆಳಕಿಗೆ ಬಂದಿದೆ.  ಇದಷ್ಟೇ ಅಲ್ಲದೇ ಇದೀಗ ಸಾರಿಗೆ ನಿಯಮ ನಿಗಧಿಪಡಿಸಿದಕ್ಕಿಂತ ಹತ್ತಾರು ಪಟ್ಟು ಹೆಚ್ಚು ಹಣ ವಸೂಲಿಗಳು ದಾಖಲಾಗುತ್ತಿದ್ದು, ಜನರ ಹಣವನ್ನು ದೋಚುವ ಹುನ್ನಾರ ನಡೆಯುತ್ತಿರುವುದು ಕಂಡು ಬಂದಿದೆ...

   
ನೀವು ಸಾಮಾನ್ಯ ಮನುಷ್ಯರಾಗಿದ್ದರೆ ನಿಮ್ಮ ಪಾಕೇಟ್ ಮೇಲು ಇವರು ಬರೆ ಎಳೆಯುವುದು ಗ್ಯಾರಂಟಿ. ಸಂಬಂಧಿಸಿದ ಸಾರಿಗೆ ಇಲಾಖೆ ಇದರ ಬಗ್ಗೆ ಈಗಲೇ ಸರಿಯಾದ ನಿರ್ಣಯ ತೆಗೆದುಕೊಂಡಿಲ್ಲ ಎಂದಾದರೆ ಮುಂದೊಂದು ದಿನ 10 ರೂಪಾಯಿಯ ಮೀಟರ್ ಚಾರ್ಜ್‍ಗೆ 100 ರೂಪಾಯಿ ನೀಡಿ ಹೋಗುವ ಸಮಯ ನಿಮಗೂ ಬಂದು ‘ಪೀಕ್ ಫಜೀತಿ’  ಸಂಭವಿಸಬಹುದು!. 
ಸರ್ಕಾರ ಈ ಬಗ್ಗೆ ಸರಿಯಾದ ನಿಲುವನ್ನು ಕೈಗೊಂಡು ಎಲ್ಲರಿಗೂ, ಎಲ್ಲ ಸಮಯದಲ್ಲೂ ಸಮಾನ ರೀತಿಯಲ್ಲಿ ದೊರಕುವ ಭಾಗ್ಯ ಒದಗಿಸಬೇಕಾಗಿದೆ. ಯಾರೋ ಓಡಿಸುವವನು!, ಯಾರೋ ಆಡಿಸುವವನು! ಆಗಿರುವ ಈ ಆನ್ ಲೈನ್ ಕ್ಯಾಬ್‍ಗಳ ಬಗ್ಗೆ ಅಧಿಕಾರಿಗಳು ಒಂದು ಕಣ್ಣನ್ನು ಇಡಬೇಕು. ಅವರವರೇ ತಂದುಕೊಳ್ಳುವ ಕಾನೂನುಗಳಿಗೆ ಬ್ರೇಕ್  ನೀಡಬೇಕು...
ಪ್ರಯಾಣಿಕರು ಅಷ್ಟೇ ಜಾಗೃತರಾಗಿ ಮುಂದುವರಿಯಿರಿ. ದೋಚುವ ಕ್ಯಾಬ್‍ಗಳ ಬಗ್ಗೆ ಎಚ್ಚರದಿಂದಿರಿ. ಇಲ್ಲವಾದರೆ ಮುಂದೊಂದು ದಿನ ಇನ್ನೂ ಯಾವ ಯಾವ ಚಾರ್ಜಸ್‍ನ್ನು ಹೇರಿ ನಮ್ಮನ್ನು ಸುಲಿಗೆ ಮಾಡುವರೋ ತಿಳಿದಿಲ್ಲ...
                                                    ಕೇರ್ ಫುಲ್ ಯೂರ್ ಸೆಲ್ಫ್...




Friday, 6 May 2016

ಅಲೆದಾಟದ ನಡುವೆ...


   
            ಮೊದಲಿನಿಂದಲೂ ಅಲೆಮಾರಿತನ ನನಗೆ ಇಷ್ಟ ಬೆಟ್ಟ-ಗುಡ್ಡ ಹತ್ತೋದು, ತಿಳಿಯದ ಊರುಗಳಲ್ಲಿ ಸುತ್ತೋದು, ನಿರ್ಜನ ಪ್ರದೇಶ, ಬಾಲ್ಯ ದಿನ ಕಂಡಿದ್ದ-ಕಳೆದ ಅದ್ಭುತ ಪ್ರದೇಶಗಳಲ್ಲಿ ಅಲೆಯೋದು, ಹೊಸ ಮುಖಪರಿಚಯದವರೊಂದಿಗೆ ಮಾತಾಡೋದು, ಹೊಸತನದಲ್ಲಿ ಬದುಕೋದು, ಹೊಸ ಹೊಸ ಜೀವನಶೈಲಿಯಲ್ಲಿ ಬಾಳುವ ಜನರನ್ನು ಒಡನಾಡುವುದು, ನವೀನ ಬಗೆಯಲ್ಲಿ ಬಾಳಿನ ಏರಿಳಿತವನ್ನು ಕಂಡುಕೊಂಡು ಕಷ್ಟವಿರಲಿ-ಸುಖವಿರಲಿ ಅದರಲ್ಲೇ ಖುಷಿಯ ನಲ್ಮೆಯನ್ನು ಪಡೆಯುವುದು.., ಹೀಗೆ ಎಲ್ಲವೂ ಕೂಡ ಕಾಣದ ಪುಳಕತನದಲ್ಲಿ ಕಂಡು, ಮೇಳೈಸಿಕೊಂಡು ಜಾತ್ರೆಯಂತೆ ಬಾಳುವುದು ನನಗೊಂಥರ ಇಷ್ಟ.

ಬಹುಶಃ ಎಲ್ಲರಂತೆ ಬದುಕುವ ಭಿತ್ತಿ, ಅನುಭವಿಸುವ ಚಾಕರಿ ನನ್ನಲ್ಲಿಲ್ಲ. ಸಣ್ಣ ನಡಿಗೆಯಲ್ಲೇ ಯಾರೂ ಕಾಣದ ಸುಖ ನಾ ಕಾಣುವೆ. ಯಾರೂ ಅರಿಯದ ಮೌನ ಮನವನ್ನು ಜೋಕಾಲಿಯಂತೆ ತೂಗಿಸಿಕೊಂಡು ಹೊಸ ವಿಚಾರಗಳನ್ನು ತುಂಬಿಸಿ ತುಳುಕಿಸಿ ಮೈಮರೆಯುವೆ. ನನ್ನೊಳಗೆ ಹರಿಯುವ ಎಲ್ಲಾ ಲಹರಿಗಳು ನನಗೆ ಖುಷಿ ಕೊಡುತ್ತವೆ. ಅವುಗಳು ಇನ್ನೂ ಒಮ್ಮೊಮ್ಮೆ ಗಟ್ಟಿಯಾಗಿ ಜನಜಂಗುಳಿಯ ಮಧ್ಯೆಯೂ ಹರಟಲು ಕಾತರಿಸುತ್ತವೆ. ವಿಧ್ಯಾಭ್ಯಾಸದ ದಿನಗಳಲ್ಲಂತೂ ದಿನಚರಿಯ ಖಾತೆಯಲ್ಲಿ ಬರೋಬ್ಬರಿ ತಿರುಗಾಟ ನಡೆಯುತ್ತಾ, ಬಗಲಿಗೆ ಪುರವಣಿಗಳ ಪುಟದಂತೆ ಪಯಣದ ಮೋಜು ಜೋಡಣೆಯಾಗುತ್ತಲೇ ಇತ್ತು. ಕೆಲಸಕ್ಕೆಂದು ಸೇರಿದ ಮೇಲೆ ಮಾಮೂಲಿ ರಜಾದಿನ ಮಾತ್ರಾ ಪಟ್ಟಿ ಮಾಡುತ್ತಿದ್ದೆ ಆದರೆ ಇತ್ತೀಚಿಗೆ ಅದಕ್ಕೂ ಫುಲ್‍ಸ್ಟಾಪ್ ಇತ್ತು, ಕಛೇರಿ ಕೆಲ¸ದಲ್ಲೇ ಜಾಸ್ತಿ ಮಗ್ನನಾಗಿದ್ದೆ ಎಂದರೆ ತಪ್ಪಿಲ್ಲ... 

     ಆದರೂ ನಡುನಡುವೆ ಕಛೇರಿಯಿಂದ ಮನೆಗೆ ಬರುವ ಸಮಯದಲ್ಲಿ ಸುಮ್ ಸುಮ್ಮನೆ ದಾರಿ ತಪ್ಪಿಸಿಕೊಂಡು ‘ನೋಡೋಣ ಇಂದು ಈ ರೂಟ್‍ನಲ್ಲ್ಲಿ ಹೋದರೆ ಏನಾದರೂ ಹೊಸತನ್ನು ಕಾಣಬಹುದೇನೋ’ ಎನ್ನುವ ಹಂಬಲದೊಂದಿಗೆ ಹಾದಿ ಬದಲಿಸಿ, ವಿಳಾಸ ವಿಚಾರಿಸಿ, ವಿಶ್ರಾಂತದೊಂದಿಗೆ ಪಯಣಿಸಿ ಮನೆಯೆಂಬ ಗೂಡು ಸೇರುತ್ತಿದ್ದೆ. ಇವೆಲ್ಲ ನನ್ನ ಸಣ್ಣ ಐತಿಹ್ಯ. ಇವುಗಳನ್ನೆಲ್ಲಾ ಮೊನ್ನೆ ಮೊನ್ನೆ ಮೆಲುಕು ಹಾಕಿಕೊಳ್ಳುತ್ತಿರುವ ಸಂಧರ್ಭದಲ್ಲೇ ಹೊಸತೊಂದು ಪ್ರವಾಸಕ್ಕೆ  ಅವಕಾಶ ಬಂದಿದ್ದು ಮನಕ್ಕೆ ಒಂಥರಾ ಹಳೆ ನೆನಪಿನ ಮೆಲುಕಲ್ಲಿ ಹೊಸ ಅನುಭವ ಪಡೆಯುವ ಕಾತರಿಕೆ,  ಹೋಗೋಣ ಎನ್ನುವ ನಿರ್ಧಾರ ನೀಡಿತ್ತು.

 ಪ್ರಯಾಣ ನಿರ್ಧಾರವಾಗಿದ್ದು ದೂರದ ಮಂಡ್ಯಕ್ಕೆ. ಎರಡು ವರ್ಷಕ್ಕೊಮ್ಮೆ ಮಂಡ್ಯದ ಹಾಡ್ಲಿ ಗ್ರಾಮದಲ್ಲಿ ನಡೆಯುವ ದೇವಸ್ಥಾನವೊಂದರ ಹಬ್ಬಕ್ಕೆ ಎಂ.ಡಿ ಸಾಹೇಬರು ಬನ್ನಿ ಎನ್ನುವ ಕರೆ ಕಳುಹಿಸಿದ್ದು, ನನ್ನೊಳಗೊಂಥರ ಸಡಗರವನ್ನೇ ಸೃಷ್ಟಿಸಿತ್ತು. ಅದು ಅವರ ಹುಟ್ಟೂರು. ನಮಗಿಂತ ಒಂದಿನ ಮುಂಚೆಯೇ ಅವರು ಅವರೂರಿಗೆ ಹೋಗಿ ಅಲ್ಲಿನ ಸಂಭ್ರಮ ಸಡಗರ ನೋಡಿ, ಅದನ್ನು ನಾವೂ ಸವಿಯಲಿ ಎಂದು ಕರೆ ನೀಡಿದ್ದರು.

       ತಡಮಾಡದೇ ಮರುದಿನ ಬೆಳಿಗ್ಗೆಯೇ ಒಟ್ಟಿಗೆ 8/9 ಜನ ಮಾಮೂಲಿ ಓಮಿನಿಯಲ್ಲೇ ಪ್ರಯಾಣ ಪ್ರಾರಂಭಿಸಿಯೇ ಬಿಟ್ಟೆವು. ಒಂಥರ ಮಜವಾಗಿತ್ತು. ಹಾಡುತ್ತಾ, ಹರಟುತ್ತಾ, ಮಾತಲ್ಲಿ ಒಬ್ಬ-ಇನ್ನೊಬ್ಬನ ಕಾಲೆಳೆಯುತ್ತಾ ನಡು ನಡುವೇ ಗಾಡಿಗೆ ವಿಶ್ರಾಂತಿವೀಯುತ್ತಾ, ಬಿಸಿಲ ಬೇಗೆಗೆ ಮಜ್ಜಿಗೆ ಸವಿಯುತ್ತಾ ಮಂಡ್ಯ ರೀಚಾಗೆ ಬಿಟ್ಟೆವು.

ಒಂಥರಾ ಕಿರುವಣಿಯಂತೆ ಹಾದಿ ಸಾಗುತ್ತಿತ್ತು. ಓಣಿಯ ಎರಡು ಬದಿಗಳಲ್ಲಿ ಮನೆಗಳ ಕಿಕ್ಕಿರಿದ ಸಾಲುಗಳು. ಎಲ್ಲಿ ನೋಡಿದರೂ ಹಬ್ಬದ ಪ್ರಯುಕ್ತ ಬಣ್ಣ ಪಡೆದ ಮನೆಗಳು ರಂಜಿಸುತ್ತಾ ನಮ್ಮನ್ನು ಸ್ವಾಗತಿಸುತಿದ್ದವು. ಅಂತೂ ನಮ್ಮ ಸರ್.., ಮನೆ ಸಿಕ್ಕಿತು. 

    ತಲುಪುವಿಕೆ ಮಧ್ಯಾಹ್ನವಾದ್ದರಿಂದ ಬಿಸಿಲಿನ ಬೇಗೆ ಅಲ್ಲಿ ಬೆಂಗಳೂರಿಗಿಂತ ಸ್ವಲ್ಪ ಜಾಸ್ತಿಯೇ ಧಗೆಗುಟ್ಟುತ್ತಿದ್ದು, ನೀರನ್ನು ಕುಡಿದು ಇನ್ನೇನೂ ಊಟಕ್ಕೆ ಕೂರುವ ಮುನ್ನ ವರಾಂಡವೆಲ್ಲವನ್ನು ಒಂದಕ್ಕಿ ರೌಂಡ್‍ನಲ್ಲಿ ಪೂರೈಸಿ ಮಟನ್ ಚಿಕನ್ ಸೇರಿದಂತೆ ಭರ್ಜರಿ ಊಟದಲ್ಲಿ ಸಿಕ್ಕ ಎಲ್ಲವನ್ನು ಹೀರಿಕೊಂಡು, ಊಟವನ್ನು ಮುಗಿಸಿ ಕೈ ತೊಳೆಯುತ್ತಿದ್ದಂತೆ ಬಾಸ್ ಮಗ ಮೋನಿಷ್ ಮಾವಿನ ಕಾಯಿ ಕುಯ್ದುಕೊಂಡು ಬರುವ ಪ್ಲಾನ್‍ಗೆ ನನ್ನ ಕರೆದದ್ದು ಪ್ರಯಾಣದ ಸವಿ ಅನುಭವಿಸಲು ಹೊಸ ತಿರುವು ನೀಡಿತು.  

‘ಆಯ್ತು’ ಎನ್ನುವ ನಿರ್ಧಾರದೊಂದಿಗೆ, ಬಲಅಂಕಿ - ಎಡಅಂಕಿ ಎಂಬಂತೆ  ಸಹಪಾಠಿಗಳಾದ ಚಂದ್ರು, ಕುಮಾರ್, ಸೇರಿದಂತೆ ಐದಾರು ಜನರನ್ನು ಕರೆದುಕೊಂಡು ಮಾವಿನ ಮರಕ್ಕೆ ದಾರಿ ತೋರಿಸುವ ನಾವಿಕರೆಂಬಂತೆ ಅಲ್ಲಿಯೇ ಹುಟ್ಟಿ ಬೆಳೆದ, ಮನೋಜ್ ಹಾಗೂ ಮೂರ್ತಿ ಚಿಕ್ಕದಾದರೂ ‘ನಾನೆಲ್ಲ ಬಲ್ಲೆ ನನ್ನ ಕೀರ್ತಿ ದೊಡ್ಡದು’ ಎನ್ನುತ್ತಿದ್ದ ಭುವನ್ ಅಲಿಯಾಸ್ ‘ಗೂಳಿ’  ಎನ್ನುವ ಇಬ್ಬರು ಪೋರರನ್ನು ಕರೆದುಕೊಂಡು ಮುಂದೆ ನಡೆಯಿರಿ ಎನ್ನುತ್ತಾ, ಅವರಿಬ್ಬರÀ ಹಿಂದೆ ಹಿಂಬಾಲಕರಂತೆ ನಮ್ಮ ನಡಿಗೆ ಸಾಗಿತು.

‘ಗೂಳಿ’ ಎಂಬ ನಾಮಾಂಕಿತದೊಂದಿಗಿದ್ದ ಭುವನ್ ಗೂಳಿಯಂತೆ ಖಂಡಿತ ಇರಲಿಲ್ಲ. ಅಂಗನವಾಡಿ ಓದುವ ವಯಸ್ಸು ಅನಿಸುತ್ತದೆ. ಇನ್ನೂ ಎಳೆ ಪ್ರಾಯ. ಬಹುಶಃ ನಾಲ್ಕೈದು ವರ್ಷ ವಯಸ್ಸಿರಬಹುದೇನೋ!?, ಆ ಸಣ್ಣ ಪ್ರಾಯದಲ್ಲೇ ತನ್ನ ಮನೆಯ ಇಡೀ ಹೊಲ ಗದ್ದೆಯೂ ಅವನಿಗೆ ಪರಿಚಿತವಾಗಿತ್ತು. ‘ಬನ್ನಿ ನಮ್ಮ ಹೊಲದಲ್ಲಿ ತುಂಬಾ ಮಾವಿನ ಕಾಯಿಗಳಿವೆ ಕೀಳೋಣ’ ಎನ್ನುತ್ತಾ ಯಾವ ಅಂಜಿಕೆಯೂ ಇಲ್ಲದೇ ಮುಗ್ಧತೆಯಲ್ಲೇ ‘ಇಲ್ಲೇ ಇದೆ ಬನ್ನಿ ಅಣ್ಣ’...! ಎನ್ನುತ್ತಾ ‘ಇಲ್ಲೇ ಇಲ್ಲೇ’... ಎನ್ನುವ ಕೈ ಸನ್ನೆಯೊಂದಿಗೆ ಅರ್ಧ ಕಿ.ಮೀ. ನಡೆಸಿಯೇ ಬಿಟ್ಟ. ಒಂದು ಕಡೆ ಉರಿ ಬಿಸಿಲು, ಇನ್ನೊಂದು ಕಡೆ ಹೊಟ್ಟೆ ಪೂರ್ತಿ ಬಿರಿಯುವಂತಿದ್ದ ಊಟ... ಅವೆರಡು ಮನದಲ್ಲಿ ಸಾಕಪ್ಪ ಸಾಕು ವಾಪಾಸ್ಸು ಹೋಗೋಣ ಎನಿಸುವ ಸುಸ್ತು ಬಡಿಸುತ್ತಿದ್ದರೂ, ಹೊಸ ಉಮೇದಿನಲ್ಲಿ ನೋಡೋಣ ಇಲ್ಲಿನ ಹೊಲ ಗದ್ದೆ ಹೇಗಿರುತ್ತೆ ಎನ್ನುವ  ಕೌತುಕತೆಯಲ್ಲಿ ನಡಿಗೆ  ಮತ್ತೆ ಮುಂದುವರಿಸಿದ್ದೆವು.

ಗೂಳಿ ದಾರಿ ತೋರಿಸುವುದರೊಂದಿಗೆ ಹೊಸ ಹೊಸ ಸಂಧರ್ಭ, ಜಾಗಗಳ ಐತಿಹ್ಯ ಹೇಳುತ್ತಲೇ ಮುಂದೆ ಮುಂದೆ ಸಾಗುತ್ತಿದ್ದ. ಆದರೆ ಮಾವಿನ ಮರ ಮಾತ್ರಾ ನಮಗೆ ಕಾಣುತ್ತಿರಲಿಲ್ಲ..!, ದಾರಿಯೂ ಮುಗಿಯುತ್ತಿರಲಿಲ್ಲ...

  ಮೊದಲೊಂದು ಗದ್ದೆ, ಆಮೇಲೊಂದು ಕೆರೆ...ಹೀಗೆ ಒಂದರಂತೆ ಒಂದು ತೋಟಗಳ ಸರಮಾಲೆಯೇ ನಡಿಗೆ ಮಧ್ಯೆ ಸಿಕ್ಕಿತ್ತು. ಅಲ್ಲಿನ ಕಲ್ಲು ಬಳಕೆಯಲ್ಲಿ ಅರಮನೆ ಗೋಡೆಯಂತೆ ಸಿಂಗಾರಿಸಿಕೊಂಡಿದ್ದ ಕೆರೆಯ ಪಕ್ಕ ಚಲಿಸುವಾಗಂತೂ, ಗೂಳಿ, ‘ಈ ಕೆರೆಗೆ ನಮ್ಮ ತಾತ ಬಿದ್ದು ಸತ್ತಿದ್ದು!’ ಎಂದು ಹೆದರಿಸಿಯೇ ಬಿಟ್ಟಿದ್ದ. ಜೊತೆಗಿರುವರೆಲ್ಲರೂ ಮುಖ ಮುಖ ನೋಡುತ್ತ ಒಂದು ಕ್ಷಣ ಆ ಕೆರಯನ್ನು ಭಯದಿಂದ ವೀಕ್ಷಿಸುತ್ತಾ, ತಾತನಂತೆ ನಾವು ಕೆರೆಯಪಾಲಾಗಬಾರದು!.. ಎಂಬಂತೆ ಜಾಗರೂಕತೆಯಲ್ಲಿ ಕೆರೆದಾಟಿ ಮುಂದೆ ಹೆಜ್ಜೆ ಇಟ್ಟರು. ನನಗೆ ನನ್ನ ತಾತನ ನೆನಪು ಅರೆಕ್ಷಣ ಬಿಡದೇ ಕಾಡಲು ಶುರುವಿಟ್ಟಿತು.

        ‘ತಾತ’ ಎನ್ನುವ ಪದವೇ ಒಂದು ಜಾತ್ರೆ ನನಗೆ. ಅದೊಂದು ಕಥೆಯ ಕಂತೆ ಎಂದರೆ ತಪ್ಪಿಲ್ಲ. ನಾನು ನನ್ನ ತಾತನನ್ನು ಚಿಕ್ಕಂದಿನಲ್ಲೇ ಕಳೆದುಕೊಂಡಿದ್ದೆ!. ನನ್ನ ತಾತ ಸತ್ತಿದ್ದು ಹುಲಿಯೊಂದಿಗೆ ಹೊಡೆದಾಡಿ!.. ಅಂದಿಗೆಲ್ಲಾ ಇಡೀ ಊರಿಗೆ ದಣಿಯಾಗಿದ್ದ ನಮ್ಮ ತಾತ ಒಮ್ಮೆ ಬಾವಿಯೊಳಗೆ ಬಿದ್ದಿರುವ ಹುಲಿಯನ್ನು ಬದುಕಿಸುವ ನಿಟ್ಟಿನಲ್ಲಿ, ಹಗ್ಗ ಹಾಕಿ ಮೇಲಕ್ಕೆತ್ತುವ ಭರದಲ್ಲಿ, ಧೈರ್ಯದ ಸಾಹಸಕ್ಕೆ ಕೈ ಹಾಕೇ ಬಿಟ್ಟಿದ್ದರು... ರಕ್ಷಣಾ ಹಂತ ಮುಗಿದು ಅದು ಇನ್ನೇನೂ ಮೇಲಕ್ಕೆ ಬಂತು ಎನ್ನುವಾಗ ನೋವು ಹಾಗೂ ಕುಪಿತದಿಂದ ನೊಂದಿದ್ದ ಹುಲಿ ಅವರ ಮೇಲೆ ಎಗರಿಯೇ ಬಿಟ್ಟಿತ್ತು. ಕ್ಷಣ ಕಾಲ ಕಾದಾಡಿದ ನಂತರ ಬಂದ ದಾರಿಗೆ ಸುಂಕವಿಲ್ಲಬೆಂಬಂತೆ  ಕಾಡಿನ ಕಡೆ ಓಡಿತ್ತು. ಹೋಗುವ ಮುನ್ನ ತಾತನ ಇಡೀ ಮೈಯನ್ನು ಪರಚಿ ಬದುಕದೇ ಇರುವ ಸ್ಥಿತಿಗೆ ತಂದಿತ್ತು. ಅದೇ ನೋವು, ಅದೇ ನಂಜಿನ ಸೆಳೆತದಿಂದ ನೊಂದು-ಬೆಂದ ತಾತ ಒಂದೆರಡು ವಾರದಲ್ಲೇ ನಮ್ಮೆನ್ನೆಲ್ಲಾ ಅಗಲಿ ದೂರ ಸಾಗಿದ್ದರು. ಇಲ್ಲಿ ಗೂಳಿ, ಅವನ ತಾತನ ಬಗ್ಗೆ ಹೇಳಿದಾಗ ನನ್ನ ತಾತನು ಒಂದರೆಘಳಿಗೆ ಹತ್ತಿರ ಬಂದು ಕಾಡಿದಂತಾಯ್ತು. ಚಿಂಕಂದಿನಲ್ಲಿ ನನಗೆ ಹೇಳುತ್ತಿದ್ದ ಹಸಿಬಿಸಿ ಕತೆಗಳು ನೆನಪಿಗೆ ಬಂದು ಕಣ್ಣಲ್ಲಿ ಕಳೆದುಕೊಂಡ ತಾತನ ಬಗ್ಗೆ ಭಾಷ್ಫ ಉಕ್ಕಿ ಬಂದವು.

     
 ನೋವಿನಲ್ಲಿ, ಸಂಕಷ್ಟದಲ್ಲಿ, ‘ತುಂಬಾ ಸುಸ್ತಾಯಿತು, ನಿನ್ನದು ಅತಿಯಾಯಿತು ಕಂದಾ!, ಇನ್ನಾಗದು ನಡೆಯಲು!.. ಇನ್ನೆಷ್ಟು ದೂರ ಚಲಿಸಬೇಕು ನಾವು!., ಇಲ್ಲೇ ಇಲ್ಲೇ ಎಂದರೆ ನಿನ್ನ ಪ್ರಕಾರ ಎಷ್ಟು ಕಿಲೋ ಮೀಟರ್!?’ ಎನ್ನುತ್ತಾ ರೇಗಾಡಿದೆ. ನನ್ನ ಯಾವ ರೇಗಾಟಕ್ಕೂ ಆ ಬಾಲಕ ತಲೆ ಕೆಡಿಸಿಕೊಳ್ಳದೆ ‘ಇಲ್ಲೇ ಅಣ್ಣ’ ಎನ್ನುತ್ತಾ ಕಾಣದ ಮರಕ್ಕೆ, ಸಾಗುತ್ತಿದ್ದ ನೇರದ ಅಗೋಚರ ತುದಿಗೆ ಕೈ ತೋರಿಸುತ್ತಿದ್ದ...

‘ಆಯ್ತು ನಡಿ... ಬಂದ ತಪ್ಪಿಗೆ ಅನ್ಯ ದಾರಿಯಿಲ್ಲ!’ ಎಂಬಂತೆ ನಡೆದು ನಡೆದು ಬರೋಬ್ಬರಿ 2 ಕಿ.ಮೀ.ಗೂ ಅಧಿಕ ದೂರ ಚಲಿಸಿದಾಗ ಮಾವಿನ ಮರವೊಂದು ಕಾಯಿ ಬಿಟ್ಟಿದ್ದು ಕಣ್ಣಿಗೆ ಗೋಚರಿಸಿತು. ‘ಇದೇ ನಮ್ಮ ಹೊಲದ ಮರ. ಬೇಕಾದಷ್ಟು ಕಿತ್ತುಕೊಳ್ಳಿ’ ಎನ್ನುವಂತೆ ಗೂಳಿ ತಮ್ಮನೆಯ ಮರವನ್ನು ನಮಗರ್ಪಿಸಿ ಸೈಡಲ್ಲಿ ಮುಗ್ಧ ಮಂಪರಲ್ಲಿ ನಿಂತ. ನಮ್ಮ ಜೊತೆ ಬಂದಿದ್ದ ಮನೋಜನೆಂಬ ಹುಡುಗ ಅದೆಷ್ಟು ಕಾಯಿ ತಾಳಿಸಿ ನೆಲಕ್ಕುರುಳಿಸಿದನೋ ನಾನಂತು ಅರಿಯೇ!!. ತಕ್ಷಣ ಬೈದೆ!. ಯಾಕಷ್ಟು ಹಾಳು ಮಾಡುತ್ತೀಯಾ?, ಒಬ್ಬೊಬ್ಬರು ತಿನ್ನೊವಷ್ಟು ಮಾತ್ರಾ ಕಿತ್ತುಕೊಳ್ಳಿ ಹಾಲುಗೆಡವದಿರಿ!, ಎನ್ನುವಂತೆ ಎಲ್ಲರಲ್ಲೂ ಗಿಡದ ವ್ಯಥೆ, ಮಾವಿನ ಕಾಯಿಯ ಉಪಯೋಗ ಇತ್ಯಾದಿಗಳನ್ನೆಲ್ಲಾ ತಿಳಿಸುತ್ತಾ ‘ಹೋಗೋಣ ಬನ್ನಿ’ ಎಂದು ಅಲ್ಲಿಂದ ಎಲ್ಲರೂ ನಡೆಯಲು ಅನುವಾಗಿಸಿದೆ.

ಮರಳಿ ದಾರಿಯಲಿ ಬರುವಾಗ ಅನೇಕ ಯೋಚನಾ ಲಹರಿಗಳು ಮನಸ್ಫಟಲದಲ್ಲಿ ತೆರೆಯಂತೆ ಅಪ್ಪಳಿಸುತ್ತಾ ಗೂಳಿಯ ಮುಗ್ಧತೆ!, ಏನೂ ಅರಿಯದ ಅವನ ಮನದ ಸವಿಭಾವ!, ಎಲ್ಲಾ ಅರಿತ ನಮ್ಮಂತವರ ನಾನು ನನ್ನದು ಎನ್ನುವ ಅಮೌಡ್ಯ ವಿಚಾರ!!, ಇತ್ಯಾದಿಗಳ ಬಗ್ಗೆ ಯೋಚಿಸಿ ಅವನು ಮೂರ್ತಿ ಚಿಕ್ಕದಾದರೂ ಕೀರ್ತಿಯಲ್ಲಿ ನಮ್ಮೆಲ್ಲರಿಗಿಂತ ನಿಜವಾಗಲೂ ದೊಡ್ಡವ ಎಂದುಕೊಂಡು, ಶಭಾಷ್ ಪುಟ್ಟ!!! ಎಂದು ಬೆನ್ನು ತಟ್ಟಿ ಅನೇಕಾನೇಕ ವಿಚಾರಗಳ ಬಗ್ಗೆ ಹೇಳುತ್ತಾ ಕೇಳುತ್ತಾ ದಾರಿ ಸವೆಸಿದೆ.

‘ಸಂತಸದ ಸೊಗಸು ಸದಾ ಮುಗ್ಧ ಮನಸು’ ಎಂಬಂತೆ ಪುಟ್ಟ ಮಕ್ಕಳು ದೇವರಿಗೆ ಸಮಾನ ಅವರ ಮುಗ್ಧತೆಯೇ ಅರಿಯದ ಸೊಗಸಾಗಿರುತ್ತದೆ. ಮಕ್ಕಳಲ್ಲಿ ಬೇಧ-ಬಾವ ಇರುವುದಿಲ್ಲ, ಹುಳುಕು ಕೊಳಕು ಕಾಣುವುದಿಲ್ಲ. ಎಲ್ಲರನ್ನು ಪ್ರೀತಿಸುತ್ತಾ, ಎಲ್ಲವನ್ನು ನಂಬುತ್ತಾ ಕಳೆಯುವ ಗುಣ ಅವರಲ್ಲಿರುತ್ತವೆ. ಕಣ್ಮುಂದೆ ಹಲವಾರು ಅನೇಕಾನೇಕ ವಿಚಾರಗಳು  ದೈನಂದಿನಂತೆ ಗೋಚರಿಸುತ್ತಲೇ ಇದ್ದರೂ, ಆಪ್ತ ಲಹರಿಯ ರೀತಿಯಲ್ಲಿ ಅಂತಃಕರಣಕ್ಕೆ ತೆಗೆದುಕೊಳ್ಕದೆ ಸ್ವಚ್ಚ ಮನದಲ್ಲೇ ಎಲ್ಲವನ್ನು ನಿರಾಕರಿಸುತ್ತಾ,  ಶೂನ್ಯ ಭಾವದಲ್ಲಿ ಸಾಗುತ್ತಾರಲ್ಲ ಅದು ಇಂದು ಎಲ್ಲಾ ಮಾನವನಿಗೂ ಇರಬೇಕಾದ ಬರಬೇಕಾದ ಅಂಶ ಎಂದರೆ ತಪ್ಪಿಲ್ಲ... ಮುಗ್ಧತೆ ದೊಡ್ಡವರಲ್ಲಿದ್ದರೆ ಮಕ್ಕಳನ್ನು ಮಕ್ಕಳಂತೆ ನೋಡಲು ಸಾಧ್ಯ. ಇಂದು ನಾವು ಅನೇಕಾನೇಕ ವಿಚಾರಕ್ಕೆ ದೂರವಾಗುತ್ತೇವೆ, ಸಂಬಂಧ ಕಡಿದುಕೊಳ್ಳುತ್ತೇವೆ, ಹೊಡೆದಾಡುತ್ತೇವೆ, ಬಡಿದಾಡುತ್ತೇವೆ ಆದರೆ ಅಂತಿಮವಾಗಿ ಅರಿಯುವುದಿಷ್ಟೆ!, ‘ಎಲ್ಲವೂ ನಾನು, ನನ್ನದು ಎನ್ನುವ ದುರ್ಬುದ್ಧಿ’ಯಾಗಿರುತ್ತದೆಯೇ ವಿನಃ ಉನ್ನತಿಯ ಹಾದಿಗೆ ಪುಷ್ಠಿದಾಯಕವಾಗಿರುವುದಿಲ್ಲ.

      ಪ್ರವಾಸ, ಊಟ ಹಾಗೂ ಹಬ್ಬದ ಸುತ್ತ ಇದ್ದರೂ, ಅರಿತಿರುವ ವಿಚಾರ, ವಿನಿಮಯ ಬಾಳಿಗೆ ಪ್ರಸಾದಾಯಕವೇ ಆಗಿದೆ ಅನಿಸಿತು. ಟೈಮಾಯಿತು ಹೊರಡೋಣ ಎನ್ನುವ ರಾಗ ಗುಂಪಿಂದ ತೇಲಿ ಬಂತು. ಎಲ್ಲರೂ ಬೆಂಗಳೂರಿಗೆ ಪಯಣಿಸಲು ಕಾರ್ ಹತ್ತಿ ಕುಳಿತರು. ಮನೆಯವರು ಇನ್ನೊಮ್ಮೆ ಬನ್ನಿ, ಆತಿಥ್ಯದಲ್ಲಿ ವ್ಯತ್ಯಾಸವಾದರೆ ಕ್ಷಮೆ ಇರಲಿ ಎಂಬಂತೆ ಧನ್ಯತೆಯಲ್ಲ್ಲಿ ಕೈ ಬಿಸುತ್ತಿದ್ದರು. ಅನ್ನ ಋಣದ ಭಾವದೊಂದಿಗೆ ನನ್ನ ಮನದ ಕಣ್ಣುಗಳು ಹಳ್ಳಿ ಸೊಗಡಿನ ಜೀವನಕ್ಕೆ ಮತ್ತೆ ಕದವ ತೆರೆದು ಕೃತಘ್ನ ನಾ ನಿಮಗೆ ಎನ್ನುತ್ತಿತ್ತು.., ಗೂಳಿ ನಾಮದ ಹುಡುಗನಿಗೆ ಮನದಲ್ಲೇ ವಂದನೆ ಅರ್ಪಿಸಿತ್ತು...

ಸಿರಿ ಬುಲೆಟ್-‘ಧರ್ಮೋ ರಕ್ಷತಿ ರಕ್ಷಿತಃ’


ಧರ್ಮಗಳ ಧ್ವಂಧ್ವ...


 ಒಂದಿಷ್ಟು ಧ್ವಂಧ್ವ ನಿಲುವುಗಳಿವೆ...
     ಮತ ಧರ್ಮಗಳ ನೆಲೆಯಲ್ಲಿ ನಿಂತರೆ ಪ್ರಮುಖವೆನಿಸಿರುವ ಒಂದೊಂದು ಮತಗಳು ಒಂದೊಂದು ಇತಿಹಾಸ ನೀಡುತ್ತವೆ. ಪ್ರಸಿದ್ಧ ಇತಿಹಾಸಕಾರ  ಇ.ಎಚ್ ಕಾರ್, ‘ಇತಿಹಾಸವೆನ್ನುವುದು ಕೆಲವೊಮ್ಮೆ ಅಂತಿಮ ಸತ್ಯದ ಅನಸ್ತಿತ್ವ ಎನ್ನುವ ನೆಲೆಯಲ್ಲಿ ಐಕ್ಯವಾಗುವುದರಿಂದ ವಾದ ವಿವಾದಗಳು ಸರ್ವೇಸಾಮಾನ್ಯವಾಗಿ ಹಾಸುಹೊಕ್ಕಾಗುತ್ತವೆ’ ಎನ್ನುತ್ತಾರೆ. ಬಹುಶಃ ಧರ್ಮಗಳ ನೆಲೆಯೂ ಅಂತಿಮದಲ್ಲಿ ಧ್ವಂಧ್ವವಾಗಿ ಅನಸ್ತಿತ್ವ ಎನಿಸುವುದರಲ್ಲಿ ಯಾವ ಸಂಶಯವಿಲ್ಲ...
ಹುಟ್ಟಿರುವ ಪ್ರತಿ ಮನುಷ್ಯನೂ ತನ್ನದೇ ಜಾತಿ, ಮತ, ಧರ್ಮ, ಸ್ವಭಾವ ಹೊಂದುತ್ತಾನಾದರೂ, ವಿಶ್ವಕ್ಕೆ ಯಾವ ಮತ ಸೂಕ್ತ!?, ಅಂತಿಮವಾಗಿ ವಿಶ್ವ ಯಾವ ಮತಕ್ಕೆ ಸೇರಿದ್ದು!?, ಇತ್ಯಾದಿಗಳ ಬಗ್ಗೆ ಯಾರಲ್ಲಿಯೂ ಉತ್ತರವಿಲ್ಲ. ಒಂದೊಂದು ದೇಶದಲ್ಲಿ ಒಂದೊಂದು ಮತ ಪ್ರಬಲವಾಗಿರುತ್ತೆ. ಸರಿದೂಗಿಸಿ ನೋಡಿದರೆ ಯಾರೂ ಮೇಲಲ್ಲ-ಕೀಳಲ್ಲ. ಎಲ್ಲರೂ ಒಂದೇ. ಆದರೆ ವೈಯಕ್ತಿಕವಾದ ಧರ್ಮ ಜಾತಿ, ಮತ, ಸ್ವಾಭಾವದಂತೆ ಧ್ವಂಧ್ವಗಳ ನೆಲೆಯಲ್ಲಿ ಧರ್ಮಗಳ ಮೇಲುಕೀಳನ್ನು ತೂಗುಹಾಕಬಹುದಾ!? ಎನ್ನುವುದೇ ಎಲ್ಲರೂ ಇಂದು ಅರಿಯಬೇಕಾಗಿರುವ ಅಧ್ಯಯುತ ಪ್ರಶ್ನೆ...
ಒಂದಿಷ್ಟು ಧರ್ಮೀಯರ ಪಂಗಡಗಳಿವೆ, ಒಂದಿಷ್ಟು ವಾದಕ್ಕಿಳಿಯುವ ತಂಡಗಳಿವೆ,  ಸೋಷಿಯಲ್ ಮೀಡಿಯಾಗಳಲ್ಲಂತೂ ಜಗಳವಾಡುತ್ತಾ, ನಾಗರೀಕತೆ ಮರೆತು ಕಚ್ಚಾಡುವ ಗುಂಪುಗಳಿವೆ. ಅವರವರಿಗೆ ಅವರವರ ಮಾತುಗಳು, ನಿಲುವುಗಳೇ ದೊಡ್ಡದು. ವಿಪರ್ಯಾಸವೆಂದರೆ, ಎರಡು ಪಂಥೀಯರು ಕಚ್ಚಾಡುತ್ತಾರೆ ಆದರೆ ಸೋಲುವುದಿಲ್ಲ...
ನನಗೂ ಗೊತ್ತು!!, ಆಧುನಿಕ ಜಗತ್ತಿನಲ್ಲಿ ಬದಲಾಗುತ್ತಿರುವ ಸಮಾಜದಲ್ಲಿ ಜನರ ಆದ್ಯತೆಗಳು ಬದಲಾವಣೆ ಆಗುತ್ತಿರುವಂತೆ ಸಾಮಾಜಿಕ ವ್ಯವಸ್ಥೆಗಳಲ್ಲಿ, ಧಾರ್ಮಿಕ ವ್ಯವಸ್ಥೆÉಗಳಲ್ಲಿ, ಹಾಗೂ ಪ್ರತಿಯೊಬ್ಬರ ಅಭಿವ್ಯಕ್ತ್ತ ಸ್ವಾತಂತ್ರ್ಯಗಳಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಎಲ್ಲವೂ ಮೇಲ್ನೋಟಕ್ಕೆ ಬದಲಾದಂತೆ ಕಂಡರೂ, ಒಳಗೆ ಬೆಂಕಿ ಉರಿಯುತ್ತಲೇ ಇರುತ್ತದೆ. ಅವಕಾಶವಾದಾಗಲೆಲ್ಲ ತನ್ನ ನಾಲಗೆಯನ್ನು ಚಾಚುತ್ತಾ ಸಮಾಜದಲ್ಲಿ ಅಸಹನೆಯನ್ನು ಸೃಷ್ಟಿಸುತ್ತಲೇ ಇರುತ್ತದೆ. ಧರ್ಮದ ಆಚರಣೆಗಳು ಸಿದ್ಧಾಂತಗಳು ಯಾವ ಕಾಲಕ್ಕೂ ಬದಲಾಗಲಾರದೇನೋ, ಅನ್ನುವಷ್ಟು ಜಿಡ್ಡುಗಟ್ಟಿದೆ. ಮೂಲಭೂತವಾದಿ ಮನಸ್ಸುಗಳಿಗೆ ಬದಲಾವಣೆ ಬೇಕಿಲ್ಲ. ಅದಕ್ಕೆಂದೇ ಸ್ಥಾಪಿತ ಹಿತಾಸಕ್ತಿಗಳ ಮೂಲಕ ಸದಾ ಕಾಲಕ್ಕೂ ಅದನ್ನು ಜೀವಂತವಾಗಿಡಲು ಯತ್ನಿಸುತ್ತಲೇ ಇದೆಯಾದ್ದರಿಂದ ಬದಲಾವಣೆಯ ನಿಯಮ ಅದಕ್ಕೆ ಅನ್ವಯಿಸದೆಂದು ವಿಷಾದದಿಂದಲೇ ಹೇಳಬೇಕಾಗಿದೆ...

     ಪ್ರಮುಖ ಮೂರು ಧರ್ಮಗಳನ್ನೇ ಕೈಗೆತ್ತಿಕೊಂಡರೆ :

ಮೊದಲನೆಯದು ಹಿಂದೂ ಧರ್ಮ:
            ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮವಾಗಿದ್ದು, ಅದು ಅನುಯಾಯಿಗಳಿಂದ ಹಲವು ವೇಳೆ ಶಾಶ್ವತ ಧರ್ಮವೆಂಬ ಅರ್ಥವನ್ನು ಕೊಡುವ ಸಂಸ್ಕøತ ಪದಗುಚ್ಚವಾದ ‘ಸನಾತನ’ ಧರ್ಮವೆಂದು ನಿರ್ಧೇಶಿಸಲ್ಪಡುತ್ತದೆ. ಸಂಕೀರ್ಣದೃಷ್ಟಿಗಳ ವೈವಿಧ್ಯಕ್ಕೆ ಸ್ಥಳ ಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ ಪ್ರಕಾರಗಳು, ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ, ವೈಷ್ಣವ ಪಂಥದಲ್ಲಿರುವÀ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ. ‘ಭಗವದ್ಗೀತೆ’ಯನ್ನು ಆರಾಧಿಸುವ ಹಿಂದೂಗಳು ಯೋಗಿಕ ಸಂಪ್ರದಾಯ ಮತ್ತು ಕರ್ಮದ ಕಲ್ಪನೆಯನ್ನು, ಆಧರಿಸಿ ದೈನಿಕ ಸದಾಚಾರದ ವಿಶಾಲವಾದ ವೈವಿಧ್ಯದಿಂದ ಹಿಂದೂ ಧರ್ಮವು ಏಕದೇವತಾವಾದ, ಬಹುದೇವತಾವಾದ, ಸರ್ವದೇವತಾವಾದ, ಸರ್ವಬ್ರಹ್ಮವಾದ, ಅಧ್ವೈತವಾದ ಮತ್ತು ನಿರೀಶ್ವರವಾದಗಳಿಗೆ ವ್ಯಾಪಿಸುವ ನಂಬಿಕೆಗಳುಳ್ಳ ಕಲ್ಪನೆ ಈ ಧರ್ಮದಲ್ಲಿದ್ದು, ಉತ್ಕನನ ಅಧ್ಯಯನಗಳ ಪುರಾವೆಯಂತೆ ಕಿ.ಪೂ 5000 ವರ್ಷಗಳಿಗಿಂತ ಹಿಂದಿನದೆಂದು ಹೇಳಲಾಗುತ್ತದೆ.
ಎರಡನೆಯದಾಗಿ ಕ್ರೈಸ್ತ ಧರ್ಮ:
               ಕ್ರೈಸ್ತ ಧರ್ಮ ಏಸುಕ್ರಿಸ್ತನ ಜೀವನ ಮತ್ತು ಉಪದೇಶಗಳ ಮೇಲೆ ಆಧಾರಿತವಾದ, ಏಕದೇವತಾವಾದವನ್ನು ಅನುಸರಿಸುವ ಧರ್ಮಗಳಲ್ಲಿ ಒಂದು. 2001ರ ಅಂದಾಜಿನ ಪ್ರಕಾರ ಪ್ರಪಂಚದಲ್ಲಿ 2.1 ಬಿಲಿಯನ್ ಅನುಯಾಯಿಗಳನ್ನು ಹೊಂದಿರುವ ಈ ಧರ್ಮ ಜಗತ್ತಿನ ಅತೀ ದೊಡ್ಡದು ಎಂದು ಕ್ರೈಸ್ತರು ವಾದಿಸುತ್ತಾರೆ. ಐತಿಹ್ಯ ನೋಡಿದರೆ ಈ ಧರ್ಮಕ್ಕೆ 2000 ವರ್ಷಗಳ ಇತಿಹಾಸವಿದೆ. ‘ಜಗತ್ತಿಗೆ ಒಂದೇ ಧರ್ಮ, ಒಂದೇ ದೇವರು, ಅವರೇ ನಮ್ಮ ಏಸು’ ಎನ್ನುವ ಕ್ರೈಸ್ತ ಧರ್ಮೀಯರು ‘ಪವಿತ್ರ ಬೈಬಲ್’ನ ಕಟ್ಟು ಪಾಡಿನಲ್ಲಿ ಬದುಕುತ್ತಾ, ತಮ್ಮ ಪಂಗಡವನ್ನು ಬೆಳೆಸುತ್ತಾ ಮತ ಮಾಂತ್ರಿಕರಾಗಿದ್ದಾರೆ.

ಮೂರನೇಯದು ಇಸ್ಲಾಂ ಧರ್ಮ :
           ಅಲ್ಲಾನ ಅನುಸರಣೆ ಮಾಡುವುದು, ಆತನಿಗೆ ವಿಧೇಯತೆ ತೋರುವುದು ಮತ್ತು ಸರ್ವಸ್ವವನ್ನು ಆತನಿಗಾಗಿ ಸಮರ್ಪಿಸುವುದು  ಇಸ್ಲಾಂಮಿಕ್ ಗುಣ ಧರ್ಮಗಳಲ್ಲೊಂದು. ‘ಈ ಭೂಮಿಯ ಸೃಷ್ಟಿಕರ್ತ ಅಲ್ಲಾ, ನಮ್ಮದು ಏಕದೇವವಿಶ್ವಾಸ, ಅದುವೆ ನಮ್ಮ ಮೂಲಮಂತ್ರ, ವಿಶ್ವದ ಅಧಿಪ ಅವನೇ’ ಎನ್ನುವ ಇವರು ‘ಕುರಾನ್’  ಗ್ರಂಥದ ಮಾರ್ಗದರ್ಶನದಲ್ಲಿ ಧರ್ಮ ಪರಿಪಾಲನೆಯಲ್ಲಿರುತ್ತಾರೆ.

    ಮೇಲಿನ ಮೂರು ಧರ್ಮಗಳಲ್ಲಿ ಅನೇಕಾನೇಕ ಉಪಧರ್ಮಗಳಿದ್ದರೂ, ಉಪಜಾತಿಗಳ ಮೂಲ ಮೇಲಿನ ಮೂರರಲ್ಲಿ ಒಂದಾಗಿರುತ್ತದೆ. ಎಲ್ಲರಲ್ಲಿಯೂ ಅವರದೇ ಕಟ್ಟುಪಾಡುಗಳಿರುತ್ತವೆ, ಧ್ಯೇಯಗಳಿರುತ್ತವೆ, ಪೂರ್ವಜರು ಹಾಕಿಕೊಟ್ಟ ಮಾರ್ಗಗಳಿರುತ್ತವೆ. ಮೂರು ಧರ್ಮಿಯರಲ್ಲೂ ಬೇರೆ ಬೇರೆ ದೇವರುಗಳಿವೆ, ಶಾಂತಿಯಿದೆ, ಹಿಂಸೆಯಿದೆ, ಕ್ರೌರ್ಯವಿದೆ, ಭೀಭತ್ಸವಿದೆ. ಒಂದು ಧರ್ಮೀಯರಿಗೆ ಇನ್ನೊಂದು ಧರ್ಮ ಆಗಲ್ಲ. ಅವರು ಮಾಡಿರುವುದು ಇವರಿಗೆ ಸರಿ ಎನಿಸಲ್ಲ. ಮೊದಲೇ ಹೇಳಿದ ಪದದಂತೆ ಅಂತಿಮ ಸತ್ಯದ ಅನಸ್ತಿತ್ವದ ವಾದದಲ್ಲಿ ಧರ್ಮಗಳು ಧ್ವಂಧ್ವಕ್ಕೆ ಸಿಲುಕಿ ಸಂಕಷ್ಟಗೊಳಿಸುವುದು ಹೀಗೆಯೇ ಅಲ್ವಾ...

         
 ನಮ್ಮದೇ ದೇಶದ ವಿಚಾರಕ್ಕೆ ಬಂದರೆ 5000 ವರ್ಷಗಳಿಗಿಂತಲೂ ಹಳೆಯದಾದ ಹರಪ್ಪ ಮೊಹಂಜೋದಾರೋ ಸಂಸ್ಕøತಿ ಚಿಮ್ಮಿದಾಗ ಹಿಂದುಗಳಿಗೆ ಸುವರ್ಣ ಸಂಭ್ರಮದ ಗರಿ ಮೂಡುತ್ತದೆ!.. ತಮ್ಮ ಅನುಯಾಯಿಗಳ ಬಳಗ ದೊಡ್ಡದಾಗಿ ಬೆಳೆಯುತ್ತಿದೆ, ಕೋಟಿಗೆ ಮೀರಿದೆ ಅಂದೆನಿಸುತ್ತಿರುವಾಗ ಕ್ರೈಸ್ತರು ಅಂಕೆ ಮೀರಿದ್ದಕ್ಕೆ ಖುಷಿಯಾಗುತ್ತಾರೆ!.. ತಮ್ಮ ಪ್ರಾಬಲ್ಯದಲ್ಲಿ ಇನ್ನೊಬ್ಬರನ್ನು ಹತೋಟಿಗೆ ತೆಗೆದುಕೊಂಡು ಊರಿಗೆ ಊರನ್ನೆ ಬೆಳೆಸಿಕೊಳ್ಳುತ್ತಿರುವಾಗ ಮುಸ್ಲಿಂಮರು ಮಜವಾಡುತ್ತಾರೆ!..
ಐತಿಹಾಸಕವಾಗಿ ನೋಡೋದಾದರೆ ಭಾರತದ ಬಗ್ಗೆ ಮಾತನಾಡುವಾಗ ಹಿಂದುತ್ವ ಬಿಟ್ಟು ಮಾತನಾಡಲಾಗುವುದಿಲ್ಲ. ಯಾಕೆಂದರೆ ಈ ಧರ್ಮದ ಉಗಮವಾಗಿದ್ದೇ ಭರತಖಂಡದಲ್ಲಿ. ಇಲ್ಲಿ ಹಿಂದೂ ಧರ್ಮವೇ ಉಪಖಂಡದ ಪ್ರಧಾನ ಎಂದರೆ ತಪ್ಪಿಲ್ಲ. ಬೌದ್ಧ ಜೈನ ಪಂಥಗಳ ದೇವತೆಗಳು, ಪುರಾಣಗಳು, ದೇವಾಲಯಗಳಲ್ಲಿ ಹಿಂದೂ ಧರ್ಮದ ಸಾಮ್ಯತೆ ಪ್ರಭಾವಗಳು ಧಾರಾಳವಾಗಿ ಕಾಣುತ್ತವೆ. ಧರ್ಮದ ಉದಾತ್ತತೆಯಲ್ಲಿ ಹಿಂದುತ್ವ ದೊಡ್ಡದಾದರೂ, ಅನೇಕ ಮಹಾನುಭಾವರೇ ಹಿಂದೂ ಜಾತಿ, ಹಿಂದೂ ಧರ್ಮದ ಶ್ರೇಷ್ಠ ಮೌಲ್ಯಗಳನ್ನು ಮರೆಯುತ್ತಾ ಅದನ್ನು ಅಪಮೌಲ್ಯಗೊಳಿಸುತ್ತಿದ್ದಾರೆ. ಧರ್ಮಕ್ಕೆ ಧಕ್ಕೆಯುಂಟು ಮಾಡುತ್ತಿದ್ದಾರೆ. ನಾವೇ ಸೃಷ್ಠಿಸಿಕೊಂಡಿದ್ದನ್ನು, ಕಚ್ಚಾಡಿಕೊಂಡು ಕೊಲ್ಲುತ್ತಿದ್ದೇವೆ!!. ಜಗತ್ತನ್ನು ಮಾರ್ಮಿಕವಾಗಿ ನೋಡಿದರೆ ಎಲ್ಲವೂ ಒಂದೇ ಎನಿಸುತ್ತೆ.., ಕಣ್ಮುಚ್ಚಿದರೆ ಶೂನ್ಯ ಅಡ್ಡಾಡುತ್ತೆ!!. ಇದು ಏಟು ನೀಡುತ್ತಿರುವುದು ಅವರವರ ಪರಂಪರೆಗೆ, ಸಂಸ್ಕøತಿಗೆ!!.

          ಭಾರತೀಯ ಪರಂಪರೆಯನ್ನು ಯಾವುದೋ ಒಬ್ಬ ಚಕ್ರವರ್ತಿ, ಒಬ್ಬ ಮಹರ್ಷಿ, ಒಬ್ಬ ಖಾನ್, ಒಬ್ಬ ಪ್ರವಾದಿ ಕಟ್ಟಿಕೊಟ್ಟಿದ್ದಲ್ಲ!. ಅದು ಕೆಲವೇ ಮೇಲ್ವರ್ಗದ ಸ್ವತ್ತೂ ಅಲ್ಲ!. ವೇದಗಳಲ್ಲಿ ಉಲ್ಲೇಖಿತವಾಗಿರುವಂತೆ ಅದು ಪ್ರತಿಯೊಂದು ವರ್ಗದ, ವರ್ಣದ ಮಾನವನ ಕೊಡುಗೆ...

ಗೋಪಾಲಕೃಷ್ಣ ಅಡಿಗರು ಹೇಳುವಂತೆ..,
“ಇದು ಬಾಳು ನೋಡು, ಇದ ತಿಳಿದೆನೆಂದರೂ,
ತಿಳಿದ ಧೀರನಿಲ್ಲ
ಹಲವು ತನದ ಮೈಮರೆಸುವಾಟವಿದು
ನಿಜವೂ ತೋರದಲ್ಲ...”


ನಿಜವಾಗಿಯೂ ಹೌದು ಎನಿಸುತ್ತಿದೆ. ಈ ಧ್ವಂಧ್ವಗಳು ಹೀಗೆ ಮುಂದುವರಿಯುತ್ತಿದ್ದರೆ ನಾವು ನಾವೇ ಕಚ್ಚಾಡುತ್ತಾ ಸಾಯಬೇಕಾಗುತ್ತದೆ!. ಇದು ಬಾಳು, ಇಲ್ಲಿ ಎಲ್ಲ ತಿಳಿದ ಧೀರನಿಲ್ಲ, ಎಲ್ಲ ಕಂಡರೂ ಯಾವುದು ಅಂತಿಮ ನಿಜವಲ್ಲ, ಮೈಮರೆಸುವಾಟವಷ್ಟೇ..!

      ಸನಾತನ ಪರಂಪರೆಯನ್ನು ಹೊಂದಿರುವ ಭಾರತ ದೇಶದಲ್ಲಿ ಅನೇಕ ಧಾರ್ಮಿಕ ಪಂಥಗಳಿವೆ. ಅದಕ್ಕನುಸಾರವಾಗಿ ಜನರು ಅವರಿಗಿಷ್ಟವಾದ ಧರ್ಮವನ್ನು ಅವರದ್ದೇ ಚೌಕಟ್ಟಿನಲ್ಲಿ ಅನುಸರಿಸಿಕೊಂಡು ಬರುತ್ತಿದ್ದಾರೆ. ಅದಕ್ಕೆ ಯಾವ ಅಭ್ಯಂತರವೂ ಇಲ್ಲ. ದೇಶದ ಸಂವಿಧಾನದಲ್ಲೂ  ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಸಮಸ್ಯೆ ಇರುವುದು ಅದರಲ್ಲಲ್ಲ. ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾದ ಕ್ರಿಯೆಗಳು ಸಾರ್ವತ್ರಿಕವಾಗಿ ವ್ಯಕ್ತವಾಗುವ ಹೇರಿಕೆಯಂತಹ ಕೃತ್ಯಗಳು ನಡೆದಾಗ, ಪ್ರಶ್ನಿಸುವ ಅನಿವಾರ್ಯ ಕೈಗೊಂಡಾಗ, ಮತ್ತೆ ಜಾತಿ, ಧರ್ಮ, ಪಂಥಗಳ ಮಾತು ಕೇಳಿ,ತಿಳುವಳಿಕೆ ಹೊಂದಿದವರನ್ನೂ, ಅವಿವೇಕರನ್ನಾಗಿಸಿ ಮತ್ತೆ ಧ್ವಂಧ್ವಕ್ಕೆ ಸಿಲುಕಿಸುತ್ತವೆ!.. ಒಂದು ಮಾತು ನಿಜ... ಮುಂದಿನ ದಿನಗಳಲ್ಲಿ ನಾವು ಕಟ್ಟಿಕೊಂಡಿರುವ ಧರ್ಮಗಳನ್ನು ಧರ್ಮಗಳೇ ರಕ್ಷಿಸಬೇಕಾಗಿದೆ...
ಹುಷಾರಾಗಿರಿ...ನಿಮ್ಮ ಧರ್ಮದ ವಿಚಾರಕ್ಕೆ ಯಾರಾದರು ಬಂದರೆ ನಿಮಗೂ ಸಿಟ್ಟು ಬರಬಹುದು!!.

Sunday, 3 April 2016

ನನ್ನಂತರಂಗದ ಹಾಯ್ಕುಗಳು



ವಾಟ್ ಇಸ್  ದಿಸ್!...
           ತೀರಾ ಮೊನ್ನೆ ಮೊನ್ನೆಯವರೆಗೂ ನಾರ್ಮಲ್ ಆಗಿದ್ದೆ. ಸಣ್ಣ ಮೈ ಕೈ ನೋವು ಬಂದಂತಾಯ್ತು. ನೋವಿನೊಂದಿಗೆ ಜ್ವರವೂ ಅಡಿ ಇಡುವುದು ಯಾಕೋ ಖಾತ್ರಿಯಾಯಿತು. ನಮ್ಮಂಥವರಿಗೆ ಪ್ರಥಮ ಚಿಕಿತ್ಸೆ ‘ಮೆಡಿಕಲ್ ಅಲ್ವಾ’ ಎನ್ನುತ್ತಾ, ಜ್ವರ, ಮೈ-ಕೈ ನೋವಿಗೊಂದು ಮಾತ್ರೆ ಕೊಡಿ ಎಂದು ಗುಳಂ! ಸ್ವಾಹ ಮಾಡಿದೆ. ಮಾತ್ರೆ ಕೊಟ್ಟವಳ ಕೈಗುಣವೋ ಏನೋ ಯಾವುದು ಬರಬಾರದೆಂದು ಮಾತ್ರೆ ನುಂಗಿದ್ದೇನೋ ಅದಷ್ಟೇ ಅಲ್ಲದೇ ಸಹಪರಿವಾರದಲ್ಲಿರುವ ಎಲ್ಲಾ ಖಾಯಿಲೆ ಮಿತ್ರರು ಪ್ರೀತಿಯಿಂದ ಬಾಚಿ ತಬ್ಬಿಕೊಂಡರು. ಒತ್ತಡದಲ್ಲೇ ಒಂದೆರಡು ದಿನ ಆಫೀಸ್ ಕೆಲಸವೂ ಆಯ್ತು. ಗಂಟಲಲ್ಲಿ ಊಟ ಅಲ್ಲ ನೀರಿಳಿಯುವುದೇ ಕಷ್ಟ ಎನಿಸಿತು. ದ್ವಿತೀಯಾರ್ಧ ಚಿಕಿತ್ಸೆ ಎಂಬಂತೆ ಪಕ್ಕದಲ್ಲೇ ಇದ್ದ ಹೊಸ್ಪಿಟಲ್‍ಗೆ ಓಡಿದೆ. ಒಂದು ಇಂಜೆಕ್ಷನ್ ಕೊಟ್ಟು, ‘ಹೋಗುತ್ತೆ ಬಿಡಿ ಏನೂ ಪ್ರಾಬ್ಲಂ ಇಲ್ಲ, ಟ್ಯಾಬ್ಲೇಟ್ ತಗೋಳಿ’ ಅಂದ್ರು. ಆಯ್ತೆಂದು ಮಾತ್ರೆ ತಂದು ಕುಡಿದೇ ಬಿಟ್ಟೆ. ಆದರೂ ವರ್ಕೌಟ್ ಇಲ್ಲ. ಮಾಮೂಲಿ ಜ್ವರ ದೀರ್ಘ ಮೆರವಣಿಗೆಯಲ್ಲಿ  ಐದನೇ ದಿನಕ್ಕೆ ಬಂದು ನಿಂತಿತು. ಕಳೆದ ಒಂದೂವರೆ ವರ್ಷದ ಹಿಂದೆಯೂ ಇದೇ ಮಾಮೂಲಿ ಜ್ವರ ಗೋಳು ಕೊಟ್ಟಿತ್ತು. ಆಗಲೇ ಸಾಯುತ್ತಿದ್ದೆ. ಆದರೆ ಡಾಕ್ಟರ್ ಹೋರಾಟ, ಅಮ್ಮನ ಹರಕೆಯಿಂದ ಬದುಕಿದ್ದೆ. ಈ ಬಾರಿ ಹಾಗಾಗಲಿಕ್ಕಿಲ್ಲವೆಂದುಕೊಂಡಿದ್ದೆ. ಆದರೂ ಹಾಗೇ ಫೀಲ್ ಆಯ್ತು. ಮನೆಯಲ್ಲಿ ಹೇಳಿದರೆ ಹೆದರುತ್ತಾರೆ. ಹೇಳಲಿಲ್ಲ...! ಹಾಗೋ ಹೀಗೋ ದಿನ ಸಂದೇಶ ಮಾಡುವ ಕೆಲವೊಂದಿಬ್ಬರಿಗೆ ಆರೋಗ್ಯ ಸ್ಥಿತಿ ಹದವಾಗಿದ್ದು ತಿಳಿಯಿತು. ಕೇರ್ ನೆಸ್ ಎಂಬಂತೆ ಸಂದೇಶದಲ್ಲೇ ಕಿರಿ ಕಿರಿಯ ವಿಚಾರಣೆ ಜಾಸ್ತ್ತಿಯಾಯಿತು. ರೆಸ್ಟ್ ಮಾಡೋಣ ಎಂದು ಹಾಸಿಗೆ ಹಿಡಿದೆ. ಮತ್ತೆ ಮತ್ತೆ ಮೆಸೇಜ್‍ಗಳು ಇನ್ ಬಾಕ್ಸ್‍ನಲ್ಲಿ ಸದ್ದುಮಾಡತೊಡಗಿದವು. ಬೇಸತ್ತು, ಯಾರೂ ಡಿಸ್ಟರ್ಬ್ ಮಾಡಬಾರದೆಂದು ವ್ಯಾಟ್ಸಾಪ್‍ನಲ್ಲಿ ಒಂದು ಸಣ್ಣ ಸ್ಟೇಟಸ್ ಬರೆದೆ. ಅಲ್ಲಿಯೇ ಮಾಡಿದ್ದು ಎಡವಟ್ಟು ನೋಡಿ!., ಒಂದಿಬ್ಬರಿಗೆ ತಿಳಿದಿದ್ದ ವಿಚಾರ ಎಲ್ಲರಿಗೂ ತಿಳಿದು ಮರುಘಳಿಗೆ ಸರದಿಯಲ್ಲಿ ವಿಚಾರಣೆ ಪ್ರಾರಂಭವಾಯ್ತು. ಎಂಥಾ ಮೂಡನಯ್ಯ ನಾನು, ಅಷ್ಟಿದ್ದ ರಗಳೆ ತಡೆಯಲು ಹೋಗಿ ಇಷ್ಟು ಮಾಡಿಕೊಂಡೆನಲ್ಲಾ ಎಂದು ನನ್ನಯ ಗೊಡ್ಡುತನಕ್ಕೆ ಬೈದುಕೊಂಡೆ.
            ಗೆಳೆಯರ್ಯಾರೂ ಸೀರಿಯಸ್ ಅಂದುಕೊಳ್ಳಲಿಲ್ಲ. ಅಷ್ಟೋ ಇಷ್ಟೋ ಒನ್ ಸೈಡ್ ಭಾವನೆಗಳನ್ನಿಟ್ಟುಕೊಂಡಿದ್ದ, ಪ್ರೀತಿಯಲ್ಲಿ ಜೋಲಾಡುತ್ತಿದ್ದ ಹುಡುಗಿಯರು ಏನೋ ಪ್ರಳಯವೇ ಆಗಿದೆ ಎನ್ನುವಂತೆ ಗೊಣಗತೊಡಗಿದರು. ನಿನಗೆ ಆರೋಗ್ಯ ವಿಚಾರದಲ್ಲಿ ಜಾಗೃತೆ ಇಲ್ಲ ಯಾವಾಗ ಬುದ್ದಿ ಬರುತ್ತೋ ಏನೋ ಎಂಬಂತೆ ಬೈದರು. ಹೂಃ ಅಂತ ಹೇಳು ಬಂದು ವಿಚಾರಿಸಿಕೊಳ್ತೀವಿ ಅಂತ ಕೆಲವೊಂದಿಬ್ಬರ ಆರ್ತನಾದ. ಎಲ್ಲಿ ಮನೆ!?, ಬಂದೇ ಬಿಡುವೆ ನೋಡಲು..! ಎಂಬಂತೆ ಇನ್ನೊಂದಿಷ್ಟು. ಬೆನ್ನು ಬಿದ್ದ ಮೆಸೇಜ್‍ಗೆ ಬೆನ್ನು ಕೊಟ್ಟು ಮಲಗಿದೆ. ಯಾವುದಕ್ಕೂ ಉತ್ತರಿಸಲಿಲ್ಲ...
            ಸಂಜೆ ಯಾಕೋ ಮಂಕು ಬಡಿದಂತಾಯ್ತು. ಮತ್ತೆ ಮೊಬೈಲ್ ಕೈಗೆತ್ತಿಕೊಂಡೆ. ಮೆಸೇಜ್ ಓದಿ ಅರ್ಧಕ್ಕರ್ಧ ಉತ್ತರವಿತ್ತೆ... ಡಬ್ಬಲ್ ಸುಸ್ತಾಯಿತು. ಬಂದ ಸಂದೇಶಗಳನ್ನು ಓದಿಯೇ ಹೈರಾಣಾದೆ. ಮೈ ಬಿಸಿಗೆ ಮೆಸೇಜ್ ರಿಪ್ಲೈ ಕೂಡ ಕಾರಣ ಏನಿಸಿತು. ಸಾವಾಸ ಸಾಕು ಎಂದು ಮರಳಿ ಮೊಬೈಲ್ ಸೈಲೆಂಟ್ ಇಟ್ಟು ಸುಮ್ಮನಾದೆ. ಈ ವಯಸ್ಸೇ ಹಾಗಲ್ವಾ! ಮತ್ತೇ ಮತ್ತೆ ತಪ್ಪು ಅನಿಸಿದರೂ ಕೆಟ್ಟ ವಿಚಾರದಲ್ಲಿ ಮನಸ್ಸು ಯಾವಾಗಲೂ ಸೆಳೆಯುತ್ತಲೇ ಇರುತ್ತದೆ. ಅನಾವಶ್ಯಕ ಟೈಮ್ ಪಾಸ್‍ಗೆ ಅತಿಹೆಚ್ಚು ಜನ ಮರುಳಾಗಿರುವ ಮೊಬೈಲ್‍ನ್ನು ನೋಡೋಣ ಎನಿಸುತ್ತಿತ್ತು, ಆದರೂ ಕಂಟ್ರೋಲ್ ಮಾಡಿಕೊಂಡೆ. ಪ್ರೀತಿಸುವವರನ್ನು ಯಾಕೆ ದ್ವೇಷಿಸಬೇಕು!?, ದೂರ ಮಾಡೋದು ಬೇಡ ಸೈಡಲ್ಲಿ ಭಾವನೆಯ ಪ್ರೀತಿ ಇರಲಿ ಎಂದು ಹಾಗೇ ಕಣ್ಮುಚ್ಚಿ ಮಲಗಿದೆ.
           ಮನದ ಮೂಲೆಯ ಬಿಳಿಪರದೆಯ ಮೇಲೆ ಯೋಚನಾ ಲಹರಿ ತೇಲಿತು. ಈ ಬದುಕೆ ಹೀಗೆ ಅಲ್ವಾ ಯಾವಾಗ ಏನೂ ಬೇಕಾದರೂ ಆಗಬಹುದು. ಒಮ್ಮೊಮ್ಮೆ ಖುಷಿ, ಒಮ್ಮೊಮ್ಮೆ ದುಃಖ, ಆರೋಗ್ಯ, ಅನಾರೋಗ್ಯ, ಯೋಗ್ಯ, ಅಯೋಗ್ಯ... ಹೀಗೆ ಎಲ್ಲವೂ ಒಂದಿಲ್ಲೊಂದು ಸರಣಿಯಲ್ಲೇ ನಡೆಯುತ್ತಿರುತ್ತದೆ. ಯಾವನಿಗೊತ್ತು ಬದುಕು ಯಾವಾಗ ಅಂತ್ಯವಾಗುತ್ತೆ ಅಂತ. ನನ್ನೇ ನೋಡಿ ಹೋದ ವರ್ಷವೇ ಅಂತ್ಯ ಕಾಣಬೇಕಾಗಿದ್ದವನು ಇನ್ನೂ ಬದುಕಿರುವೆ. ಬದುಕಿಲ್ಲವೆಂದಿದ್ದರೆ ಇಷ್ಟೆಲ್ಲಾ ಮಾಡಲಾಗುತ್ತಿರಲಿಲ್ಲ. ನಾನು ಯಾರೆಂದು ನಿಮಗೇನು!, ನಮ್ಮವರಿಗೆ ಗೊತ್ತಿರುತ್ತಿರಲಿಲ್ಲ. ಒಂದಿಷ್ಟು ಅಳು, ಒಂದಿಷ್ಟು ಮೌನ, ಒಂದಿಷ್ಟು ನೆನಪಿನೊಂದಿಗೆ ನಾನು ಕೂಡ ಗೋಡೆಯ ಮೇಲಿನ ಫೋಟೋವಾಗುತ್ತಿದ್ದೇನೋ ಏನೋ...!
     ವಿಷಯ ಅದಲ್ಲ... ಎಲ್ಲರೂ ಒಂದಲ್ಲ ಒಂದು ದಿನ ಸಾಯುವುದು ಗ್ಯಾರಂಟಿ... ಅಲ್ವಾ!??...
ಹೌದು..!ಅಂತೀರಾ...
ಇದರೊಳಗೆ ಇನ್ನೊಂದು ಸತ್ಯ ಇದೆ!...
ಏನ್ ಗೊತ್ತಾ!?,
           ನಾನ್ ಮಾತ್ರ್ರಾ ಅಲ್ಲಾ ನೀವು ಕೂಡ ಸಾಯ್ತೀರಾ...! ಇದು ಪಕ್ಕಾ ಗ್ಯಾರಂಟಿ. ಕೆಲವೊಂದು ವಿಚಾರಗಳು ಗೊತ್ತಿದ್ದರೂ ಇನ್ನೊಬ್ಬರೂ ಹೇಳಿದ ಮೇಲೆ ಕನ್‍ಫರ್ಮ್ ಆಗೋದಂತೆ... ಇದು ಕೂಡ ಹಾಗೆ. ಅಂತ್ಯ ಎಲ್ಲರಿಗೂ ಎಲ್ಲದಕ್ಕೂ ಕಟ್ಟಿಟ್ಟ ಬುತ್ತಿ. ಇರುವಷ್ಟು ದಿನ ಹೊಡೆದಾಡ್ತೀವಿ, ನಗ್ತೀವಿ, ರೇಗಿಸ್ತೀವಿ, ಪಾಪ-ಪುಣ್ಯ ಮಾಡ್ತೀವಿ, ಪಾ..ಪಾ ಅಂತೀವಿ, ರೋಗಿಯಾಗ್ತೀವಿ, ರೇಗಿ ನುಲಿತೀವಿ, ಸುಖ ಪಡ್ತೀವಿ, ಕಷ್ಟ ಅನುಭವಿಸ್ತೀವಿ, ಹೀಗೆ ಎಲ್ಲದಕ್ಕೂ ಅಂತ್ಯವಿದೆ... ಸಾಯ್ತೀರಿ ಅಂದಿದ್ದಕ್ಕೆ ಭಯ ಪಡಬೇಡಿ. ಹಾಗೆಯೇ ಜೀವದ ಬಗ್ಗೆಯೂ ಭಯ ಬೇಡ. ಜೀವನವೆಂದರೆ ಜೈವಿಕ ಜಗತ್ತಿನ ವ್ಯಾಪಾರ. ಹುಟ್ಟು ಮತ್ತು ಸಾವು ಇವುಗಳ ನಡುವೆ ಜೀವಿಗಳ ಅಭಿವೃದ್ಧಿ ಮತ್ತು ಬದುಕಿನ ಹೋರಾಟದ ಪ್ರಕ್ರೀಯೆ.
             ಸಾಧು ಸಂತರೇ ಹೇಳಿರುವಂತೆ ಜೀವನ ನಾಲ್ಕು ದಿನದ ಹೋರಾಟ. ಅಲ್ಲಿ ಸಂಪಾದಿಸಬೇಕೆಂದು ಅನಗತ್ಯವಾಗಿ ಹೊಡೆದಾಡುತ್ತೇವೆ. ಒಮ್ಮೊಮ್ಮೆ ಎಷ್ಟಿದ್ದರೂ ಏನೂ ಮಾಡಲಾಗದಂತ, ಇದ್ದದ್ದನ್ನು ಕರಗಿಸಲಾಗದಂತ ದುರವಸ್ಥೆ. ಸರಿಯಾಗಿ ಗಮನಿಸಿದರೆ ಎಲ್ಲವೂ ಜೀರೋ... ಯಾರೋ ನಮಗಿಂತ ಮುಂದೆ ಸಾಗುವರೆಂದೋ, ನಮ್ಮನೆ ಜಾಗ ಅವರ ಮನೆಯ ಆರ್ಟಿಸಿ ಅಲ್ಲಿ ನಮೂದಾಗಿದೆಯೆಂತಲೋ, ಯಾರು ಸತ್ತರೆ ನಮಗೇನು ದುಡ್ಡು ಮಾಡಬೇಕು ಅಷ್ಟೇ ಎಂದೋ, ನಿಮ್ಮ ಕಷ್ಟ ನಮಗೆ ಬೇಡ, ನನಗೆ ಬರೋ ದುಡ್ಡು ಬರಬೇಕು ಅಂದೋ, ಮೊದಲು ನಾವ್ ಸೇಫ್ ಆಗಬೇಕು ಉಳಿದವರ ಚಿಂತೆ ನಮಗೆ ಬ್ಯಾಡ ಅಂತಲೋ,ಮಕ್ಕಳ್ಯಾರೂ ಇಲ್ಲ, ಕೈಯಲ್ಲಿ ದುಡ್ಡು ಬೇಕಾದಷ್ಟಿದೆ ಆದರೂ ಆ ಬಾಡಿಗೆ ಮನೆಯವ ಇನ್ನೂ ಬಾಡಿಗೆ ಕೊಟ್ಟಿಲ್ಲ, ಯಾಮಾರಿಸುತ್ತಾನೆಂತಲೋ, ವಸ್ತು ಹಾಳಾದರೆ ಕೊಟ್ಟ ದುಡ್ಡು ಮಾರಾಟಗಾರನ ಅಕೌಂಟ್‍ಗೆ ಹೋಗಿ ಅವನೇನಾದರೂ ಬಿಲ್ಡಿಂಗ್ ಕಟ್ಟುತ್ತಾನೆ ಎನ್ನುವ ಭಯದ ಚೌಕಾಸಿಗೋ, ಬೇರೆಯವರಿಗೆ ಅನ್ನ ಹಾಕಿದರೆ ನಮ್ಮನೆಗೆ ದಿನಾ ಬರುತ್ತಾರೆಯೇನೋ ಎನ್ನುವ ಮುಜುಗರದ ಅಸೂಯೆಗೋ, ಹೀಗೆ ಒಂದಿಲ್ಲೊಂದರಲ್ಲಿ ಬದುಕನ್ನು ಹೆಣಗಾಡುತ್ತಲೇ ಇರುತ್ತೇವೆ.

ಎಣ್ಣೆ ಕಾಣದಂಥ ಶಿರ...
ಕಿತ್ತು ಬಂದಿರೋ ಕೆರ...
ಬಣ್ಣ ಮಾಸಿರೋ ಚರ...
ಅನ್ನ ಕಾಣದ ಉದರ...
ಕಳೆ ಇಲ್ಲದ ಮುಖ...
ರೇಖೆ ಅಳಿಸಿರೋ ಕೆರ...
ಕೊಳೆ ತುಂಬಿದ ಸುಖ...
ಕೊನೆ ಕಾಣದ ದುಃಖ...
ಇಷ್ಟೇ ಜೀವನ!!!...
             ಎಲ್ಲವೂ ತಿಳಿಯುವುದು ಸಂತೋಷದ ಶುಭ ಸಮಯ ಅಲ್ಲ, ಬದುಕು ಕೊನೆಯಾಗಬಹುದೋ ಏನೋ ಎನ್ನುವ ವಿದಾಯ ಮುಹೂರ್ತ ತಬ್ಬಿಕೊಳ್ಳುವಾಗಲೆ...!!!.   ರತಿ ಕ್ರೀಡೆಯಲ್ಲಿ, ಮೈಥುನ ಸಂಧರ್ಭದಲ್ಲಿ, ಆಹಾ!! ಎಂತಾ ಸುಖವಪ್ಪಾ ಜೀವನವೆಂದೆನಿಸಿದ ಭಾವಗಳೆಲ್ಲವೂ ರೋಗ ಹಿಡಿದು ಅಲ್ಲೊಂದು ಇಲ್ಲೊಂದು ಇಂಜೆಕ್ಷನ್ ಚುಚ್ಚಿಸಿಕೊಳ್ಳುವಾಗ ನರಕವಪ್ಪಾ ಅಂತನಿಸದೇ ಇರದು. ಎಲ್ಲವೂ ಕಾಲ ಘಟ್ಟವಷ್ಟೇ. ಕಾಲಕ್ಕೆ ಕಾಲವೇ ತಲೆಭಾಗುವುದಂತೆ. ಇನ್ನೂ ನಾವು ನೀವೂ ಯಾವ ಲೆಕ್ಕ. ಸರಿಯಿರುವಾಗ ತಿಳಿಯದ ಜೀವನ ಹದಗೆಟ್ಟಾಗ ತಿಳಿಯುವುದೇ ಜಾಸ್ತಿ...